ಬೆಳಗಾವಿ: ತನಗೆ ಮದುವೆಯಾಗಿಲ್ಲ ಎಂದು ಯುವತಿಯೊಬ್ಬಳಿಗೆ ನಂಬಿಸಿ, ಅವಳಿಗೊಂದು ಮಗು ಕರುಣಿಸಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಮೇಶ್ ಜಂಗಣ್ಣನವರ್ ಮೋಸ ಮಾಡಿದ ವ್ಯಕ್ತಿ. ಒಂದು ವರ್ಷದಿಂದ ಟ್ರ್ಯಾಕ್ಟರ್ ಚಾಲಕನಾಗಿದ್ದ ರಮೇಶ್ ತನ್ನೂರು ಗೋಕಾಕ್ ತಾಲೂಕಿನ ಉರಬಿನಟ್ಟಿ ಗ್ರಾಮದಿಂದ ಬೆಳಗಾವಿಗೆ ಬಂದಿದ್ದ. ಈ ಸಂದರ್ಭದಲ್ಲಿ ಅನಗೋಳದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಇಂತಹ ಸಂದರ್ಭದಲ್ಲಿ ಮನೆ ಪಕ್ಕದ ಅಮಾಯಕ ಯುವತಿಯ ಸವಿತಾಳನ್ನು ನಂಬಿಸಿ ಪ್ರೀತಿಯ ಬಲೆಗೆ ಬಿಳಿಸಿಕೊಂಡಿದ್ದ. ತನಗೆ ಇನ್ನೂ ಮದುವೆಯಾಗಿಲ್ಲ ನಾನೊಬ್ಬ ಬ್ಯಾಚುಲರ್ ಎಂದು ಸವಿತಾಳ ಮುಂದೆ ಹೇಳಿಕೊಂಡಿದ್ದ.
ರಮೇಶ್ ಮಾತನ್ನು ನಂಬಿದ್ದ ಸವಿತಾ ಈತನ ಪ್ರೀತಿಗೆ ಮರುಳಾಗಿ ಹೆತ್ತವರ ವಿರೋಧದ ನಡುವೆಯು ಮನೆ ಬಿಟ್ಟು ಬಂದಿದ್ದಳು. ಈ ಸಂದರ್ಭದಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ. ಅಷ್ಟೇ ಅಲ್ಲದೇ ಇವಳೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಕೊನೆಗೆ ಮದುವೆಯಾಗದೇ ಸವಿತಾಗೆ ಒಂದು ಹೆಣ್ಣು ಮಗು ಕುರಣಿಸಿದ್ದ. ಮಗು ಜನಿಸಿದ ನಂತರ ಸವಿತಾಳ ಜತೆಗೆ ಜಗಳ ತೆಗೆದು ಈಗ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಹೋಗುವಾಗ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.
ರಮೇಶ್ ಗೋಕಾಕ್ ನಲ್ಲಿ ಮತ್ತೊಬ್ಬಳ ಜೊತೆಗೆ ಮದುವೆಯಾಗಿದ್ದನು. ಸವಿತಾಳನ್ನು ಪ್ರೀತಿಸುವ ಮುನ್ನ ಈತನಿಗೆ ಮೂರು ಜನ ಮಕ್ಕಳು ಸಹ ಇದ್ದರು. ಆದರೇ ತನಗೆ ಮದುವೆಯಾಗಿಲ್ಲ ಎಂದು ಸವಿತಾಳ ನಂಬಿಸಿಕೊಂಡೇ ಬಂದಿದ್ದನು. ಆದರೆ ಯಾವಾಗ ಸವಿತಾಳ ಆಕರ್ಷಣೆ ಕಡಿಮೆ ಆಯ್ತೋ ತನ್ನೂರಿನಲ್ಲಿದ್ದ ಹೆಂಡತಿಯನ್ನು ಕರೆದುಕೊಂಡು ಬಂದ ಗಲಾಟೆ ಮಾಡಿಸಿದ್ದಾನೆ. ಈತ ನಿಜ ಬಣ್ಣ ಬಯಲಾಗುತ್ತಿದ್ದಂತೆ ಸವಿತಾ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಈ ಬಗ್ಗೆ ಸವಿತಾ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜತೆಗೆ ಬೆಳಗಾವಿಯ ಸದಾಶಿವ ನಗರದಲ್ಲಿ ಇರುವ ಸಮೃದ್ಧಿ ಸೇವಾ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾಳೆ. ಪ್ರೀತಿಗಾಗಿ ಪೋಷಕರ ಧಿಕ್ಕರಿಸಿ ಬಂದಿದ್ದರಿಂದ ಸದ್ಯ ಅವರು ಸವಿತಾಳ ಹತ್ತಿರ ಸುಳಿಯುತ್ತಿಲ್ಲ. ಇನ್ನೂ ಕೊನೆವರೆಗೂ ನಿನಗೆ ಬಾಳು ಕೊಡುತ್ತೇನೆ ಎಂದು ಪ್ರಮಾಣ ಮಾಡಿದ್ದ ಪ್ರಿಯಕರ ರಮೇಶ್ ಎಲ್ಲಿದ್ದಾನೆ ಎನ್ನುವುದು ತಿಳಿದುಬಂದಿಲ್ಲ. ಆದರೇ 7 ತಿಂಗಳು ಪುಟ್ಟ ಮಗುವನ್ನು ತೊಳಲ್ಲಿ ಹಿಡಿದುಕೊಂಡು ದಿಕ್ಕು ತೋಚದೆ ಕುಳಿತುಕೊಂಡಿದ್ದಾಳೆ.