Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಅಮರ ಪ್ರೇಮಿಗಳಾಗಬೇಕೆಂದು ಗೋಳಗುಮ್ಮಟದಿಂದ ಹಾರಿದ ಪ್ರೇಮಿ -ಇತ್ತ ವಿಷ ಕುಡಿದ ಪ್ರಿಯತಮೆ

Public TV
Last updated: October 8, 2018 9:00 am
Public TV
Share
3 Min Read
BIJ LOVE STORY copy
SHARE

ವಿಜಯಪುರ: ಹಾಟಸ್ಪಾಟ್ ಆಗಿರುವ ಗೋಳಗುಮ್ಮಟದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಭಗ್ನ ಪ್ರೇಮಿಯೊಬ್ಬನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಇತ್ತ ಪ್ರೇಮಿಯ ಆತ್ಮಹತ್ಯೆಯ ಬಗ್ಗೆ ತಿಳಿದ ಪ್ರಿಯತಮೆ ವಿಷ ಸೇವಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹ ದುರಂತ ಕಥೆ ಜಿಲ್ಲೆಯಲ್ಲಿ ನಡೆದಿದೆ.

ಸೋಮನಾಥ ತರನಾಳಕರ ಮತ್ತು ಸಂಯುಕ್ತಾ ಭೈರಿ ಆತ್ಮಹತ್ಯೆಗೆ ಶರಣಾದ ಅಮರ ಪ್ರೇಮಿಗಳು. ಸೆಪ್ಟೆಂಬರ್ 24 ರಂದು ಸಂಜೆ ವಿಶ್ವವಿಖ್ಯಾತ ಗೋಳಗುಮ್ಮಟ ವೀಕ್ಷಿಸಲು ಬಂದಿದ್ದ ಯುವಕನೊಬ್ಬ ಒಳ ಗ್ಯಾಲರಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಆದರೆ ಯುವಕನ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿರಲಿಲ್ಲ. ಇದೀಗ ಆತ ಅಮರ ಪ್ರೇಮಿಯಾಗಲು ಗೋಳಗುಮ್ಮಟದ ಮೇಲಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ ಎಂಬುದು ಮೂಲಗಳ ಪ್ರಕಾರ ಬೆಳಕಿಗೆ ಬಂದಿದೆ.

BIJ 2

ಮೂಲತಃ ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಿವಾಸಿಯಾದ ಸೋಮನಾಥ ತರನಾಳಕರ ತಾನು ಓದುತ್ತಿದ್ದ ದಯಾನಂದ ಕಾಲೇಜಿನಲ್ಲಿಯೇ ಬಿಕಾಂ ವಿದ್ಯಾರ್ಥಿನಿ ಸಂಯುಕ್ತಾ ಭೈರಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದುದರಿಂದ ಇಬ್ಬರ ನಡುವೆ ಪ್ರೀತಿ ಆವರಿಸಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಗೆ ಬಂದುಬಿಟ್ಟಿತ್ತು. ಇದೇ ಸಮಯದಲ್ಲಿ ಸಂಯುಕ್ತಾಗೆ ಆಕೆಯ ಪೋಷಕರು ಬೇರೆಡೆ ವರ ನೋಡಿ ಮದುವೆ ನಿಶ್ಚಯಿಸಿದ್ದರು ಎನ್ನಲಾಗಿದೆ.

ಈ ವಿಚಾರ ತಿಳಿದ ಸೋಮನಾಥ ಸಂಯುಕ್ತಾಳನ್ನು ಬಿಟ್ಟು ಬದುಕಲಾಗುವುದಿಲ್ಲ ಎಂದು ಆಕೆಗೆ ತಿಳಿಸಿದ್ದಾನೆ. ಆಕೆಯೂ ಸಹ ಅದೇ ಮಾತನ್ನು ಸೋಮನಾಥನಿಗೆ ಹೇಳುತ್ತಾಳೆ. ಹೀಗಾಗಿ ಒಂದು ವೇಳೆ ನಾವೇನಾದರು ಸತ್ತರೆ ಜಗತ್ತು ನಮ್ಮನ್ನ ನೆನಪಿಸಿಕೊಳ್ಳಬೇಕು ಆಗ ನಾವು ಅಮರ ಪ್ರೇಮಿಗಳಾಗುತ್ತೇವೆ ಎಂದು ಮಾತನಾಡಿಕೊಂಡಿದ್ದರು. ಮನೆಯಲ್ಲಿ ವಿರೋಧ ಇರುವುದರಿಂದ ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮೇಲೆ ನೇರ ಗೋಳಗುಮ್ಮಟಕ್ಕೆ ಬಂದ ಸೋಮನಾಥ ಪಿಸುಗುಟ್ಟುವ ಗ್ಯಾಲರಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಬಸವರಾಜ ಲಗಳಿ ಅವರು ಹೇಳಿದ್ದಾರೆ.

BIJ 4

ಅತ್ತ ಸೋಮನಾಥನ ಆತ್ಮಹತ್ಯೆ ಸುದ್ದಿ ತಿಳಿದ ಪ್ರೇಯಸಿ ಸಂಯುಕ್ತಾ ಕೂಡ ವಿಷ ಸೇವಿಸಿ ಮೃತಪಟ್ಟಿದ್ದಾಳೆ. ಈ ಮೂಲಕ ಸೆಪ್ಟೆಂಬರ್ 24 ಅಮರ ಪ್ರೇಮಿಗಳಿಬ್ಬರ ದುರಂತ ಕಂಡ ದಿನವಾಗಿದ್ದು ಸೋಮನಾಥನ ಆತ್ಮಹತ್ಯೆ ಪ್ರಕರಣ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೋಮನಾಥ ಹಾಗೂ ಸಂಯುಕ್ತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದುದರಿಂದ ಸಹಜವಾಗಿಯೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಬಳಿಕ ಆ ಪ್ರೀತಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಆದರೆ ಅದಕ್ಕೆ ಉಳಿಗಾಲವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಗೋಳಗುಮ್ಮಟದ ಮೇಲಿಂದ ಹಾರಿದ ಸೋಮನಾಥ ಮೃತಪಟ್ಟರೂ ಸಹ ಆತನ ಆತ್ಮ ಮಾತ್ರ ಸಂಯುಕ್ತಾ ಐ ಲವ್ ಯೂ, ಈ ಮಿಸ್ ಯೂ ಎಂಬುದನ್ನು ಸಾರಿ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತಿದೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

BIJ 5

ಅತ್ತ ಸಂಯುಕ್ತಾ ಕೂಡ ಇದೇ ಮಾತನ್ನು ಹೇಳಿ ವಿಷ ಕುಡಿದು ಸೋಲಾಪುರದ ಮರಡಿ ರಸ್ತೆಯ ಬಳಿ ಪ್ರಾಣ ಬಿಟ್ಟಿದ್ದಳು. ಚಿಗುರುವ ಹಂತದಲ್ಲಿದ್ದ ಇವರಿಬ್ಬರ ಈ ಪ್ರೇಮಕಥೆ ದುರಂತ ಅಂತ್ಯಕಂಡಿದೆ. ಈ ಮೂಲಕ ಪ್ರೀತಿಸಿ, ಮದುವೆಯಾಗಿ ನೂರು ಕಾಲ ಬಾಳಿ ಬದುಕಬೇಕಿದ್ದ ಈ ಅಮರ ಪ್ರೇಮಿಗಳು ಅರಳುವ ಮುನ್ನವೇ ಬಾಡಿ ಹೋಗಿವೆ ಎಂದು ಸ್ಥಳೀಯ ಅಶೋಕ್ ಅವರು ತಿಳಿಸಿದ್ದಾರೆ.

ಅಮರ ಪ್ರೇಮಿಗಳು ಅವರು ಅಂದುಕೊಂಡಂತೆ ಕೇವಲ ನೆನಪಿನಲ್ಲಿ ಉಳಿದುಕೊಂಡಿದ್ದಾರಷ್ಟೆ. ಇನ್ನು ಈ ದುರಂತ ಕಥೆ ಗೋಳಗುಮ್ಮಟ್ಟಕ್ಕು ಕಪ್ಪು ಚುಕ್ಕೆ ತಂದಿದ್ದು, ಇಂತಹ ದುರಂತಗಳು ಸಂಭವಿಸದಂತೆ ಇನ್ನಾದರೂ ಗೋಲಗುಂಬಜ ಆಡಳಿತಾಧಿಕಾರಿಗಳು ಎಚ್ಚೆತ್ತುಕೊಳ್ಳಲ್ಲಿ ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

BIJ

ಪ್ರೇಮಿಗಳ ಹಾಟ್ ಸ್ಪಾಟ್:
ಪ್ರಪಂಚದ ಅದೆಷ್ಟೋ ಪ್ರೇಮಿಗಳು ತಮ್ಮ ಪ್ರೇಯಸಿಗೆ ಹಾಗೂ ಪ್ರಿಯತಮನಿಗೆ ಹೇಳಿಕೊಳ್ಳಲಾಗದ ಪ್ರೇಮ ನಿವೇದನೆಯನ್ನು ಗೋಳಗುಮ್ಮಟದ ಪಿಸುಗುಟ್ಟುವ ಗ್ಯಾಲರಿಯಲ್ಲಿ ಹೇಳಿಕೊಂಡಿದ್ದಾರೆ. ಒಂದು ಬಾರಿ ಪಿಸುಗುಟ್ಟಿದರೆ ಸಾಕು ಏಳು ಬಾರಿ ಪ್ರತಿಧ್ವನಿಸುವ ಈ ಪ್ರೇಮಸೌಧ(ವಿಶಿಷ್ಠ ಸೌಧ)ಅದೆಷ್ಟೋ ಪ್ರೇಮಿಗಳನ್ನು ಒಂದು ಮಾಡಿದೆ. ಹಾಗೆಯೇ ಕೋಟ್ಯಾಂತರ ಪ್ರೇಮ ನಿವೇದನೆಗಳು ತಮ್ಮ ಪ್ರೇಮಿಗಳಿಗೆ ತಲುಪದೆಯೇ ಇದೇ ಗೋಳಗುಮ್ಮಟದ ಗ್ಯಾಲರಿಯಲ್ಲಿಯೇ ಕಳೆದೂ ಹೋಗಿವೆ. ಹೀಗಾಗಿಯೇ ಇದನ್ನು ಪ್ರೇಮಿಗಳ ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:deathlovemarriagepolicePublic TVsuicidevijayapuraಆತ್ಮಹತ್ಯೆಪಬ್ಲಿಕ್ ಟಿವಿಪೊಲೀಸ್ಪ್ರೀತಿಮದುವೆವಿಜಯಪುರಸಾವು
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Usiru Movie Team
ತಿಲಕ್ ನಟನೆಯ ʻಉಸಿರುʼ ಸಿನಿಮಾ ಟ್ರೈಲರ್ ರಿಲೀಸ್
Cinema Latest Sandalwood Top Stories
Rini Ann George
3 ವರ್ಷದಿಂದ ಅಶ್ಲೀಲ ಮೆಸೇಜ್‌ ಕಳಿಸ್ತಿದ್ದಾರೆ, ಹೋಟೆಲ್‌ಗೆ ಕರೀತಿದ್ದಾರೆ – ರಾಜಕಾರಣಿ ವಿರುದ್ಧ ನಟಿ ರಿನಿ ಜಾರ್ಜ್ ಆರೋಪ
Cinema Crime Latest Main Post National
Daali Dhananjaya
ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!
Cinema Latest Sandalwood Top Stories
mammootty
ಅನಾರೋಗ್ಯದಿಂದ ಚೇತರಿಸಿಕೊಂಡ ಮಮ್ಮುಟ್ಟಿ; ಚೇತರಿಕೆ ಬೆನ್ನಲ್ಲೇ ಗುಡ್‌ನ್ಯೂಸ್
Cinema Latest South cinema Top Stories
Prabhas Anuksha
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಪ್ರಭಾಸ್-ಅನುಷ್ಕಾ
Cinema Latest South cinema Top Stories

You Might Also Like

youtuber sameer
Bengaluru City

ಯಾವುದೇ ಕ್ಷಣದಲ್ಲಿ ಯೂಟ್ಯೂಬರ್‌ ಸಮೀರ್‌ ಅರೆಸ್ಟ್‌ ಸಾಧ್ಯತೆ

Public TV
By Public TV
2 minutes ago
G PARAMESHWAR
Bengaluru City

ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್

Public TV
By Public TV
11 minutes ago
belthangady police registered an FIR against Girish Mattannavar Mahesh Shetty Thimarodi Sameer
Dakshina Kannada

ಗಿರೀಶ್ ಮಟ್ಟಣ್ಣನವರ್, ತಿಮರೋಡಿ, ಸಮೀರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

Public TV
By Public TV
26 minutes ago
Eshwara Khandre
Bengaluru City

ಹೊರರಾಜ್ಯದ ಜಾನುವಾರನ್ನು ಕಾಡಲ್ಲಿ ಮೇಯಿಸಲು ನಿರ್ಬಂಧ, ರಾಜ್ಯದ ಕುರಿಗಾಹಿಗಳಿಗೆ ಇಲ್ಲ ತೊಂದರೆ: ಈಶ್ವರ್ ಖಂಡ್ರೆ

Public TV
By Public TV
39 minutes ago
DK Shivakumar 6
Bengaluru City

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

Public TV
By Public TV
1 hour ago
Lok Sabha 2
Latest

ಗದ್ದಲದ ನಡುವೆ ಮುಂಗಾರು ಅಧಿವೇಶನ ಅಂತ್ಯ – ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?