- ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರ
ಚಿಕ್ಕಮಗಳೂರು: ಕಾಡುಕೋಣದ (Wild Gaur) ದಾಳಿಯಿಂದ ವೃದ್ಧ ಸಾವನ್ನಪ್ಪಿದ ಘಟನೆ ಕಳಸ (Kalasa) ತಾಲೂಕಿನ ಲಲಿತಾದ್ರಿ ಗ್ರಾಮದಲ್ಲಿ ನಡೆದಿದೆ.
ಕಾಡುಕೋಣದ ದಾಳಿಯಿಂದ ಮೃತಪಟ್ಟ ವೃದ್ಧರನ್ನು ರಘುಪತಿ (73) ಎಂದು ಗುರುತಿಸಲಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕಾಡುಕೋಣ ದಾಳಿ ನಡೆಸಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ – ಕೇಂದ್ರದಿಂದ ಅನುಮತಿ ಬಂದ ಬಳಿಕ ನಿರ್ಧಾರ: ಡಿಕೆಶಿ
ಕರೆ ಮಾಡಿದ ವೇಳೆ ಫೋನ್ ರಿಸೀವ್ ಮಾಡದಿದ್ದಾಗ ಕುಟುಂಬಸ್ಥರು ತೋಟದಲ್ಲಿ ಹುಡುಕಿದ್ದಾರೆ. ಈ ವೇಳೆ ಕಾಡುಕೋಣದ ದಾಳಿಯಿಂದ ಅವರು ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಮಧ್ಯಾಹ್ನ ಮನೆಯಿಂದ ಕಾಫಿ ತೋಟಕ್ಕೆ ತೆರಳಿದ್ದ ರಘುಪತಿ, ತೋಟದ ಸುತ್ತ 6 ಅಡಿ ಬೇಲಿ ಮಾಡಿದ್ದರು. ಅದನ್ನು ದಾಟಿ ಬಂದು ದಾಳಿ ಮಾಡಿದೆ.
ಗ್ರಾಮದ ಸುತ್ತಮುತ್ತ ನಿರಂತರ ಕಾಡುಕೋಣಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಕಾಡುಕೋಣಗಳು ರಸ್ತೆಗಳಲ್ಲಿಯೂ ಅಡ್ಡಲಾಗಿ ನಿಲ್ಲುತ್ತಿವೆ. ಹಲವು ಬಾರಿ ಮನವಿ ಮಾಡಿದ್ರು ಅರಣ್ಯ ಇಲಾಖೆ (Forest Department) ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾದವರಿಗೆ ನ್ಯಾಯ ಕೊಡಿ: ಆರ್.ಅಶೋಕ್
ಅರಣ್ಯ ಇಲಾಖೆ ಅಧಿಕಾರಿಗಳು ರಘುಪತಿಯವರು ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಮೃತ ರಘುಪತಿ ಪತ್ನಿ ರೇವತಿ ಅವರಿಗೆ 15 ಲಕ್ಷ ರೂ. ಚೆಕ್ ನೀಡಿ ಸಾಂತ್ವನ ಹೇಳಿದ್ದಾರೆ.