ವ್ಯಕ್ತಿಯನ್ನು ಕೊಲೆಗೈದು ಟಾಟಾ ಏಸ್ ನಲ್ಲಿ ಹಾಕಿ ಎಸ್ಕೇಪ್!

Public TV
1 Min Read
BNG 3

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಟಾಟಾ ಏಸ್ ವಾಹನದಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಡೆದಿದೆ.

ಬಂಗಾರಪೇಟೆ ನಗರದ ಅಪ್ರೊಜ್(30) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಬಿಎಂಟಿಸಿ ಡಿಪೋ ಬಳಿ ಟಾಟಾ ಏಸ್ ವಾಹನದಲ್ಲಿ ಇವರ ಶವ ಪತ್ತೆಯಾಗಿದೆ.

BNG 1

ಮೂತ್ರ ವಿಸರ್ಜನೆಗೆಂದು ಬಂದ ಸಾರ್ವಜನಿಕರು ಶವವನ್ನು ಕಂಡು ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಅಪ್ರೋಜ್ ಗೆ ನಾಲ್ಕು ಜನ ಅಣ್ಣ-ತಮ್ಮಂದಿರಲ್ಲಿ ಇವರು ಎರಡನೆಯವರಾಗಿದ್ದಾರೆ. ಅಪ್ರೋಜ್ ಟಾಟಾ ಏಸ್ ವಾಹನ ಚಾಲಕನಾಗಿದ್ದು, ತರಕಾರಿಯನ್ನು ಕೋಲಾರ ಮಾರುಕಟ್ಟೆಗೆ ರವಾನೆ ಕೆಲಸ ಮಾಡುತ್ತಿದ್ದರು. ಸದ್ಯ ಅಪ್ರೋಜ್ ಅವರು ತನ್ನ ವಾಹನದಲ್ಲಿಯೇ ಕೊಲೆಯಾಗಿ ಪತ್ತೆಯಾಗಿದ್ದಾರೆ.

BNG

ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *