ಮುರುಘಾ ಶ್ರೀಗಳನ್ನು ಮೊದಲು ಕೋರ್ಟ್‍ಗೆ ಹಾಜರು ಪಡಿಸಿ: ನ್ಯಾಯಾಧೀಶರ ಸೂಚನೆ

Public TV
1 Min Read
MURUGHA SHREE

ಚಿತ್ರದುರ್ಗ: ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರಾಗುವಂತೆ ಮುರುಘಾ ಮಠದ ಶ್ರೀಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ ಕೋಮಲ ಆದೇಶಿಸಿದ್ದಾರೆ.

MURUGHA SHREE HEALTH 2

ಆರೋಪಿಯನ್ನು ಐದು ದಿನಗಳ ಕಾಲ ತನಿಖೆ ನಡೆಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರ್ಟ್‍ಗೆ ಮನವಿ ಸಲ್ಲಿಸಿದರು, ಈ ವೇಳೆ ಆರೋಪಿ ಎಲ್ಲಿ ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಆರೋಪಿ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಕೋರ್ಟ್‍ಗೆ ಮಾಹಿತಿ ನೀಡದೆ ಹೇಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಕ್ಷಣವೇ ಆರೋಪಿ ಹಾಜರಾಗಬೇಕು, ಇಲ್ಲ ಮೆಡಿಕಲ್ ರಿಪೋರ್ಟ್ ತರುವಂತೆ ಕೋರ್ಟ್ ಸೂಚನೆ ನೀಡಿತು.

CHITRADURGA MURUGHA SHREE HOSPITAL

ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ನ್ಯಾಯಾಧೀಶರು ಸೂಚಿಸಿದ್ದ ಹಿನ್ನೆಲೆ ಸಂಜೆ 4 ಗಂಟೆಗೆ ಶ್ರೀಗಳು ಕೋರ್ಟ್‌ಗೆ ಹಾಜರಾಗಿದ್ದಾರೆ. ವಿಚಾರ ಸಾಕಷ್ಟು ಸೂಕ್ಷ್ಮವಾಗಿರೋದರಿಂದ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರುಪಡಿಸುತ್ತೇವೆಂದು ಜೈಲಾಧಿಕಾರಿಗಳು ಮನವಿ ಸಲ್ಲಿಸಿದ್ದರು.

41 ಡಿಸಿಆರ್‌ಪಿಸಿ ಅರ್ಜಿ ಸಲ್ಲಿಸಿದ್ದ ಶ್ರೀ ಪರ ವಕೀಲರು. ಯಾವುದೇ ವಿಚಾರಣೆಯನ್ನು ವಕೀಲರ ಸಮ್ಮುಖದಲ್ಲಿ ನಡೆಸುವಂತೆ ಅರ್ಜಿ ಸಲ್ಲಿಸಿದರು. ಪೊಲೀಸರ ಕಸ್ಟಡಿಗೆ ಪ್ರತಿಯಾಗಿ ವಕೀಲರು 41 ಡಿಸಿಆರ್‌ಪಿ ಅಡಿ ಅರ್ಜಿ ಸಲ್ಲಿಸಿದ್ದರು. ಮೊದಲು ಆರೋಪಿಯನ್ನು ಹಾಜರುಪಡಿಸಿ ಆ ಬಳಿಕ ಅರ್ಜಿಗಳ ಬಗ್ಗೆ ಆದೇಶ ನೀಡಲಾಗುವುದು ಎಂದು ಜೈಲಾಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *