ದಾವಣಗೆರೆ: ಜಿಲ್ಲೆಯ ಶಾಸಕರೊಬ್ಬರು ಭಾಷಣದ ಭರದಲ್ಲಿ ಮಹಾಭಾರತ ಬರೆದವರು ವಾಲ್ಮೀಕಿ ಮಹರ್ಷಿಗಳು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಅವರು ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಆಚರಣೆಗೆ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ರಾಮಪ್ಪ ಭಾಷಣದಲ್ಲಿ ಮಹಾಭಾರತ ಬರೆದವರು ವಾಲ್ಮೀಕಿ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಶಾಸಕರ ವಿರುದ್ಧ ನೆಟ್ಟಿಗರು ಲೇವಡಿ ಮಾಡಿದ್ದಾರೆ.
ಶಾಸಕರು ಹೇಳಿದ್ದೇನು?:
ಕಳ್ಳತನ, ದರೋಡೆ ಬಿಟ್ಟು ವಾಲ್ಮೀಕಿ ಮಹರ್ಷಿ ಪರಿವರ್ತನೆ ಹೊಂದಿ ಮಾಡಿದ ಸಾಧನೆ ಅದ್ಬುತ. ಅವರು ಭಾರತ ಹಾಗೂ ವಿಶ್ವದ ಜನರಿಗೆ ಮಾರ್ಗದರ್ಶನ ನೀಡುವಂತಹ ಮಹಾಭಾರತ ಬರೆದರು. ಈ ಕೊಡುಗೆ ಒಂದೇ ಸಮಾಜಕ್ಕೆ ಸಿಮಿತವಾಗಿಲ್ಲ, ಎಲ್ಲರಿಗೂ ದಾರಿ ದೀಪವಾಗುತ್ತಿದೆ ಎಂದು ಭಾಷಣ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews