– ಈ ಜಲಪ್ರಳಯದಲ್ಲಿ ಬದುಕಿ ಬಂದಿರುವುದೇ ಹೆಚ್ಚು
ಮಡಿಕೇರಿ: ಕೊಡಗಿನ 2 ಮನೆಗಳಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಬೇಕಿತ್ತು. ಆದರೆ ಜಲ ಪ್ರವಾಹದ ಎಫೆಕ್ಟ್ ನಿಂದಾಗಿ ಆ ಮನೆಯವರೆಲ್ಲ ಇದೀಗ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.
ಮಕ್ಕಂದೂರು ಗ್ರಾಮದ ಇಬ್ಬರು ಯುವತಿಯರ ಮದುವೆ ಆಗಸ್ಟ್ 26 ಹಾಗೂ ಸೆಪ್ಟೆಂಬರ್ 12 ಕ್ಕೆ ನಿಗದಿಯಾಗಿತ್ತು. ಮಂಜುಳಾ ಮದುವೆ ಇದೇ 26ಕ್ಕೆ ಕೇರಳದ ಹುಡುಗನ ನಿಶ್ಚಯವಾಗಿತ್ತು. ಮಕ್ಕಂದೂರಿನ ಕಲ್ಯಾಣ ಮಂಟಪದಲ್ಲಿ ಬುಕ್ ಆಗಿತ್ತು. ಮದುವೆ ಸಂಭ್ರಮಕ್ಕೆ ಚಿನ್ನಾಭರಣ, ಬಟ್ಟೆಗಳನ್ನು ಖರೀದಿಸಲಾಗಿತ್ತು.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಂಜುಳ, ಮದುವೆಗಾಗಿ ಎಲ್ಲ ಸಿದ್ಧತೆಗಳು ನಡೆದಿತ್ತು. ಜಲಪ್ರಳಯದಿಂದ ಅವುಗಳೆಲ್ಲವೂ ಇದೆಯೇ ಅಥವಾ ನಾಶವಾಗಿದೆಯೇ ಎನ್ನುವುದು ಗೊತ್ತಿಲ್ಲ. ನಾವು ಬದುಕಿ ಬಂದಿರುವುದೇ ಹೆಚ್ಚು ಎಂದು ಕಣ್ಣೀರು ಹಾಕಿದರು.
ಇದೇ ರೀತಿ ಸೆಪ್ಟೆಂಬರ್ 12ಕ್ಕೆ ಕೇರಳ ಯುವಕನ ಜೊತೆ ಮದುವೆ ರಂಜಿತಾ ಎಂಬವರ ಮದುವೆ ನಿಗದಿಯಾಗಿದೆ. ಮದುವೆ ಬೇಕಾದ ತಯಾರಿಗಳೆಲ್ಲವೂ ನಡೆದಿರುವ ಕಾರಣ ವರನ ಕಡೆಯವರು ಯಾವುದೇ ಅಭ್ಯಂತರವಿಲ್ಲ. ಸರಳವಾಗಿ ಮದುವೆ ನಡೆಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನಿಗದಿಯಾಗಿದ್ದ ದಿನಾಂಕದಂದೇ ದೇವಾಲಯದಲ್ಲಿ ಸರಳವಾಗಿ ಇಬ್ಬರ ಮದುವೆ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv