ತಿರುವನಂತರಪುರಂ: ಮಹಡಿಯೊಂದರ ಲಿಫ್ಟ್ ತಲೆಗೆ ಸಿಲುಕಿಕೊಂಡು ವ್ಯಕ್ತಿ ಮೃತಪಟ್ಟ ಘಟನೆ ಕೇರಳದ ತಿರುವನಂತರಪುರದ ಸ್ಯಾನಿಟರಿ ಅಂಗಡಿಯಲ್ಲಿ ನಡೆದಿದೆ.
ನೇಮೊಮ್ ನಿವಾಸಿ ಸತೀಶ್ ಕುಮಾರ್(54) ಮೃತ ವ್ಯಕ್ತಿ. ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಸತೀಶ್ ಕುಮಾರ್ ಅವರು ನೆಲಮಹಡಿ ಮತ್ತು 4ನೇ ಮಹಡಿ ನಡುವಿನ ಕಾರ್ಗೋ ಲಿಫ್ಟ್ನಲ್ಲಿ ಸರಕುಗಳನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸತೀಶ್ ಕುಮಾರ್ ಕಳೆದ ಕೆಲವು ವರ್ಷಗಳಿಂದ ಈ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ಒಬ್ಬರೇ ಲಿಫ್ಟ್ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಎಷ್ಟೋತ್ತಾದರೂ ಸತೀಶ್ ಕುಮಾರ್ ಬರದಿದ್ದನ್ನು ನೋಡಿದ ಇತರ ಸಿಬ್ಬಂದಿ ಸಂಶಯಗೊಂಡು ಲಿಫ್ಟ್ನತ್ತಿರ ಬಂದಾಗ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!
ತಿರುವನಂತಪುರಂ ಘಟಕದ ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಲಿಫ್ಟ್ನಲ್ಲಿದ್ದಾಗ ಏನನ್ನೋ ಪರೀಕ್ಷಿಸಲು ಆತ ಕುತ್ತಿಗೆಯನ್ನು ಹೊರಗೆ ಹಾಕಿದ್ದನು. ಈ ಸಮಯದಲ್ಲಿ ಲಿಫ್ಟ್ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಅಗ್ನಿ ಶಾಮಕ ದಳದ ತಂಡ ಲಿಫ್ಟ್ನಿಂದ ಹೊರ ತೆಗೆಯುವ ವೇಳೆಗೆ ಆತ ಸಾವನ್ನಪ್ಪಿದ್ದನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!