– ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ ವೈದ್ಯರು
ಭೋಪಾಲ್: ಎರಡು ತಿಂಗಳ ಬಾಲಕಿಯ ಬೆನ್ನಿನ ಮೇಲೆ ಬೆರಳು ಕಾಣಿಸಿಕೊಂಡ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ರಕ್ಷಿಸಿದ್ದಾರೆ.
ಖಾರ್ಗೋನ್ ಜಿಲ್ಲೆಯ ಬಾರ್ವಾ ಸಮೀಪ ಹಳ್ಳಿಯ ಎರಡು ತಿಂಗಳ ಹೆಣ್ಣು ಮಗವಿಗೆ ಇಂತಹ ಅಪರೂಪ ಕಾಯಿಲೆ ಕಾಣಿಸಿಕೊಂಡಿದೆ. ಹುಟ್ಟಿನಿಂದಲೇ ಮಗುವಿನ ಹಿಂಭಾಗದಲ್ಲಿ ಬೆರಳಿನಂತೆ ಕಾಣುವ ಉಂಡೆ ಇತ್ತು. ಆದರೆ ಪೋಷಕರು ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ. ಇದನ್ನೂ ಓದಿ: 19 ಕಾಲ್ಬೆರಳು, 12 ಕೈಬೆರಳಿರುವ ಅಜ್ಜಿಯನ್ನ ಮಾಟಗಾತಿ ಎಂದು ನಿಂದಿಸಿದ ಜನ
ಮಗು ಜನಿಸಿದ ಎರಡು ತಿಂಗಳಿಗೆ ಹಿಂಭಾಗದಲ್ಲಿದ್ದ ಗಂಟು ಬೆರಳಿನ ಆಕಾರದಲ್ಲಿ ಬೆಳೆಯಲು ಆರಂಭಿಸಿತ್ತು. ಇದರಿಂದ ಗಾಬರಿಗೊಂದ ಪೋಷಕರು ಹೆಣ್ಣು ಮಗುವಿನೊಂದಿಗೆ ಎಂವೈ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ವಿಭಾಗವನ್ನು ತಲುಪಿದರು. ಆಗ ವೈದ್ಯರು ಎಂಆರ್ಐ ಟೆಸ್ಟ್ ಮಾಡಿದಾಗ, ಟೆಥರ್ಡ್ ಕಾರ್ಡ್ ಎಂಬ ಆಂತರಿಕ ಕಾಯಿಲೆ ಇರುವುದು ಕಂಡುಬಂದಿದೆ. ಇದರಲ್ಲಿ, ಒಂದು ದೊಡ್ಡ ರಕ್ತನಾಳ (ಬೆನ್ನುಹುರಿ) ಅದರ ಗೊತ್ತುಪಡಿಸಿದ ಸ್ಥಳಕ್ಕಿಂತ ಕೆಳಗೆ ಅಂಟಿಕೊಂಡಿದೆ ಎನ್ನುವುದನ್ನು ವೈದ್ಯರು ಗುರುತಿಸಿದ್ದರು. ಇದನ್ನೂ ಓದಿ: ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ
ಒಂದು ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಈ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಕಾಲುಗಳಲ್ಲಿ ದೌರ್ಬಲ್ಯ, ವಕ್ರತೆ ಮತ್ತು ಅಡಚಣೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅತ್ಯಂತ ಅಪರೂಪದ ರೋಗ ಎಂದು ಎಂವೈ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ನರಶಸ್ತ್ರಚಿಕಿತ್ಸೆ ವೈದ್ಯರಾದ ರಾಕೇಶ್ ಗುಪ್ತಾ ಮತ್ತು ಡಾ. ಜಾಫರ್ ಶೇಖ್ ಅವರ ನೇತೃತ್ವದ ತಂಡವು ಹೆಣ್ಣು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸೊಂಟದಿಂದ ಬೆರಳು-ಕೊಂಡಿಯನ್ನು ಬೇರ್ಪಡಿಸುವ ಮೂಲಕ ಬೆನ್ನುಹುರಿಯನ್ನು ಸರಿಪಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ ನಾಲ್ಕು ದಿನಗಳ ನಂತರ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಿದ್ದಾರೆ. ಇದನ್ನೂ ಓದಿ: 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!