Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?

Bengaluru City

ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?

Public TV
Last updated: July 27, 2018 3:49 pm
Public TV
Share
3 Min Read
chanadra grahana 1 3 1
SHARE

ಬೆಂಗಳೂರು: ಇಂದು ಕೇತುಗ್ರಸ್ತ ರಕ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದಕ್ಕೆ ಮಹರ್ಷಿ ಆನಂದ್ ಗುರುಜಿ ಅವರು ಪರಿಹಾರ ಸೂತ್ರಗಳನ್ನು ಸೂಚಿಸಿದ್ದಾರೆ.

ಈ ಬಾರಿ ಸಂಭವಿಸುತ್ತಿರುವ ಕೇತುಗ್ರಸ್ತ ಚಂದ್ರಗ್ರಹಣ ಬಹಳಷ್ಟು ಕ್ರೂರವಾಗಿದೆ. ಒಂದೇ ಮಾಸದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬರುವ ಎರಡು ಗ್ರಹಣವಾಗಿದ್ದರಿಂದ ಇದು ತುಂಬಾ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಗ್ರಹಣದಿಂದ ಉಂಟಾಗುವ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಗ್ರಹಣ ಪರಿಹಾರ 1: ಚಿಕ್ಕಮಕ್ಕಳು ಏನ್ಮಾಡಬೇಕು?
ಸಣ್ಣ ಮಕ್ಕಳಿಗೆ ಸಂಜೆ 7.00 ಗಂಟೆ ಅಥವಾ ರಾತ್ರಿ 8.00 ಗಂಟೆವರೆಗೂ ಗ್ರಹಣ ಕಾಲವಾದ್ದರಿಂದ ಸಂಜೆ 6.00 ಗಂಟೆಯಿಂದ 7.00 ಗಂಟೆಯೊಳಗೆ ಊಟವನ್ನು ನೀಡಬೇಕು.

chanadra grahana 4 1

ಗ್ರಹಣ ಪರಿಹಾರ 3: ಗ್ರಹಣ ವೇಳೆ ಏನು ಮಾಡಬೇಕು?
ಗ್ರಹಣ ಸ್ಪರ್ಶ ಕಾಲ ಆರಂಭವಾಗುವುದು 11.54 ನಿಮಿಷ, ಗ್ರಹಣ ಮಧ್ಯಕಾಲ 1.52 ನಿಮಿಷ, ಗ್ರಹಣ ಮೋಕ್ಷ ಕಾಲ 3.49 ನಿಮಿಷವಾಗಿದೆ. ಆದ್ದರಿಂದ ಗ್ರಹಣ ಪ್ರಾರಂಭದ ಕಾಲದಲ್ಲಿ ಅಂದರೆ ಸಂಜೆ 4.30ರ ಒಳಗಾಗಿ ಮನೆಯಲ್ಲಿರುವ ಎಲ್ಲ ಪದಾರ್ಥಗಳಿಗೂ ಒಂದಿಷ್ಟು ದರ್ಬೆಯನ್ನು ಹಾಕಿ. ದೇವಾಲಯದಲ್ಲಿ, ಹುಲ್ಲು ಬೆಳೆದಿರುವ ಕಡೆಗಳಲ್ಲಿ ಮತ್ತು ಅರ್ಚಕರು, ಪೂಜಾರಿ, ಪೂಜಾ ಸಾಮಾಗ್ರಿ ಸಿಗುವ ಅಂಗಡಿಗಳಲ್ಲಿ, ಜ್ಯೋತಿಷಿಗಳ ಬಳಿ ದರ್ಬೆ ಸಿಗುತ್ತದೆ.

ಗ್ರಹಣ ಪರಿಹಾರ 4: ಗರ್ಭಿಣಿಯರು ಏನು ಮಾಡಬೇಕು?
ಮನೆಯಲ್ಲಿ ಗರ್ಭಿಣಿಯರು ಇದ್ದರೆ ಸಾಧ್ಯವಾದಷ್ಟು ಮನೆಯಲ್ಲಿರುವ ಕಿಟಕಿ, ಬಾಗಿಲು ಎಲ್ಲವನ್ನು ಮುಚ್ಚಿ. ಇಲ್ಲವಾದರೆ ಮನೆಯಲ್ಲಿಯೇ ಒಂದು ಕೋಣೆಯಲ್ಲಿ ಕುಳಿತುಕೊಂಡು ಒಂದು ಕಿರಣವೂ ರೂಮಿಗೆ ಬೀಳದಂತೆ ನೋಡಿಕೊಳ್ಳಬೇಕು. ಮುಂದೆ ಹುಟ್ಟುವ ಮಗುವಿಗೆ ಯಾವುದೇ ತೊಡಕು, ತೊಂದರೆ ಉಂಟಾಗದೇ ಇರಲು ಈ ರೀತಿ ಮಾಡುವುದು ಉತ್ತಮವಾಗಿದೆ.

chanadra grahana 2 1

ಗ್ರಹಣ ಪರಿಹಾರ 5: ರಾಶಿಫಲ ಹೇಗಿದೆ?
ಗ್ರಹಣದಲ್ಲೂ ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ಈ ರಾಶಿಯವರು ಚಂದ್ರ ಗ್ರಹಣದಿಂದ ದೂರವಿದ್ದು, ಯಾವುದೇ ಗ್ರಹಣದ ದೋಷವೂ ಇಲ್ಲ. ಆದರೆ ರಾತ್ರಿ 10 ಗಂಟೆಯ ಮೇಲೆ ಊಟ ಮಾಡಬೇಡಿ ಅದು ಒಳ್ಳೆಯದಲ್ಲ.

ಈ ಗ್ರಹಣದಿಂದ ತುಲಾ, ಮಿಥುನ, ಮಕರ ಮತ್ತು ಕುಂಭ ಈ ನಾಲ್ಕು ರಾಶಿಯವರಿಗೆ ಸಮಸ್ಯೆ ಇದೆ. ಸಮಸ್ಯೆಯನ್ನು ನಿವಾರಿಸಲು ದೇವಾಲಯಕ್ಕೆ ಹೋಗಬೇಕು, ಇಲ್ಲ ಮನೆಯಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ದೇವಾಲಯದಲ್ಲಿ ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳಬೇಕು. ಮನೆಯಲ್ಲಿರುವ ಹಿರಿಯ ಪಾದ ಮುಟ್ಟಿ ನಮಸ್ಕರಿಸಬೇಕು. ಸಾಧ್ಯವಾದರೆ ಗೋ ಪ್ರಾರ್ಥನೆ ಮಾಡಬೇಕು. ಗೋ ಮೂತ್ರವನ್ನು ತಲೆಗೆ ಸಿಂಪಡಿಸಿಕೊಳ್ಳಬೇಕು. ವೃಷಭ, ಕರ್ಕಾಟಕ, ಧನಸ್ಸು ಹಾಗು ಕನ್ಯಾ ಈ ರಾಶಿಯವರು ಅಧಿಕ ಭಯ ಪಡುವ ಅವಶ್ಯಕತೆ ಇಲ್ಲ.

chanadra grahana 3 1

ಗ್ರಹಣ ಪರಿಹಾರ 6: ಮೊಸರನ್ನದಿಂದ ಒಳ್ಳೆಯದು:
ಗ್ರಹಣಕ್ಕೂ ಮುನ್ನ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜೊತೆಗೆ ಮೊಸರನ್ನವನ್ನು ಮಾಡಿ ಅದನ್ನು ನಿಮ್ಮ ಮನೆ ಮಹಡಿಯ ಮೇಲೆ ಸ್ವಲ್ಪ ಇಡಬೇಕು. ಇದರಿಂದ ಮನೆ ಶಾಂತಿಯಾಗುತ್ತದೆ. ಯಾವುದೇ ತೊಂದರೆಯಾಗುವುದಿಲ್ಲ.

ಗ್ರಹಣ ಪರಿಹಾರ 7: ಚಂದ್ರನಿಗೆ ಮುತ್ತುಗ ವೃಕ್ಷ ಇಷ್ಟ. ಆದ್ದರಿಂದ ಗ್ರಹಣ ಕಾಲ ಪ್ರಾರಂಭ, ಅಂತ್ಯ ಅಥವಾ ಮಾರನೆಯ ದಿನ ಅಂತಹ ಮುತ್ತಗ ವೃಕ್ಷ ಎಲ್ಲಾದರೂ ಇದ್ದರೆ ಅದಕ್ಕೆ 11 ನಮಸ್ಕಾರ ಹಾಕಿ. ಜೊತೆಗೆ ಒಂದು ಹಿಡಿ ಅಕ್ಕಿ, ಹಾಲು, ಮೊಸರನ್ನು ಮರದ ಬುಡಕ್ಕೆ ಹಾಕಿದರೆ ಒಳ್ಳೆಯದು. ದರ್ಬೆ ಮತ್ತು ಮುತ್ತುಗ ಎರಡನ್ನು ಒಂದು ಕಡೆ ಇಟ್ಟು ಪ್ರದಕ್ಷಿಣೆ ಹಾಕಿದರೆ ಗ್ರಹಣ ದೋಷ ಶೀಘ್ರವಾಗಿ ದೂರವಾಗುತ್ತದೆ.

ಗ್ರಹಣ ಪರಿಹಾರ 8: ವಯಸ್ಸಾದ ಹಿರಿಯರು ರಾಮ, ದಾಸ, ಕೃಷ್ಣ ಆರಾಧನೆ ಮಾಡಬೇಕು. ಗ್ರಹಣ ಮುಗಿಯವರೆಗೂ ದೇವತಾ ಆರಾಧನೆಯಲ್ಲಿ ಇದ್ದರೆ ಶುಭವಾಗುತ್ತದೆ. ಆದಷ್ಟು ಸಂಜೆ 6 ಗಂಟೆಯಿಂದ 7 ಗಂಟೆಯೊಳಗೆ ಊಟವನ್ನು ಮಾಡಬೇಕು. ಆಸ್ಪತ್ರೆಯಲ್ಲಿ ಇರುವವರು, ಮಾತ್ರೆ ತೆಗೆದು ಕೊಳ್ಳುವವರು ಕೂಡ ಆದಷ್ಟು ಬೇಗ ಊಟವನ್ನು ಮುಗಿಸಬೇಕು.

TAGGED:BangaloreLunar eclipsePublic TVSolutionಚಂದ್ರ ಗ್ರಹಣಪಬ್ಲಿಕ್ ಟಿವಿಪರಿಹಾರಬೆಂಗಳೂರು
Share This Article
Facebook Whatsapp Whatsapp Telegram

Cinema news

CM Siddaramaiah congratulates Gilli Nata on winning Kannada Bigg Boss
ಬಿಗ್‌ಬಾಸ್‌ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ ಸಿಎಂ
Bengaluru City Cinema Districts Karnataka Latest Top Stories TV Shows
Payal Changappa
ʻಅಮೃತ ಅಂಜನ್‌ʼ ಸಿನಿಮಾದ ಫೀಲಿಂಗ್‌ ಸಾಂಗ್‌ ರಿಲೀಸ್‌
Cinema Latest Sandalwood
Life Ellind Ellige
`ಲೈಫ್ ಎಲ್ಲಿಂದ ಎಲ್ಲಿಗೆ’ ಅಂತ ಹಾಡಿದ ಟೀಮ್
Cinema Latest Sandalwood Top Stories
Gilli 1
ದೇಶ ಕಾಯುವ ಯೋಧರಿಂದ ಹಿಡಿದು ಎಲ್ರೂ ಪ್ರೀತಿ ಕೊಟ್ಟು, ಸಪೋರ್ಟ್ ಮಾಡಿದ್ದೀರಿ: ಗಿಲ್ಲಿ ನಟ
Cinema Latest Main Post Sandalwood TV Shows

You Might Also Like

cocaine bengaluru airport
Crime

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 38 ಕೋಟಿ ಮೌಲ್ಯದ ಕೊಕೇನ್ ಸೀಜ್

Public TV
By Public TV
6 minutes ago
Private Bus
Belgaum

ಲಾಂಗ್ ವೀಕೆಂಡ್ ಎಫೆಕ್ಟ್ – ಪ್ರಯಾಣಿಕರಿಗೆ ದರ ಏರಿಕೆ ಬಿಸಿ

Public TV
By Public TV
15 minutes ago
shidlaghatta City Municipal Council Commissioner Amrutha Gowda receives death threat from Congress Leader Rajeev Gowda 1
Bengaluru City

ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಶಾಕ್ – FIR ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Public TV
By Public TV
27 minutes ago
Bar owner murder case in Chikkamagaluru Four arrested
Chikkamagaluru

ಚಿಕ್ಕಮಗಳೂರು | ಬಾರ್ ಮಾಲೀಕನ ಹತ್ಯೆ ಕೇಸ್ – ನಾಲ್ವರು ಅರೆಸ್ಟ್‌

Public TV
By Public TV
46 minutes ago
woman arrested for blackmailing swamiji ccb police bengaluru
Bengaluru City

ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಹನಿಟ್ರ್ಯಾಪ್? – ಬ್ಲಾಕ್‌ಮೇಲ್‌ ಮಾಡಿದ್ದ ಮಹಿಳೆ ಬಂಧನ

Public TV
By Public TV
47 minutes ago
Male Mahadeshwara Hills Two Wheeler Ban
Chamarajanagar

ಮಲೆ ಮಹದೇಶ್ವರ ಬೆಟ್ಟಕ್ಕೆ 3 ದಿನ ಪಾದಯಾತ್ರೆ, ದ್ವಿಚಕ್ರ ವಾಹನ ಸಂಚಾರ ಬಂದ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?