Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

Karnataka

Maha Shivaratri| ಶಿವ ತಾಂಡವ ನೃತ್ಯ ಮಾಡಿದ್ದು ಯಾಕೆ?

Public TV
Last updated: February 26, 2025 6:21 pm
Public TV
Share
3 Min Read
Maha Shivaratri Why did Lord Shiva perform Tandava Nritya
SHARE

ಶಿವನು ನಾಟ್ಯ ಮತ್ತು ಸಂಗೀತ ಪ್ರಿಯ. ಈ ಕಾರಣಕ್ಕೆ ಆತನಿಗೆ ನಟರಾಜ (Nataraj) ಎಂಬ ಹೆಸರು ಬಂದಿದೆ. ಅಜ್ಞಾನವನ್ನು ಜ್ಞಾನ ನೃತ್ಯ ಮತ್ತು ಸಂಗೀತದಿಂದ ತೊಡೆದು ಹಾಕಬಹುದು ಎಂಬುದನ್ನು ತೋರಿಸಿಕೊಟ್ಟವನು ಶಿವ. ಆದರಲ್ಲೂ ಆತನ ತಾಂಡವ ನೃತ್ಯ (Tandav Nritya) ಬಹಳ ಪ್ರಸಿದ್ಧ. ಶಿವ ತಾಂಡವ ನೃತ್ಯ ಮಾಡಿದ್ದಕ್ಕೂ ಒಂದು ಕಥೆಯಿದೆ.

ದೇವಲೋಕದಲ್ಲಿ ದೇವೇಂದ್ರ ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನಾದ ದಕ್ಷ (Daksha) ಆಗಮಿಸುತ್ತಾನೆ. ದಕ್ಷ ಬಂದಾಗ ಋಷಿಗಳು, ದೇವತೆಗಳು ಎದ್ದು ನಿಂತು ಗೌರವಿಸುತ್ತಾರೆ. ಎಲ್ಲರೂ ಎದ್ದು ನಿಂತು ಗೌರವಿಸಿದರೂ ಅಲ್ಲಿದ್ದ ಶಿವ (Shiva) ಮಾತ್ರ ಎದ್ದು ನಿಂತು ಗೌರವಿಸುವುದಿಲ್ಲ. ಹಾಗೆ ನೋಡಿದರೆ ದಕ್ಷನಿಗೆ ಶಿವ ಅಳಿಯನಾಗಬೇಕು. ದಕ್ಷ ತನ್ನ ಮಗಳಾದ ಸತಿ ದೇವಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿಸಿದ್ದ. ಹೀಗಾಗಿ ಮಾವನಾದ ನನಗೆ ಶಿವ ಗೌರವ ನೀಡದೇ ಅವಮಾನ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ದಕ್ಷ ಭಾವಿಸಿ ಸಿಟ್ಟುಮಾಡಿಕೊಳ್ಳುತ್ತಾನೆ.

ಸರಿಯಾಗಿ ನೆಲೆ ಇಲ್ಲದ ಈತನಿಗೆ ಬ್ರಹ್ಮನ ಮಾತು ಕೇಳಿ ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದೆ. ನನ್ನ ಮಗಳನ್ನು ಮದುವೆಯಾದ ಈತ ನನಗೆ ಶಿಷ್ಯನಾಗಬೇಕು. ಆದರೆ ಈಗ ನನಗೆ ಎಲ್ಲರ ಮುಂದೆ ಅವಮಾನ ಮಾಡಿದ್ದಾನೆ. ನನಗೆ ಅವಮಾನ ಮಾಡಿದ ಈತ ದೇವತೆಗಳೊಂದಿಗೆ ಹವಿರ್ಭಾಗವನ್ನು ಹೊಂದಲು ಯೋಗ್ಯನಲ್ಲ ಎಂದು ಹೇಳಿದ. ಅಷ್ಟೇ ಅಲ್ಲದೇ ನನಗೆ ಅವಮಾನ ಮಾಡಿದ ಈತನಿಗೆ ಅವಮಾನ ಮಾಡುತ್ತೇನೆ ಎಂದು ಪ್ರತಿಜ್ಞೆ ತೊಡುತ್ತಾನೆ. ಇದನ್ನೂ ಓದಿ: ಭಕ್ತಿ ಪ್ರಿಯ ಶಿವ.. ಪರಮೇಶ್ವರನ ಅಚ್ಚುಮೆಚ್ಚಿನ ಭಕ್ತರಿವರು

Maha Shivaratri 1 1

ಮನೆಗೆ ಬಂದ ಬಳಿಕ ಕೆಲ ದಿನಗಳಲ್ಲಿ ನಿರೀಶ್ವರಯಾಗವನ್ನು ಕೈಗೊಳ್ಳುತ್ತಾನೆ. ಯಾವುದೇ ಕಾರಣಕ್ಕೂ ಶಿವನಿಗೆ ಇಲ್ಲಿ ಪೂಜೆ ಮಾಡಕೂಡದು ಎಂದು ಕಟ್ಟಪ್ಪಣೆ ಹೊರಡಿಸುತ್ತಾನೆ. ಅಂತರಿಕ್ಷದಲ್ಲಿ ಗುಂಪು ಗುಂಪಾಗಿ ದೇವತೆಗಳನ್ನು ಹೋಗುವುದನ್ನು ನೋಡಿದ ಸತಿ ವಿಚಾರ ತಿಳಿದು ನಾನು ತಂದೆ ಮಾಡುತ್ತಿರುವ ಯಾಗಕ್ಕೆ ಹೋಗಬೇಕು ಎಂದು ಹಂಬಲಿಸುತ್ತಾಳೆ. ಅದರಂತೆ ಪತಿ ಶಿವನ ಬಳಿ ತೆರಳಿ ದಂಪತಿಯಾದ ನಾವು ಈ ಯಾಗಕ್ಕೆ ಹೋಗೋಣ ಎನ್ನುತ್ತಾಳೆ. ಅದಕ್ಕೆ ಶಿವ, ನಮಗೆ ಯಾವುದೇ ಆಹ್ವಾನ ಇಲ್ಲ. ಆಹ್ವಾನ ಇಲ್ಲದ ಕಾರ್ಯಕ್ರಮಕ್ಕೆ ಹೋಗುವುದು ಸರಿಯಲ್ಲ ಎಂದು ಹೇಳುತ್ತಾನೆ. ಶಿವ ಎಷ್ಟೇ ಹೇಳಿದರೂ ಸತಿದೇವಿ ಹೋಗಲೇಬೇಕು ಎಂದು ಹಠ ಹಿಡಿಯುತ್ತಾಳೆ. ಕೊನೆಗೆ ನೀವು ಬಾರದೇ ಇದ್ದರೆ ನಾನು ಹೋಗುತ್ತೇನೆ ಎಂದು ಹೇಳಿ ಹೋಗುತ್ತಾಳೆ. ನಂದಿ ಸೇರಿದಂತೆ ಸಾವಿರಾರು ಶಿವಗಳು ಸತಿಯನ್ನು ಹಿಂಬಾಲಿಸುತ್ತಾ ದಕ್ಷನ ಯಾಗ ಶಾಲೆಗೆ ಬರುತ್ತವೆ.

ದಕ್ಷನ ಸೂಚನೆಯ ಕಾರಣ ಯಾರೂ ಸತಿಯನ್ನು ಮಾತನಾಡಿಸಲಿಲ್ಲ ಗೌರವ ಸಿಗಲಿಲ್ಲ. ನಂತರ ಶಿವನಿಗೆ ಹವಿರ್ಭಾಗವನ್ನೇ ಕೊಡಬಾರದು ಎಂಬ ಭಾವನೆಯಿಂದಲೇ ನಡೆಯುತ್ತಿರುವ ಯಜ್ಞವನ್ನು ಕಂಡು ಸತಿ ದೇವಿ ಸಿಟ್ಟಾಗುತ್ತಾಳೆ. ತನ್ನ ಪತಿಗೆ ಅವಮಾನ ಮಾಡಿದ ಯಜ್ಞ ಯಜ್ಞವೇ ಅಲ್ಲ ಎಂದು ಭಾವಿಸಿ, ಮುಂದಿನ ಜನ್ಮದಲ್ಲಿ ಪರಶಿವನೇ ಪತಿಯಾಗಬೇಕೆಂದು ಪ್ರಾರ್ಥನೆ ಮಾಡಿ ಆ ಯಜ್ಞಕ್ಕೆ ಹಾರಿ ತನ್ನ ದೇಹತ್ಯಾಗ ಮಾಡುತ್ತಾಳೆ.

Maha Shivaratri

ತನ್ನ ಗಣಗಳಿಂದ ಸತಿ ದೇಹತ್ಯಾಗ ಮಾಡಿದ ವಿಚಾರ ತಿಳಿದು ಶಿವ ಸಿಟ್ಟಾಗುತ್ತಾನೆ. ಕೈಲಾಸದಲ್ಲಿ ಕೋಪಗೊಂಡು ಭಯಂಕರವಾಗಿ ಕಣ್ಣು ಕೆಂಪಾಗಿ ಮಾಡಿ ಮಾಡಿ ವೀರವೇಷದ ನೃತ್ಯ ಮಾಡುತ್ತಾನೆ. ತನ್ನ ಎಲ್ಲಾ ಶಕ್ತಿ ಬಳಸಿ ಮಾಡಿದ ಈ ವೀರವೇಷದ ನೃತ್ಯವೇ ತಾಂಡವ ನೃತ್ಯ. ಈ ತಾಂಡವ ನೃತ್ಯದ ವೇಳೆ ಕ್ರೋಧದಲ್ಲಿ ಸ್ವಲ್ಪ ಕೂದಲನ್ನು ಪರ್ವತಕ್ಕೆ ಎಸೆಯುತ್ತಾನೆ. ಈ ವೇಳೆ ಅತ್ಯಂತ ಭಯಾನಕವಾದ ಶಿವನ ಉಗ್ರ ರೂಪವಾದ ಮೊದಲ ರುದ್ರ ಅವತಾರ ವೀರಭದ್ರ ಹುಟ್ಟುತ್ತಾನೆ. ನಂತರ ಶಿವನು ತನ್ನ ಇನ್ನೊಂದು ಕೂದಲನ್ನು ಪರ್ವತದ ಮೇಲೆ ಎಸೆಯುತ್ತಾನೆ. ಎರಡನೇ ಬಾರಿ ಕೂದಲು ಬಿದ್ದ ಜಾಗದಲ್ಲಿ ಭದ್ರಕಾಳಿ ಕಾಣಿಸಿಕೊಳ್ಳುತ್ತಾಳೆ.

ಶಿವನು ಅವರಿಬ್ಬರಿಗೂ ಯಜ್ಞವನ್ನು ನಾಶಮಾಡಿ ದಕ್ಷನ ತಲೆಯನ್ನು ತರಲು ಆಜ್ಞಾಪಿಸುತ್ತಾನೆ. ಯಾವುದೇ ಗಂಧರ್ವ, ದೇವತೆ ಅಥವಾ ದೇವರು ತಡೆದರೆ ನೀವು ಅವರನ್ನು ನಾಶಮಾಡಿ ಎಂದು ಸೂಚಿಸುತ್ತಾನೆ. ಇವರಿಬ್ಬರ ಜೊತೆ ಶಿವನು ಒಂದು ಕೋಟಿ ಶಿವ ಗಣಗಳನ್ನು ಯುದ್ಧಕ್ಕೆ ಕಳುಹಿಸುತ್ತಾನೆ. ಭಯಂಕರ ಯುದ್ಧ ನಡೆದು ವೀರಭದ್ರ ದಕ್ಷನ ತಲೆಯನ್ನು ಕತ್ತರಿಸುತ್ತಾನೆ. ಆರಂಭ ಮಾಡಿದ ಯಜ್ಞ ನಿಲ್ಲಬಾರದು ಎನ್ನುವ ಕಾರಣಕ್ಕೆ ದೇವತೆಗಳು ಶಿವನ ಬಳಿ ತೆರಳಿ ಮರಳಿ ದಕ್ಷನಿಗೆ ಜೀವ ಕೊಡುವಂತೆ ಕೇಳಿಕೊಳ್ಳುತ್ತಾರೆ. ದಯಾಳುವಾಗಿದ್ದ ಶಿವ ದಕ್ಷನಿಗೆ ಮತ್ತೆ ಜೀವ ನೀಡುತ್ತಾನೆ. ದಕ್ಷ ತನ್ನ ಅಪರಾಧಗಳಿಗೆ ಕ್ಷಮೆಯಾಚಿಸುತ್ತಾನೆ. ಶಿವನು ಕ್ಷಮಿಸಿದ ಬಳಿಕ ಈ ಯಜ್ಞ ಪೂರ್ಣಗೊಳ್ಳುತ್ತದೆ.

TAGGED:shivashivaratriTandav Nrityaತಾಂಡವ ನೃತ್ಯದಕ್ಷಪುರಾಣವೀರಭದ್ರಶಿವಶಿವರಾತ್ರಿ
Share This Article
Facebook Whatsapp Whatsapp Telegram

Cinema news

rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories
Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories

You Might Also Like

Chandru Lamani BJP MLA
Bengaluru City

ಶಾಸಕ ಚಂದ್ರು ಲಮಾಣಿಗೆ ಮಾ.2ರ ತನಕ ನ್ಯಾಯಾಂಗ ಬಂಧನ

Public TV
By Public TV
1 minute ago
Fire accident at Nelamangala godown
Bengaluru City

ನೆಲಮಂಗಲ | ಪರ್ಫ್ಯೂಮ್ ಗೋಡೌನ್‍ನಲ್ಲಿ ಅಗ್ನಿ ಅವಘಡ – ಮುಗಿಲೆತ್ತರಕ್ಕೆ ಹಬ್ಬಿದ ಜ್ವಾಲೆ

Public TV
By Public TV
1 hour ago
Elephant 1
Chikkamagaluru

ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ – ಹೈರಾಣಾದ ಸಾಕಾನೆಗಳು!

Public TV
By Public TV
1 hour ago
Elephant Woman Death
Chikkamagaluru

ಮದವೇರಿದ್ದ ಕಾಡಾನೆಗೆ ಮಹಿಳೆ ಬಲಿ – ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

Public TV
By Public TV
2 hours ago
Chandru Lamani
Gadag

ಚಂದ್ರು ಲಮಾಣಿ & ಗುತ್ತಿಗೆದಾರ ನಡುವಿನ ಆಡಿಯೋ ಸ್ಫೋಟ

Public TV
By Public TV
3 hours ago
Tanushka Ludo Death
Crime

ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯಿನ್ ನುಂಗಿ ಬಾಲಕಿ ಸಾವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?