ಮಮತಾ ಬ್ಯಾನರ್ಜಿ ಕನ್ನಡಿಗರಲ್ಲಿ ಕ್ಷಮೆ ಕೋರಬೇಕು: ಸಿಟಿ ರವಿ

Public TV
1 Min Read
mamata c t Ravi

ಬೆಂಗಳೂರು: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರ್ತವ್ಯ ನಿರತ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗೆ ಅಗೌರವ ಸೂಚಿಸಿದ್ದಕ್ಕೆ ಸಾರ್ವಜನಿಕವಾಗಿ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಂದು ಟ್ವಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

ಸರ್ವಾಧಿಕಾರತ್ವವನ್ನು ಪಶ್ಚಿಮ ಬಂಗಾಳದ ನಿಮ್ಮ ಪಕ್ಷದಲ್ಲಿ ತೋರಿಸಿ, ಕರ್ನಾಟಕದಲ್ಲಿ ಅಲ್ಲ. ನಿಮ್ಮ ಕೈಯಲ್ಲಿ ಕೆಲಸ ಮಾಡುವರಿಗೆ ತಾವು ದೆವ್ವದ ಅಡಿಯಲ್ಲಿದ್ದೇವೆ ಎಂಬುವುದು ಗೊತ್ತಿಲ್ಲ ಎಂದು ಸಿ.ಟಿ.ರವಿ ವ್ಯಂಗ್ಯ ಮಾಡಿದ್ದಾರೆ.

Mamatha garam

ಆಗಿದ್ದೇನು?
ಬುಧವಾರ ಪದಗ್ರಹಣಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಬೆಂಗಳೂರಿನ ಟ್ರಾಫಿಕ್ ಬಿಸಿ ತಟ್ಟಿತ್ತು. ಟ್ರಾಫಿಕ್ ನಲ್ಲಿ ಸಿಲುಕಿದ್ದ ಸಿಎಂ ಸಮಾರಂಭಕ್ಕೆ ತಡವಾಗುತ್ತೆಂದು ಅರಿತು ಕಾರಿನಿಂದ ಇಳಿದು ಕೆಲವು ಮೀಟರ್ ಗಳಷ್ಟು ನಡೆದುಕೊಂಡು ಬಂದ್ರು. ವೇದಿಕೆಯತ್ತ ಆಗಮಿಸುತ್ತಿದ್ದಂತೆ ಎದುರಾದ ಡಿಐಜಿ ನೀಲಮಣಿ ರಾಜು ಮೇಲೆ ಹರಿಹಾಯ್ದರು. ಹಾಗೇ ಮುಂದೆ ನಿಂತಿದ್ದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ನೂತನ ಸಿಎಂ ಕುಮಾರಸ್ವಾಮಿ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *