ತಿರುವನಂತಪುರಂ: ಕೇರಳದ ಮಲಪ್ಪುರಂ ಪ್ರದೇಶದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ವ್ಯಕ್ತಿಯೊಬ್ಬರು ಕೆಲವೇ ಇಂಚುಗಳ ಅಂತರದಿಂದ ಸಾವಿನಿಂದ ಪಾರಾಗಿದ್ದು, ಇದೇ ಸಂದರ್ಭದಲ್ಲಿ ಆತನ ತಾಯಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಸ್ಥಳಿ ಮಾಧ್ಯಮದ ವರದಿಯ ಅನ್ವಯ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುಡ್ಡ ಕುಸಿತ ಭಯಾನಕ ದೃಶ್ಯಗಳನ್ನು ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿ ತನ್ನ ಅಮ್ಮನಿಗೆ ಮಣ್ಣು ಕುಸಿತ ಬಗ್ಗೆ ಅನುಮಾನಗೊಂಡು ಎಚ್ಚರಿಕೆ ನೀಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣು ಏಕಾಏಕಿ ಮನೆಯತ್ತ ಹರಿದು ಬಂದಿದೆ.
This is from Malappuram in Kerala. Scary visuals. A man and his mother try to run away as a landslide happens. She gets stuck. His son and wife were inside the house and could not rush out. #KeralaFloods2019 pic.twitter.com/obeiFh0tuu
— Dhanya Rajendran (@dhanyarajendran) August 9, 2019
ಮಣ್ಣು ಕುಸಿಯುತ್ತಿರುವುದು ಅವರ ಅರಿವಿಗೆ ಬರುವುದೊಳಗೆ ಇಡೀ ಗುಡ್ಡ ಮನೆಯ ಮೇಲೆ ಕುಸಿದಿದೆ. ಕಳೆದ 3 ದಿನಗಳ ಅವಧಿಯಲ್ಲಿ 40 ಮಂದಿ ಮಹಾಮಳೆಗೆ ಕೇರಳದಲ್ಲಿ ಬಲಿಯಾಗಿದ್ದು, 1 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ವಯನಾಡು ಮತ್ತು ಮಲಪ್ಪುರಂ ಬಳಿ ಕಳೆದ 2 ದಿನದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಪ್ರಕರಣಗಳು ನಡೆದಿದೆ. ಸಿಎಂ ಪಿಣರಾಯಿ ವಿಜಯನ್ ಅವರು ಅಧಿಕೃತವಾಗಿ ನೀಡಿರುವ ಮಾಹಿತಿಯ ಅನ್ವಯ 40ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದು, 3 ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಡೆದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಕೇರಳದಲ್ಲಿ ನೀಡಲಾಗಿದ್ದ ರೆಡ್ ಅಲರ್ಟನ್ನು ಮುಂದುವರಿಸಲಾಗಿದ್ದು, ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರವಾಹಕ್ಕೆ ಸಿಲುಕಿರುವ, ಗುಡ್ಡ ಕುಸಿತ ಸಂಭವಿಸಬಹುದಾದ ಪ್ರದೇಶ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿರುವುದರಿಂದ ಹಲವು ಮಂದಿ ಸ್ವಯಂ ಪ್ರೇರಿತವಾಗಿ ನಿವಾಸಿಗಳು ಭಾರೀ ಮಳೆಯಿಂದ ಕೇರಳದಲ್ಲಿ ರೈಲ್ವೇ ಸೇವೆ ಕೂಡ ಬಂದ್ ಆಗಿದೆ.