182 ವರ್ಷಗಳ ಬಳಿಕ ಅಪರೂಪದ ಶಿವರಾತ್ರಿ- ಮಹಾ ಪೂಜೆಯಿಂದ ಬಾಳು ಬಂಗಾರ

SHIVARATRI 4

ಬೆಂಗಳೂರು: ನಾಳೆ(ಶುಕ್ರವಾರ) ಮಹಾ ಶಿವರಾತ್ರಿ ಸಂಭ್ರಮ, ಜಗವೆಲ್ಲ ಶಿವಮಯವಾಗುವ ಸಮಯ. ಈ ಬಾರಿ ಗಂಗಾಧರನ ಶಿವರಾತ್ರಿ ಆಚರಣೆ ಬಲು ವಿಶೇಷವಾಗಿದೆ. ಯಾಕೆಂದರೆ 182 ವರ್ಷಗಳ ಬಳಿಕ ಅಪರೂಪದ ಶ್ರೇಷ್ಠ ದಿನದಲ್ಲಿ ಶಿವರಾತ್ರಿ ಹಬ್ಬ ಬಂದಿದೆ.

ಹೌದು. 182 ವರ್ಷಗಳ ಬಳಿಕ ಅಪರೂಪದ ದಿನದಲ್ಲಿ ಶಿವರಾತ್ರಿ ಹಬ್ಬ ಬಂದಿದೆ. ಮಾಘ ಮಾಸ ಶುಕ್ಲ ಪಕ್ಷದ ಶನೇಶ್ವರ ಜಯಂತಿಯ ದಿನ ಶಿವರಾತ್ರಿ ಬಂದಿದೆ. ಇದು ಬಲು ಅಪರೂಪ ದಿನವಾಗಿದ್ದು, ಶನೇಶ್ವರ ಜಯಂತಿ ಹಾಗೂ ಶಿವರಾತ್ರಿ ಒಟ್ಟಿಗೆ ಬರುವುದು 182 ವರ್ಷಗಳ ಬಳಿಕವಂತೆ. ಹೀಗಾಗಿ ಶ್ರೇಷ್ಠ ದಿನದಲ್ಲಿ ಶಿವರಾತ್ರಿ ಸಂಭ್ರಮ ಭಕ್ತರ ಪಾಲಿಗೆ ವರದಾನವಾಗಲಿದೆ ಎಂದು ಖ್ಯಾತ ಜ್ಯೋತೀಷಿ ಆನಂದ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

anand guruji

ಶಿವರಾತ್ರಿ ಅಂದ್ರೆ ಜಾಗರಣೆ, ಉಪವಾಸವಿದ್ದು ಶಿವನ ಆರಾಧನೆ ಮಾಡ್ತಾರೆ. ಈ ಬಾರಿ ಶಿವರಾತ್ರಿಯ ಆಚರಣೆ ಫಲಾಫಲ ಹೆಚ್ಚಿರುತ್ತೆ. ಈ ಬಾರಿಯ ಶಿವರಾತ್ರಿಯ ಅನುಷ್ಠಾನ ಅಷ್ಟೇ ಸಂಪ್ರದಾಯ ಬದ್ಧವಾಗಿರಬೇಕು. ಯಾಕೆಂದರೆ ಛಾಯಾಪುತ್ರನ ಜೊತೆ ಶಿವನ ಆರಾಧನೆಯ ಪುಣ್ಯ ದಿನವಾಗಿರೋದ್ರಿಂದ ನಾಳೆಯ ಆಚರಣೆ ವಿಶೇಷವಾಗಿರಲಿದೆ.

SHIVARATRI 1

ಶಿವರಾತ್ರಿ ಆಚರಣೆ ಹೇಗೆ?
ಶಿವನ ಆರಾಧನೆಗೂ ಮುನ್ನ ಶುದ್ಧಜಲದಲ್ಲಿ ಸ್ನಾನ ಮಾಡಿ. ಶಿವನ ದೇಗುಲದಲ್ಲಿ ಪೂಜೆಯನ್ನು ನಿಷ್ಠೆಯಿಂದ ಮಾಡಿ. ಗಂಗಾಜಲದಿಂದ ಶುದ್ಧಜಲದಿಂದ ಶಿವನಿಗೆ ಅಭಿಷೇಕ ಮಾಡಿ. ನೀವೇ ಸ್ವತಃ ಅಭಿಷೇಕವನ್ನು ಮಾಡಿದ್ರೆ ಪುಣ್ಯ ಹೆಚ್ಚಿರುತ್ತೆ. ಶಿವನಿಗೆ ಆಢಂಬರದ ಪೂಜೆ ಬೇಕಾಗಿಲ್ಲ. ಶಿವ ಅಭಿಷೇಕ ಪ್ರಿಯನಾಗಿದ್ದು, ಅಭಿಷೇಕವನ್ನು ಮಾಡಿ. ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜೆ ಮಾಡಬೇಕು. ಶಿವ ಶಿವರಾತ್ರಿ ದಿನ ಪಾರ್ವತಿ ಸಮೇತರಾಗಿ ಭೂಲೋಕದಲ್ಲಿ ಸಂಚರಿಸುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಶಿವನ ಮಂತ್ರ ಪಠಣೆ ಮಾಡಬೇಕು. ಶಿವರಾತ್ರಿಯಂದು ರಾತ್ರಿಯಿಡಿ ಜಾಗರಣೆ ಮಾಡಿ ಉಪವಾಸವಿದ್ದರೆ ಪಾಪಕರ್ಮ ನಿವಾರಣೆಯಾಗುತ್ತೆ ಎನ್ನುವ ನಂಬಿಕೆಯಿದೆ.

SHIVARATRI 3

ಶಿವನಿಗೆ ಅತ್ಯಂತ ಪ್ರಿಯವಾದ ದಿನ, ಜಗತ್ತಿಗೆಲ್ಲ ಲೋಕಕಲ್ಯಾಣವಾಗುವ ದಿನ ಶಿವರಾತ್ರಿಯ ದಿನ ಎನ್ನುವ ನಂಬಿಕೆ ಇದೆ. ಅದರಲ್ಲೂ 182 ವರ್ಷಗಳ ಬಳಿಕ ಅಪರೂಪದ ದಿನದಲ್ಲಿ ಶಿವರಾತ್ರಿ ಬಂದಿರೋದ್ರಿಂದ ಶಿವಭಕ್ತರ ಖುಷಿಗೆ ಪಾರವೇ ಇಲ್ಲ.

Comments

Leave a Reply

Your email address will not be published. Required fields are marked *