ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ, ನಿರ್ಮಾಣದ ಮಾಡುವುದರ ಮೂಲಕ ಗುರುತಿಸಿಕೊಂಡಿರುವ ಮಧುರ್ ಭಂಡಾರ್ಕರ್ ಈಗ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ವಿಶೇಷ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಿಟೌನ್ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರನಾಗಿ ಮಧುರ್ ಭಂಡಾರ್ಕರ್ ಸೈ ಎನಿಸಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ ನಟನೆಯ ಫ್ಯಾಷನ್, ಟ್ರಾಫಿಕ್ ಸಿಗ್ನಲ್, ಹೀರೋಯಿನ್ ಹೀಗೆ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದೀಗ ನಿರ್ದೇಶಕ ಮಧುರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ, ಸುಬ್ರಮಣ್ಯ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ. ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
Visited the famous #KukkeSubramanya #temple in #Karnataka Had a wonderful darshan. ???????? #karnataka @MangaloreCity pic.twitter.com/PfdvppNvOl
— Madhur Bhandarkar (@imbhandarkar) June 23, 2022
ಒಂದರಲ್ಲಿ ದೇವಾಲಯದ ಫೋಟೋ ಮತ್ತು ಇನ್ನೋಂದರಲ್ಲಿ ತಾವು ನಿಂತಿರುವ ಫೋಟೋವನ್ನು ಮಧುರ್ ಭಂಡಾರ್ಕರ್ ಶೇರ್ ಮಾಡಿದ್ದಾರೆ. ನಿರ್ದೇಶಕ ಮಧುರ್ ಕರ್ನಾಟಕಕ್ಕೆ ಭೇಟಿ ಕೊಟ್ಟು, ಫೋಟೋ ಶೇರ್ ಮಾಡಿರುವ ಕುರಿತಯ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
Live Tv