ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗೋದಿಲ್ವಾ ನಿಮ್ಗೆ: ಮಾಧುಸ್ವಾಮಿ ಆಕ್ರೋಶ

Public TV
1 Min Read
HSN 6

ಹಾಸನ: ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ. ನಾಚಿಕೆಯಾಗುವುದಿಲ್ವಾ ನಿಮಗೆ ಎಂದು ಸಚಿವ ಮಾಧುಸ್ವಾಮಿ ಹಾಸನ ಡಿಎಚ್‍ಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ  ಸ್ತ್ರೀರೋಗತಜ್ಞರು, ಅನಸ್ತೇಷಿಯ ಸ್ಪೆಷಲಿಸ್ಟ್ ಇಲ್ಲದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

madhuswamy

ಈ ವೇಳೆ ಕೋಪಗೊಂಡ ಸಚಿವರು ಹಾಸನ ಡಿಎಚ್‍ಓ ಸತೀಶ್ ಕುರಿತು, ನೀವು ಒಬ್ಬರು ಡಿಎಚ್‍ಓ ಎಂದು ನಿಂತಿದ್ದೀರಿ. ಬಡವರ ಹೆಣ್ಣು ಸಾಯಲಿ ಅಂತಿದ್ದೀರಾ, ನಾಚಿಕೆಯಾಗುವುದಿಲ್ವಾ. ಈ ಸಂಬಂಧ ನೀವು ಯಾರಿಗೆ ಪತ್ರ ಬರೆದಿದ್ದೀರಿ. ಅದನ್ನು ತೆಗೆದುಕೊಂಡು ಬಾ ಇಲ್ಲಿ. ಉತ್ತರ ಕೊಡಿ ನನಗೆ ಎಂದು ಗರಂ ಆದರು.

ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಒಂದು ಕಡೆ ಸರಿಯಾಗಿ ವೈದ್ಯರಿಲ್ಲ. ಮತ್ತೊಂದು ಕಡೆ ಇರುವ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಕಾನೂನು ತರಬೇಕು ಎಂದು ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *