Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Bengaluru City

ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Public TV
Last updated: January 15, 2026 7:35 am
Public TV
Share
3 Min Read
Makar Sankranti 2026 Why did Bhishma leave his body on Uttarayana
SHARE

ಮಹಾಭಾರತ ಯುದ್ಧದ 10 ದಿನ ಶಿಖಂಡಿ ಮುಂದೆ ಸೋತ ಭೀಷ್ಮ (Bhishma) ಮರಣಶಯ್ಯೆಯಲ್ಲಿ ಮಲಗಿ 58 ದಿನದ ಬಳಿಕ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ತಂದೆ ಸಂತನು ಮಹಾರಾಜ ನೀಡಿದ ಇಚ್ಛಾ ಮರಣ (Iccha Mrityu) ವರದಿಂದ ಭೀಷ್ಮ ಶರದಲ್ಲಿ ಮಲಗಿ 58 ದಿನ ಕಳೆದಿದ್ದ.

ಭೀಷ್ಮ ಯಾವಾಗ ಬೇಕಾದರೂ ಪ್ರಾಣ ತ್ಯಾಗ ಮಾಡಬಹುದಿತ್ತು. ಆದರೆ 58ನೇ ದಿನಕ್ಕೆ ಪ್ರಾಣತ್ಯಾಗ ಮಾಡಿದ್ದು ಯಾಕೆ ಎನ್ನುವುದಕ್ಕೂ ಕಾರಣ ಇದೆ. ಹಿಂದೂ ಪಂಚಾಂಗದ ಪ್ರಕಾರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ 12 ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಧನು ಮಾಸ ಕೊನೆಯಾಗಿ ಸಂಕ್ರಮಣದಂದು ಮಕರ ಮಾಸಕ್ಕೆ ಸೂರ್ಯ ಪ್ರವೇಶಿಸುತ್ತಾನೆ. ಇಲ್ಲಿಯವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಇಂದಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ.

ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಆಯನ ಎಂದರೆ ಚಲಿಸುವುದು ಎಂದರ್ಥ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ʼಉತ್ತರಾಯಣʼ ಹಾಗೂ ಜುಲೈ 16 ರಿಂದ ಜನವರಿ 14ರ ಅವಧಿಯನ್ನು ʼದಕ್ಷಿಣಾಯನʼ ಎಂದು ಕರೆಯಲಾಗುತ್ತದೆ. ಪುಷ್ಯಮಾಸದಲ್ಲಿಬರುವ(ಜನವರಿ 14 ಅಥವಾ 15) ಬರುವ ಸಂಕ್ರಮಣವನ್ನು (Makar Sankranti) ʼಉತ್ತರಾಯಣ ಪುಣ್ಯಕಾಲʼ ಎಂದು ಕರೆಯಲಾಗುತ್ತದೆ. ದೇವರ ಆರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಕಾರ್ಯಗಳಿಗೆ ಮಂಗಳಕರ ಅವಧಿ ಎಂದು ಕರೆಯಲಾಗುತ್ತದೆ.  ಇದನ್ನೂ ಓದಿ:  ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?

 

ಕೇವಲ ಬದುಕುಕುವುದಕ್ಕೆ ಮಾತ್ರವೇ ಅಲ್ಲ, ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ. ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದ. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠ ಕಾಲವೆಂದು ಕರೆಯಲಾಗುತ್ತದೆ.

ಭೀಷ್ಮ ಸೋತಿದ್ದು ಹೇಗೆ?
ಮಹಾಭಾರತ ಯುದ್ಧದಲ್ಲಿ ಭೀಷ್ಮ ಸಾವಿರಾರು ಸೈನಿಕರನ್ನು ಹತ್ಯೆ ಮಾಡುತ್ತಿದ್ದಾಗ ಕಂಗಾಲಾದ ಧರ್ಮರಾಯ 9ನೇ ದಿನದ ರಾತ್ರಿ ಅಜ್ಜನನ್ನು ಭೇಟಿಯಾಗುತ್ತಾನೆ. ಕೌರವ ಮಾಡುತ್ತಿರುವುದು ತಪ್ಪು, ಅಧರ್ಮ ಎನ್ನುವುದು ನಿಮಗೆ ತಿಳಿದಿದ್ದರೂ ನೀವು ಹೋರಾಟ ಮಾಡಿ ಸೈನಿಕರನ್ನು ಕೊಲ್ಲುತ್ತಿದ್ದೀರಿ ಇದು ಸರಿಯೇ ಎಂದು ಧರ್ಮದ ಬಗ್ಗೆ ಪ್ರಶ್ನೆ ಕೇಳುತ್ತೇನೆ. ಈ ಸಂದರ್ಭದಲ್ಲಿ ಭೀಷ್ಮ ತನ್ನ ಹಿಂದಿನ ಕಥೆಯನ್ನು ಹೇಳಿ ತಂದೆ ನೀಡಿದ ಇಚ್ಛಾಮರಣ ವರದ ಬಗ್ಗೆ ಹೇಳುತ್ತಾನೆ. ಅಷ್ಟೇ ಅಲ್ಲದೇ ಸ್ತ್ರೀಯಾಗಿ ಜನಿಸಿ ಪುರುಷನಾಗಿರುವ ವ್ಯಕ್ತಿ ಜೊತೆ ನಾನು ಯುದ್ಧ ಮಾಡುವುದಿಲ್ಲ. ಹೀಗಾಗಿ ನೀವು ಶಿಖಂಡಿಯನ್ನು ಮುಂದೆ ತಂದರೆ ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದು ಹೇಳುತ್ತಾನೆ. ಇದನ್ನೂ ಓದಿ: ಸಂಕ್ರಾಂತಿ ಭವಿಷ್ಯ – ಯಾವ ರಾಶಿಯವರಿಗೆ ಏನು?

ಈ ಶಿಖಂಡಿ ಯಾರು ಎನ್ನುವುಕ್ಕೂ ಕಥೆಯಿದೆ. ಹಿಂದಿನ ಜನ್ಮದಲ್ಲಿ ಅಂಬೆಯಾಗಿ ಜನಿಸಿದ್ದ ಈಕೆಯನ್ನು ಭೀಷ್ಮ ಸ್ವಯಂವರಲ್ಲಿ ಗೆದ್ದಿದ್ದ. ಆದರೆ ತಂದೆ ಸಂತನು ಮಹಾರಾಜನ ಮುಂದೆ ನಾನು ಬ್ರಹ್ಮಚಾರಿಯಾಗಿ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರಿಂದ ಈತ ಅಂಬೆಯನ್ನು ಮದುವೆಯಾಗಿರಲಿಲ್ಲ. ಮದುವೆಯಾಗದೇ ಮೋಸ ಮಾಡಿದ್ದಕ್ಕೆ ಅಂಬೆ ಮುಂದಿನ ಜನ್ಮದಲ್ಲಿ ಶಿಖಂಡಿಯಾಗಿ ಜನಿಸಿ ಭೀಷ್ಮನ ವಿರುದ್ಧ ಸೇಡು ತೀರಿಸುವ ಪ್ರತಿಜ್ಞೆ ಮಾಡಿದ್ದಳು. ಈ ವಿಚಾರ ಭೀಷ್ಮನಿಗೆ ತಿಳಿದ ಕಾರಣ ಆಕೆಯನ್ನು ಮುಂದೆ ತರುವಂತೆ ಹೇಳಿದ. 10ನೇ ದಿನದ ಯುದ್ಧದಲ್ಲಿ ಆಕೆ ಮುಂದೆ ಕಾಣಿಸುತ್ತಿದ್ದಂತೆ ಭೀಷ್ಮ ಶಸ್ತ್ರವನ್ನು ತ್ಯಾಗ ಮಾಡಿದ. ನಂತರ ಅರ್ಜುನನು ಶಿಖಂಡಿಯ ಹಿಂದೆ ನಿಂತು ಭೀಷ್ಮನ ಮೇಲೆ ಬಾಣಗಳ ಬಿಡುತ್ತಾನೆ. ಕೊನೆಗೆ ಅರ್ಜುನ ನಿರ್ಮಿಸಿದ ಶರದ ಹಾಸಿಗೆಯಲ್ಲಿ ಭೀಷ್ಮ ಮಲಗುತ್ತಾನೆ.

ಭೀಷ್ಮನು ಶರದ ಹಾಸಿಗೆಯ ಮೇಲೆ ಮಲಗಿದ್ದರೂ ಯುದ್ಧ 10 ದಿನಗಳ ಕಾಲ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಯುಧಿಷ್ಠಿರನಿಗೆ ರಾಜಧರ್ಮ, ಮೋಕ್ಷಧರ್ಮ ಮತ್ತು ಆಪದ್ಧರ್ಮ ಇತ್ಯಾದಿಗಳ ಅಮೂಲ್ಯವಾದ ಉಪದೇಶಗಳನ್ನು ನೀಡುತ್ತಾನೆ. ಈ ಉಪದೇಶವನ್ನು ಕೇಳಿದ್ದರಿಂದ ಯುಧಿಷ್ಠಿರನು ಅಪರಾಧ ಮತ್ತು ಪಶ್ಚಾತ್ತಾಪದಿಂದ ಮುಕ್ತನಾಗುತ್ತಾನೆ. ಭೀಷ್ಮನ ಈ ಬೋಧನೆಯನ್ನು ಈಗ ʼಭೀಷ್ಮ ನೀತಿʼ ಎಂದು ಕರೆಯಲಾಗುತ್ತದೆ. ಕೊನೆಗೆ ಸೂರ್ಯ ಉತ್ತರಾಯಣ ಪ್ರವೇಶಿಸಿದ ದಿನ ಭೀಷ್ಮ ದೇಹ ತ್ಯಾಗ ಮಾಡುತ್ತಾನೆ.

TAGGED:BheeshmaMahabharataMakar Sankrantiಭೀಷ್ಮಮಕರ ಸಂಕ್ರಾಂತಿಮಹಾಭಾರತ
Share This Article
Facebook Whatsapp Whatsapp Telegram

Cinema news

Darshan 6
ಜೈಲಿನಲ್ಲಿ ಟಿವಿ ಕೊಟ್ಟಿದ್ದಕ್ಕಾಗಿ ಜಡ್ಜ್‌ಗೆ ಥ್ಯಾಂಕ್ಸ್‌ ಹೇಳಿ ನೇರ ಕೋರ್ಟ್ ವಿಚಾರಣೆಗೆ ದರ್ಶನ್‌ ಮನವಿ
Cinema Crime Karnataka Latest Main Post
Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories

You Might Also Like

Mantralaya Sri Raghavendra Swamy
Districts

ಮಂತ್ರಾಲಯದಲ್ಲಿ ರಾಘವೇಂದ್ರ ರಾಜಕುಮಾರ್‌ಗೆ ಫ್ಲೋರಿಡಾ ವಿವಿ ಗೌರವ ಡಾಕ್ಟರೇಟ್ ಪ್ರದಾನ – ಶ್ರೀಗಳಿಂದ ಸನ್ಮಾನ

Public TV
By Public TV
22 minutes ago
Mushroom Pakoda
Food

ಸಂಜೆ ಸ್ನಾಕ್ಸ್‌ಗೆ ಮಾಡಿ ಕ್ರಿಸ್ಪಿ ಮಶ್ರೂಮ್ ಪಕೋಡ

Public TV
By Public TV
26 minutes ago
daily horoscope dina bhavishya
Astrology

ದಿನ ಭವಿಷ್ಯ 24-02-2026

Public TV
By Public TV
41 minutes ago
Jharkhand Ranchi Air Ambulence Crash
Latest

ಜಾರ್ಖಂಡ್‌ನ ರಾಂಚಿಯಲ್ಲಿ ಏರ್ ಅಂಬುಲೆನ್ಸ್ ಪತನ

Public TV
By Public TV
9 hours ago
ICC Mens T20 World Cup West Indies vs Zimbabwe West Indies won by 107 runs
Cricket

ಸಿಕ್ಸರ್‌, ಬೌಂಡರಿಯಿಂದಲೇ ವಿಂಡೀಸ್‌ಗೆ 178 ರನ್‌ – ಜಿಂಬಾಬ್ವೆ ವಿರುದ್ಧ 107 ರನ್‌ಗಳ ಭರ್ಜರಿ ಜಯ

Public TV
By Public TV
9 hours ago
Double Decker Bus Overturns In Lucknow
Crime

ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ – ಐವರು ದುರ್ಮರಣ, 16 ಮಂದಿಗೆ ಗಾಯ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?