ಹುಬ್ಬಳ್ಳಿ: ಹಣ ಅಂದ್ರೆ ದೇವ್ರನ್ನೂ ಬಿಡಲ್ಲ ಅನ್ನೋದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯಲ್ಲಾಗಿರುವ ಕೃತ್ಯ. ಭಕ್ತನ ವೇಷದಲ್ಲಿ ಪ್ಯಾಂಟ್-ಶರ್ಟ್, ಜರ್ಕಿನ್, ಬ್ಯಾಗ್ ಹಾಕ್ಕೊಂಡು ಬಂದ ವ್ಯಕ್ತಿಯೊಬ್ಬ ಗಣಪನ ಮುಂದೆ ಇಟ್ಟಿದ್ದ ಹುಂಡಿಯನ್ನೇ ಎತ್ಕೊಂಡು ಎಸ್ಕೇಪ್ ಆಗಿದ್ದಾನೆ.
- Advertisement 2
ಚತುರ್ಥಿ ಪ್ರಯುಕ್ತ ಸಾರ್ವಜನಿಕವಾಗಿ ಗಣಪತಿಯನ್ನು ಕೂರಿಸಲಾಗಿತ್ತು. ಭಕ್ತರು ಕಾಣಿಕೆ ಹಾಕಲಿ ಅಂತಾ ಕಾಣಿಕೆ ಡಬ್ಬವನ್ನೂ ಇಡಲಾಗಿತ್ತು. ಆದ್ರೆ ಯಾರೂ ಇಲ್ಲದ ವೇಳೆ ಪೆಂಡಾಲ್ ಒಳಗೆ ಬಂದ ಕಳ್ಳ ತನ್ನ ಜರ್ಕಿನ್ ತೆಗೆದು ಅದರೊಳಗೆ ಹುಂಡಿಯನ್ನು ಮುಚ್ಚಿ ಎತ್ಕೊಂಡು ಹೋಗಿದ್ದಾನೆ.
- Advertisement 3
- Advertisement 4
ಹುಬ್ಬಳ್ಳಿಯ ದಾಜೀಬಾನ ಪೇಟೆಯ ಗವಳಿಗಲ್ಲಿಯ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶನ ಮುಂದಿನ ಹುಂಡಿ ಕಳ್ಳತನವಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
https://www.youtube.com/watch?v=D-LdSLtKcZc&feature=youtu.be