– ಏನೇ ಮನಸ್ತಾಪ ಇದ್ರೂ ಒಗ್ಗಟ್ಟಾಗಿರಬೇಕು; ಸಿಎಂ, ಡಿಸಿಎಂಗೆ ಕಿವಿಮಾತು
– ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ಕೊಟ್ಟಿದೆ, ಮೋದಿಯವರೇ ನೀವೇನು ಮಾಡಿದ್ದೀರಿ?
ಕಲಬುರಗಿ: ರಾಜ್ಯದಲ್ಲಿನ ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಒಗ್ಗಟ್ಟಾಗಿ ಇರದೇ ಹೋದರೆ ಸರ್ಕಾರ ಉರುಳಬಹುದು ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ವೇದಿಕೆಯಲ್ಲೇ ಸಿಎಂ ಹಾಗೂ ಡಿಸಿಎಂಗೆ ಎಚ್ಚರಿಕೆ ನೀಡಿದರು.
ಕಲಬುರಗಿಯಲ್ಲಿ (Kalaburagi) ನಡೆದ ಉದ್ಯೋಗ ಮೇಳದಲ್ಲಿ ವೇದಿಕೆಯಲ್ಲಿ ಮಾತನಾಡಿದ ಅವರು, ನೀವು ಹುಷಾರಾಗಿರಬೇಕು. ಮೋದಿ, ಅಮಿತ್ ಶಾ (Amit Shah) ನಿಮ್ಮ ಸರ್ಕಾರ ಬಿಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ಥಾಪವಿದ್ದರೂ ಒಗ್ಗಟ್ಟಾಗಿರಬೇಕು ಎಂದು ವೇದಿಕೆಯಲ್ಲಿದ್ದ ಸಿಎಂ ಹಾಗೂ ಡಿಸಿಎಂಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ – ರಾಷ್ಟ್ರಪತಿಗಳ ಅಂಗಳಕ್ಕೆ ಮಸೂದೆ
ಕೇಂದ್ರದ ವಿರುದ್ಧ ಖರ್ಗೆ ಕಿಡಿ
ಮೋದಿ ಸರ್ಕಾರ ಈ ಭಾಗಕ್ಕೆ ಯಾವುದೇ ಕೆಲಸ ಮಾಡಿಲ್ಲ. ನಾನು 1 ವರ್ಷದಲ್ಲಿ ಮಾಡಿದ ಕೆಲಸ, ಅವರು 10 ವರ್ಷವಾದರೂ ಮಾಡುವುದಿಲ್ಲ. ಅವರು ಒಂದೇ ಒಂದು ರೈಲು ಸಹ ಇಲ್ಲಿಯವರೆಗೆ ಬಿಟ್ಟಿಲ್ಲ. ಕಲಬುರಗಿ ಏರ್ಪೋರ್ಟ್ಗೆ ಸರ್ಕಾರದಿಂದಲೇ ಜಮೀನು ಹಾಗೂ ಹಣ ಕೊಟ್ಟಿದ್ದೇವೆ. ಆದರೆ ನಮಗೆ ಒಂದು ವಿಮಾನ ಸಹ ಬರಲ್ಲ. ಅವರ ಕಿವಿ ಹಿಂಡಿ ಒಂದೆರಡು ಫ್ಲೈಟ್ ಇಲ್ಲಿಗೆ ಕೊಡಬೇಕಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Amur Falcon | ಸೈಬೀರಿಯಾ To ಆಫ್ರಿಕಾ 22 ಸಾವಿರ ಕಿ.ಮೀ ಪ್ರಯಾಣ – ವಿಶೇಷ ಆಹಾರಕ್ಕೆ ಭಾರತದಲ್ಲಿ ನಿಲುಗಡೆ!
ವಿರೋಧ ಪಕ್ಷದವರು ಮಾತಾಡಿದರೆ ಇಡಿ ಮೂಲಕ ಹೆಣೆಯುತ್ತಾರೆ. 1937ರಲ್ಲಿ ನೆಹರೂ ಅವರು ಜನರ ಹೋರಾಟಕ್ಕಾಗಿ 3 ಭಾಷೆಯಲ್ಲಿ ಪತ್ರಿಕೆ ಆರಂಭ ಮಾಡಿದ್ದರು. ಈಗ ಇಡಿಯನ್ನು ಕೂರಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್ಶೀಟ್ ಹಾಕಿಸಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಏನು ನೀವು ಅದಕ್ಕೆ ಹಣ ಕೊಟ್ಟಿದ್ರಾ? ಎಂದು ಪ್ರಶ್ನಿಸಿದರು.
ಕ್ರಿಶ್ಚಿಯನ್ನರ ಆಸ್ತಿ ಮೇಲೂ ಕೇಂದ್ರದ ಕಣ್ಣು
ಕೇಂದ್ರ ಸರ್ಕಾರಕ್ಕೆ ವಕ್ಫ್ ಬೋರ್ಡ್ (Waqf Board) ತಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರ ಜಮೀನು ಜಾಸ್ತಿ ಇದೆ ಅವರ ಮೇಲೆ ಕಣ್ಣಿಡುತ್ತದೆ. ಮುಸ್ಲಿಮರ ನಂತರ ಕ್ರಿಶ್ಚಿಯನ್ನರ ಆಸ್ತಿ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ
ಅಂಬೇಡ್ಕರ್ ಜಯಂತಿ ದಿನ ಅಂಬೇಡ್ಕರ್ರನ್ನ ಕಾಂಗ್ರೆಸ್ ಅವಮಾನ ಎಂದು ಮೋದಿ ಹೇಳಿದ್ದಾರೆ. ಮೋದಿಯವರೇ ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲಿ ಎಂದು ಅಧ್ಯಕ್ಷ ಮಾಡಿದ್ದು ಕಾಂಗ್ರೆಸ್. ಅದೇ ಅಂಬೇಡ್ಕರ್ ಬರೆದ ಸಂವಿಧಾನ ಇನ್ನೂ ಜೀವಂತವಿದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮುರ್ಷಿದಾಬಾದ್ ಹಿಂಸಾಚಾರ| ಬಿಜೆಪಿ, ಬಿಎಸ್ಎಫ್ ಕೈವಾಡವಿದೆ: ಮಮತಾ ಬ್ಯಾನರ್ಜಿ
ಇಡಿ, ಐಟಿ ಬಿಟ್ಟರೇ ಕಾಂಗ್ರೆಸ್ ಬಗ್ಗುತ್ತದೆ ಎಂದು ಅಂದುಕೊಂಡಿದ್ದೀರಿ. ಆದರೆ ಕಾಂಗ್ರೆಸ್ ಯಾವತ್ತು ಬಗ್ಗೋದಿಲ್ಲ. ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ. ಗಾಂಧಿ ಕುಟುಂಬ ದೇಶಕ್ಕಾಗಿ ಪ್ರಾಣ ಕೊಟ್ಟಿದೆ. ಮೋದಿಯವರೇ ನೀವೇನು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.