ಮಡಿಕೇರಿ: ಕಾವಾಡಿಯೊರ್ವರನ್ನು ಸಾಕಾನೆಯೊಂದು ತನ್ನ ದಂತದಿಂದ ತಿವಿದು ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ.
ಶಿಬಿರದಲ್ಲಿ ನವೀನ್(30) ಕಾವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸಾಕಾನೆಯಿಂದ ತಿವಿತಕ್ಕೊಳಗಾಗಿದ್ದು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನವೀನ್ ನನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿಲಾಗಿದೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಇಂದು ಬೆಳಗ್ಗೆ ದುಬಾರೆಯ ಸಾಕಾನೆ ಶಿಬಿರದಲ್ಲಿ ಸಾಕಾನೆಯಾದ ಕಾರ್ತಿಕ್ ಎಂಬ 9 ವರ್ಷದ ಗಂಡಾನೆಗೆ ಈ ಗಾಯಾಳು ನವೀನ್ ನೀರು ಕುಡಿಸಲು ಹೋದ ಸಂದರ್ಭದಲ್ಲಿ ತನ್ನ ದಂತದಿಂದ ತಿವಿಯುವ ಮೂಲಕ ತನ್ನ ಪುಂಡತನವನ್ನು ಪ್ರದರ್ಶಿಸಿದೆ. ಈ ಮೊದಲು ಕೂಡ 2 ವರ್ಷಗಳ ಹಿಂದೆ ಇದೆ 9 ವರ್ಷದ ಸಾಕಾನೆ ಕಾರ್ತಿಕ್ನ ದಾಳಿಯಿಂದಾಗಿ ಇಬ್ಬರೂ ಮಾವುತರಾದ ಅಣ್ಣಿ ಮತ್ತು ಮಣಿಯಾ ಎಂಬ ಮಾವುತರು ಸಾವನ್ನಪ್ಪಿದರು. ಇನ್ನೂ ಕೂಡ ಮದದ ಪ್ರಾಯಕ್ಕೆ ಬಾರದ 9 ವರ್ಷ ವಯಸ್ಸಿನ ಕಾರ್ತಿಕ್ ಎಂಬ ಸಾಕಾನೆ ಆಗಾಗ ಇಂತಹ ಪುಂಡತನವನ್ನು ಪ್ರದರ್ಶಿಸುತ್ತಿರುವುದು ಮಾವುತರು ಹಾಗೂ ಕಾವಾಡಿಗಳಿಗೆ ಮಾತ್ರವಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ಕೂಡ ತಲೆನೋವಾಗಿ ಪರಿಣಮಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv