ಉಡುಪಿ: ಮಲ್ಪೆ ಬಂದರಿನಿಂದ ಹೋರಾಟ 7 ಮೀನುಗಾರರು ಕಣ್ಮರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ಒಂದು ವೈರಲಾಗಿದೆ.
ಗೋವಾ ರಾಜ್ಯದ ಕೊಂಕಣಿ ಮಾತನಾಡುವ ಮೀನುಗಾರನ ಧ್ವನಿ ಎನ್ನಲಾಗಿದ್ದು, ಮೀನುಗಾರನ ಆಡಿಯೋದಲ್ಲಿ ಮಹತ್ವದ ಮಾಹಿತಿಯಿದೆ. ನಾಪತ್ತೆಯಾದ 8ನೇ ದಿನಕ್ಕೆ ಬೋಟು ನಾನು ನೋಡಿದ್ದೇನೆ. ಮಹಾರಾಷ್ಟ್ರ ಬಂದರಿನಿಂದ ಕೆಲವೇ ದೂರದಲ್ಲಿ ಕಣ್ಣಿಗೆ ಬಿತ್ತು. ಸಮುದ್ರದಲ್ಲಿ ನಿಂತಿದ್ದ ಬೋಟಿನ ಮೇಲೆ ನಾನು ಟಾರ್ಚ್ ಲೈಟ್ ಹಾಯಿಸಿದ್ದೆ. ಮೀನುಗಾರರು ಕಳ್ಳರಂತೆ ತಲೆತಗ್ಗಿಸಿ ಕುಳಿತಿದ್ದರು ಎಂದು ಮಾತನಾಡಿರುವುದು ದಾಖಲಾಗಿದೆ.
ಬೋಟಿನಲ್ಲಿದ್ದ ಒಬ್ಬ ಯುವಕನನ್ನು ಸರಿಯಾಗಿ ನೋಡಿದ್ದು, ಬೋಟ್ ಹೆಸರು ಸುವರ್ಣ ತ್ರಿಭುಜ ಅಂತ ಇತ್ತು. ಬೋಟಿನಲ್ಲಿ ಯುವಕ ಅಡಗಿ ಕೂತಿದ್ದ. ಬೋಟ್ ಹೊರ ಭಾಗದಲ್ಲಿ ಕೆಂಪು ಬಣ್ಣದ ಹನುಮಂತನ ಬಾವುಟ ನೋಡಿದ್ದೇನೆ ಹೇಳಿದ್ದಾನೆ. ವ್ಯಕ್ತಿ ಗೋವಾ ರಾಜ್ಯದ ಕೊಂಕಣಿಯಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ನೋಟ್ ಹರಿದಾಡುತ್ತಿದೆ. ಆದರೆ ಪ್ರಕರಣ ತನಿಖೆ ಮಾಡುತ್ತಿರುವ ಪೊಲೀಸರು ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಈ ಆಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಿಂದ ಗೋವಾ, ಮಹಾರಾಷ್ಟ್ರ ಗಡಿಭಾಗಕ್ಕೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿದ ಬಳಿಕ ಮೀನುಗಾರ ಮಹಿಳೆಯರು ಬಂದರಿನಲ್ಲಿ ಮೀನುಗಾರಿಕಾ ಕೆಲಸಕ್ಕೆ ತೆರಳಿಲ್ಲ. ಆತಂಕದಲ್ಲಿರುವ ಮೊಗವೀರ ಮಹಿಳೆಯರು ಸರ್ಕಾರದ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಬಂದರಿಗೆ ಇಳಿಯಲು ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv