ಬೆಳಗಾವಿ(ಚಿಕ್ಕೋಡಿ): ಅಥಣಿ ಪಟ್ಟಣದ ವಿಕ್ರಮಪುರ ನಗರದ ಚರಂಡಿಯಲ್ಲಿ ಎರಡು ತಲೆ ಬುರುಡೆ ಪತ್ತೆಯಾಗಿದೆ.
ಇಂದು ವಿಕ್ರಮಪುರ ನಗರದ ನಿವಾಸಿ ಡಾ.ರಾಮ್ ಕುಲಕರ್ಣಿ ಎಂಬುವವರ ಮನೆಯ ಮುಂದಿನ ಚರಂಡಿಯಲ್ಲಿ ತಲೆ ಬುರುಡೆ ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಚರಂಡಿಯಲ್ಲಿ ಎರಡು ತಲೆ ಬುರುಡೆ ಸಿಕ್ಕಿದೆ.
ಎರಡು ತಲೆ ಬುರುಡೆಯನ್ನು ಚರಂಡಿಯಿಂದ ಹೊರತೆಗೆದಾಗ ಸ್ಥಳೀಯರು ಅದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಮವಾಸ್ಯೆ ಇದ್ದ ಕಾರಣಕ್ಕೆ, ವಾಮಾಚಾರ ಮಾಡಲು ತಲೆ ಬುರುಡೆಗಳನ್ನು ಉಪಯೋಗಿಸಿಕೊಂಡು ಬಳಿಕ ಅದನ್ನು ಚರಂಡಿಯಲ್ಲಿ ಎಸೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಯಾರು ಈ ಬುರುಡೆಗಳನ್ನು ಚರಂಡಿಯಲ್ಲಿ ಎಸೆದಿದ್ದು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಲೆ ಬುರುಡೆ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv