ಮಿಸ್ ಮ್ಯಾಚ್ ಜೋಡಿ ಎಂದೇ ಸಖತ್ ವೈರಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಈ ಜೋಡಿ ಒಂದು ವರ್ಷಗಳ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.
Advertisement
ಈ ಕುರಿತು ರವೀಂದರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಹೆಂಡತಿಯ ಗುಣಗಾನ ಮಾಡಿದ್ದಾರೆ. ‘ಮಹಾಲಕ್ಷ್ಮಿ ತನ್ನ ಬಾಳಿಗೆ ಬಂದ ನಂತರ ತಮ್ಮ ಬದುಕು ಸುಂದರವಾಗಿ ಎಂದಿದ್ದಾರೆ. ಆಕೆ ಕೊಡುವ ಪ್ರೀತಿಗೆ ನಾನು ಅರ್ಹನಲ್ಲ. ಆದರೂ, ಸುಂದರ ಜೀವನ ನಡೆಸುತ್ತಿದ್ದೇವೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಸಹಾಯಕನ ಮದುವೆಗೆ ರಶ್ಮಿಕಾ ಹಾಜರಿ- ನಟಿಯ ಕಾಲಿಗೆ ಬಿದ್ದ ನವಜೋಡಿ
Advertisement
Advertisement
ಹಾಗಂತ ಪತ್ನಿಯನ್ನು ಕೇವಲ ಹೊಗಳಿಲ್ಲ. ‘ಅವಳು ದುರಂಹಕಾರಿ, ಆಕೆಯ ಪ್ರೀತಿ ಒರಟು. ಆದರೂ, ಕೋಪ ಬಂದಾಗ ಅಡುಗೆ ಮನೆಗೆ ಸೀದಾ ಹೋಗಿ ನನಗಾಗಿ ತಿಂಡಿಯನ್ನು ಮಾಡಿಕೊಂಡು ಬರುತ್ತಾಳೆ. ಒಂದೊಂದು ಸಲ ಕೆಟ್ಟದ್ದಾಗಿಯೂ ಅಡುಗೆ ಮಾಡಿದ್ದಾಳೆ. ಆಗ ಹೋಟೆಲ್ ನಮಗೆ ಅನಿವಾರ್ಯವಾಗುತ್ತದೆ’ ಎಂದು ಕಾಲೆಳೆದಿದ್ದಾರೆ.
Advertisement
ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಈ ದಂಪತಿ ಸಿಂಪಲ್ ಆಗಿ ಆಚರಿಸಿಕೊಂಡಿದೆ. ಆದರೆ, ಪ್ರೀತಿಯನ್ನು ಮಾತ್ರ ಅಗಾಧವಾಗಿ ಹಂಚಿಕೊಂಡಿದೆ. ರವೀಂದ್ರನ್ ಪತ್ನಿಗಾಗಿ ಉದ್ದದ ಪತ್ರವನ್ನೇ ಬರೆದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
Web Stories