ಮುಂಬೈ: ನಾಗ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್ನ್ನು ವಿರೂಪಗೊಳಿಸಿದ ಆರೋಪದ ಮೇಲೆ ಮಹಾರಾಷ್ಟ್ರ (Maharashtra) ಯುವ ಮೋರ್ಚಾದ ಕಾಂಗ್ರೆಸ್ (Congress) ಅಧ್ಯಕ್ಷ ಕುನಾಲ್ ರಾವುತ್ ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ.
ಕುನಾಲ್ ರಾವುತ್ ಹಾಗೂ ಕೆಲವರು ಪ್ರತಿಭಟನೆ ವೇಳೆ, ಇಲ್ಲಿನ ಜಿಲ್ಲಾ ಪರಿಷತ್ ಕಚೇರಿ ಬಳಿ ಶನಿವಾರ ಕಪ್ಪು ಬಣ್ಣದಿಂದ ಮೋದಿಯವರ ಪೋಸ್ಟರ್ ವಿರೂಪಗೊಳಿಸಿದ್ದರು. ಪೋಸ್ಟರ್ ಮೇಲೆ ಮೋದಿ ಸರ್ಕಾರ ಅಳಿಸಿ ಎಂದು ಬರೆದಿದ್ದರು. ಈ ಕಾರಣಕ್ಕಾಗಿ ಭಾನುವಾರ ಮಧ್ಯಾಹ್ನ ನಾಗ್ಪುರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಕುಹಿ ಪಟ್ಟಣದಿಂದ ಕುನಾಲ್ ರಾವುತ್ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ
ಸಿಆರ್ಪಿಸಿ ಸೆಕ್ಷನ್ 41-ಎ ಅಡಿಯಲ್ಲಿ ಭಾನುವಾರ ಯುವ ಕಾಂಗ್ರೆಸ್ ನಾಯಕನಿಗೆ ವಾಟ್ಸಾಪ್ ಮೂಲಕ ನೋಟಿಸ್ ನೀಡಲಾಗಿತ್ತು. ಸೋಮವಾರ ಮಧ್ಯಾಹ್ನ ಪೊಲೀಸರ ಮುಂದೆ ಹಾಜರಾಗುವಂತೆ ರಾವುತ್ಗೆ ಸೂಚಿಸಲಾಗಿತ್ತು. ಆದರೆ ಭಾನುವಾರವೇ ಅವರನ್ನು ಬಂಧಿಸಲಾಗಿದೆ.
ರಾವುತ್ ಅವರನ್ನು ಏಕಾಏಕಿ ಬಂಧಿಸಲಾಯಿತು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕುನಾಲ್ ರಾವುತ್ ಅವರು ರಾಜ್ಯದ ಮಾಜಿ ಇಂಧನ ಸಚಿವ ಮತ್ತು ಕಾಂಗ್ರೆಸ್ ನಾಯಕ ನಿತಿನ್ ರಾವುತ್ ಅವರ ಮಗ. ಇದನ್ನೂ ಓದಿ: ಡಿಕೆಸು ಪ್ರತ್ಯೇಕ ದೇಶ ಹೇಳಿಕೆ; ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ – ನಿವಾಸ ಮುತ್ತಿಗೆಗೆ ಯತ್ನಿಸಿದವರ ಮೇಲೆ ಲಾಠಿ ಪ್ರಹಾರ