ಆಟೋ ಬಾಡಿಗೆ ಕೇಳಿದ್ದಕ್ಕೆ ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದ

Public TV
1 Min Read
CKM CHAKU IRITHA

– ಬಂಡೆಗಳ ಮಧ್ಯೆ ಅವಿತು ಕುಳಿತಿದ್ದ ಆರೋಪಿ ಅರೆಸ್ಟ್

ಚಿಕ್ಕಮಗಳೂರು: ಬಾಡಿಗೆ ಹಣ ಕೇಳಿದ್ದಕ್ಕೆ ಆಟೋ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟಿಮನೆ ಗ್ರಾಮದಲ್ಲಿ ನಡೆದಿದೆ.

ಹರೀಶ್ ಹಲ್ಲೆಗೊಳಗಾದ ಆಟೋ ಚಾಲಕ. ಮಕ್ಕಿ ಮನೆ ನಿವಾಸಿ ಆರೋಪಿ ದಿನೇಶ್ ಎಂಬಾತ ಶನಿವಾರ ರಾತ್ರಿ ಕೊಪ್ಪದಿಂದ ಹರೀಶ್ ಎಂಬವರ ಆಟೋವನ್ನ ಮಕ್ಕಿ ಮನೆಗೆ ಬಾಡಿಗೆಗೆ ಕರೆತಂದಿದ್ದನು. ಮನೆ ಬಂದ ಮೇಲೆ ಆಟೋ ಚಾಲಕ ಹರೀಶ್ ಬಾಡಿಗೆ ಕೇಳಿದ್ದಾನೆ. ಆಟೋದಿಂದ ಇಳಿದ ಆರೋಪಿ ದಿನೇಶ್ ಏಕಾಏಕಿ ಆಟೋ ಚಾಲಕ ಹರೀಶ್ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

ಇರಿತಕ್ಕೊಳಗಾದ ಚಾಲಕ ಹರೀಶ್ ಕೂಗಾಡಿದ ಮೇಲೆ ಸ್ಥಳಿಯರು ಹರೀಶ್‍ನನ್ನ ಜಯಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ದಿನೇಶ್ ಕಾಡಿನಲ್ಲಿ ಬಂಡೆಗಳ ಮಧ್ಯೆ ಅವಿತು ಕುಳಿತಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಜಯಪುರ ಪೆÇಲೀಸರು ಅವಿತು ಕುಳಿತಿದ್ದ ಆರೋಪಿ ದಿನೇಶ್‍ನನ್ನು ಭಾನುವಾರ ಸಂಜೆ ಬಂಧಿಸಿದ್ದಾರೆ.

ಇರಿತಕ್ಕೊಳಗಾದ ಹರೀಶ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪದ ಹರ್ಷಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *