Latest
ಶಬರಿಮಲೆಯಲ್ಲಿ ಇಂದೇ ಮಕರ ಜ್ಯೋತಿ- ರಾಜ್ಯದಲ್ಲಿ ನಾಳೆ ಸಂಕ್ರಾಂತಿ ಹಬ್ಬ

ತಿರುವನಂತಪುರಂ: ಸೂರ್ಯ ತನ್ನ ಪಥ ಬದಲಿಸುವ ದಿನ ಮಕರ ಸಂಕ್ರಾಂತಿಯಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಇರುತ್ತೆ. ಅದೇ ದಿನ ಶಬರಿಮಲೆಯಲ್ಲಿ ವೀರಮಣಿಕಂಠ ಜ್ಯೋತಿ ರೂಪದಲ್ಲಿ ದರ್ಶನ ಕೊಡ್ತಾನೆ.
ಆದ್ರೆ ಈ ಸಲ ಕ್ಯಾಲೆಂಡರ್ನಲ್ಲಿ ಮಕರ ಸಂಕ್ರಾಂತಿ ಜನವರಿ 15 ಅಂದ್ರೆ ನಾಳೆ ಅಂತ ತೋರಿಸ್ತಿದೆ. ಹೀಗಾಗಿ ಭಕ್ತರಲ್ಲಿ, ಹಬ್ಬ ಆಚರಿಸುವವರಲ್ಲಿ ಗೊಂದಲ ಮನೆ ಮಾಡಿದೆ. ಆದ್ರೆ ಶಬರಿಮಲೆಯಲ್ಲಿ ಇವತ್ತೇ ಮಕರವಿಲಕ್ಕು ಅಂದ್ರೆ ಮಕರ ಜ್ಯೋತಿ ಇದ್ದು, ಅದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಸಂಜೆ 6.30ಕ್ಕೆ ಅಯ್ಯಪ್ಪನ ಆಭರಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ. ನಂತ್ರ 8 ಗಂಟೆಯ ಒಳಗಾಗಿ ದೇಗುಲದಿಂದ 8 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿಯ ದರ್ಶನವಾಗಲಿದೆ. ಇನ್ನು ಈ ವರ್ಷ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ, ಸುಮಾರು 800 ವರ್ಷದ ಸಂಪ್ರದಾಯಕ್ಕೆ ಧಕ್ಕೆ ಹಿನ್ನೆಲೆಯಲ್ಲಿ ಮಕರ ಜ್ಯೋತಿಯತ್ತ ದೇಶದ ಗಮನ ನೆಟ್ಟಿದೆ. ಇತ್ತ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲೂ ಸೂರ್ಯ ರಶ್ಮಿ ಸ್ಪರ್ಶ ನಾಳೆ ಅಂತ ಹೇಳಲಾಗ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv
