ಬೆಂಗಳೂರು: ಚಿನ್ನ ಕಳ್ಳರು, ಮನೆ ದರೋಡೆ ಮಾಡೋರೆಲ್ಲ ಫಾರ್ ಎ ಚೇಂಚ್ ಅಂತ ಈರುಳ್ಳಿ ಕಳ್ಳತನಕ್ಕೆ ಶಿಫ್ಟ್ ಆಗಿದ್ದಾರೆ ಅನಿಸುತ್ತಿದೆ. ಈಗ ರಾಜ್ಯದಲ್ಲಿ ಈರುಳ್ಳಿ ಕಳ್ಳರದ್ದೇ ಕಾರುಬಾರು.
ಬೆಂಗಳೂರಿನ ಎಪಿಎಂಸಿಯಲ್ಲಿ ಮಧ್ಯರಾತ್ರಿ ಕಂಬಳಿ ಹೊದ್ದು ಬಂದ ವ್ಯಕ್ತಿಯೊಬ್ಬ ಮೂಟೆ ಮೂಟೆ ಈರುಳ್ಳಿಯನ್ನು ಕಳ್ಳತನ ಮಾಡಿಕೊಂಡು ಹೋದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.
ಮೂವತ್ತು ಸಾವಿರ ಬೆಲೆಯ ಈರುಳ್ಳಿಯನ್ನು ಕಳವು ಮಾಡಿದ್ದಾನೆ. ಮರುದಿನ ಕಳ್ಳತನಕ್ಕೆ ಬಂದಾಗ ಮಾತ್ರ ಅಲರ್ಟ್ ಆಗಿದ್ದ ಮಾಲೀಕ, ಈ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಕಳ್ಳ, ಬಿಟ್ಟು ಬಿಡಿ ತಪ್ಪಾಯ್ತು ಎಂದು ಗೊಳೋ ಅಂತ ಅತ್ತು ಕರೆದು ರಂಪಾಟ ಮಾಡಿದ್ದಾನೆ.
ಕೊನೆಗೆ ಈರುಳ್ಳಿ ಕಳ್ಳನನ್ನು ಎಪಿಎಂಸಿ ವರ್ತಕರು ಪೊಲೀಸರಿಗೆ ಒಪ್ಪಿಸಿದ್ದಾರೆ.