Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

Crime

ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

Public TV
Last updated: February 5, 2018 11:39 am
Public TV
Share
3 Min Read
UDP SUICIDE FINAL
SHARE

ಉಡುಪಿ: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೋರ್ವ ಮಹಿಳಾ ಪೇದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಪೊಲೀಸ್ ಕಾನ್ ಸ್ಟೇಬಲ್ ನಾಗರಾಜ್ (27) ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪ್ರೇಯಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕೂಡ ಕೊಲ್ಲೂರು ಠಾಣೆಯಲ್ಲೇ ಸೇವೆಯಲ್ಲಿದ್ದರು. ಪ್ರೀತಿ ಹಾಗೂ ಮನಸ್ತಾಪವೇ ಈ ಎರಡು ದುರ್ಘಟನೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

ನಾಗರಾಜ್ ಸೌಪರ್ಣಿಕ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರೆ, ರಮ್ಯಾ ಕೊಲ್ಲೂರು ಪೊಲೀಸ್ ಠಾಣೆಯಲ್ಲೇ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ರಮ್ಯಾರನ್ನು ಪೊಲೀಸರೇ ಬದುಕಿಸಿದ್ದಾರೆ.

UDP 5

ನಾಗರಾಜ್ ಮೂಲತಃ ದಾವಣಗೆರೆಯ ಮಲೆಬೆನ್ನೂರಿನ ಹಿಡಗನಗಟ್ಟ ಗ್ರಾಮದ ನಿವಾಸಿ. ಕಳೆದ 2 ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕಳೆದ ಕೆಲವು ದಿನಗಳಿಂದ ಜೋಯ್ಡಾಗೆ ಹೆಚ್ಚುವರಿ ಕೆಲಸದ ನಿಮಿತ್ತ ತೆರಳಿದ್ದರು. 2 ದಿನಗಳ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ನಾಗರಾಜ್ ಭಾನುವಾರ ಮುಂಜಾನೆ ಪೊಲೀಸ್ ವಸತಿ ಗೃಹದಲ್ಲೇ ನೇಣಿಗೆ ಶರಣಾಗಿದ್ದಾರೆ.

ನಾಗರಾಜ್ ಅವರ ಸಾವಿನ ಸುದ್ದಿ ತಿಳಿದ ಪ್ರೇಯಸಿ ರಮ್ಯಾ ಪೊಲೀಸ್ ಠಾಣೆಯಲ್ಲೇ ಇದ್ದ ಬಾವಿಗೆ ಹಾರಿದ್ದಾರೆ. ಠಾಣೆಯಲ್ಲಿದ್ದ ಪೊಲೀಸರೇ ಬಾವಿಗೆ ಧುಮುಕಿ ಆಕೆಯನ್ನು ಬದುಕಿಸಿದ್ದಾರೆ. ಬಳಿಕ ಕುಂದಾಪುರ ಸಮೀಪದ ವಿನಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ನಾಗರಾಜ್ ಹಾಗೂ ರಮ್ಯಾ ಒಂದೇ ಬ್ಯಾಚ್ ಮೇಟ್ ಆಗಿದ್ದರು. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾಗರಾಜ್ ಹಾಗೂ ರಮ್ಯಾ ಅದೃಷ್ಟವೆಂಬಂತೆ ಒಂದೇ ಪೊಲೀಸ್ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗರಾಜ್ ತನ್ನ ಪ್ರೇಮದ ಬಗ್ಗೆ ಮನೆಯಲ್ಲೂ ಹೇಳಿಕೊಂಡಿದ್ದ. ನಾಗರಾಜ್ ಹಾಗೂ ರಮ್ಯಾ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು.

UDP SUICIDE

ದಿನ ಕಳೆದಂತೆ ಇವರಿಬ್ಬರ ನಡುವೆ ಮನಸ್ತಾಪ ಬೆಳೆದಿತ್ತು. ಚಿಕ್ಕಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಈ ಬಗ್ಗೆ ಡೆತ್ ನೋಟ್ ಕೂಡ ಬರೆದ ನಾಗರಾಜ್ ತನ್ನ ಸಾವಿಗೆ ನಾನೇ ಕಾರಣ. ನನಗೆ ತುಂಬಾ ನೋವಾಗಿದೆ. ನನ್ನ ಮಾತನ್ನು ರಮ್ಯಾ ಕೇಳುತ್ತಿಲ್ಲ. ಅವಳೊಂದಿಗೆ ನೆಮ್ಮದಿಯಿಲ್ಲ. ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ನಾನೇ ಹೊಣೆ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ನಾಗರಾಜ್ ಸ್ನೇಹಿತ ಫಾರುಕ್, ಕೂಲಿ ಮಾಡಿಕೊಂಡಿದ್ದ ನಾಗರಾಜ್, ಪೊಲೀಸ್ ಉದ್ಯೋಗ ಸೇರಿದ್ದ. ಆತ್ಮಹತ್ಯೆ ಮಾಡಿರುವುದು ಬೇಸರ ತಂದಿದೆ. ನಾಗರಾಜ್ ತುಂಬಾ ಸ್ನೇಹಸ್ವಭಾವ ವ್ಯಕ್ತಿಯಾಗಿದ್ದನು ಅಂತ ಹೇಳಿದ್ದಾರೆ.

ಕೆಲಸದ ವಿಚಾರದಲ್ಲಿ ಒತ್ತಡ ತಂದುಕೊಳ್ಳುತ್ತಿದ್ದ. ಇನ್ನುಳಿದಂತೆ ಮನೆ ವಿಚಾರ ಬಂದಾಗ ಖುಷಿಯಾಗಿದ್ದ. ಪೊಲೀಸ್ ಆಗಬೇಕೆಂದು ತುಂಬ ಆಸೆಯನ್ನಿಟ್ಟುಕೊಂಡಿದ್ದ ನಾಗರಾಜ್, ಕೂಲಿ ಕೆಲಸ ಮಾಡಿ ಪೊಲೀಸ್ ಕೆಲಸಕ್ಕೆ ಸೇರಿದ್ದ. ಇನ್ನು ಪ್ರೀತಿ ವಿಚಾರವಾಗಿ ಮನೆಯಲ್ಲಿ ಯುವತಿಯ ಫೋಟೋ ತೋರಿಸಿದ್ದ. ಫೋಟೋ ನೋಡಿ ಮನೆಯಲ್ಲೂ ಒಪ್ಪಿಗೆ ನೀಡಲಾಗಿತ್ತು. ಆದರೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದ ಏಕೆ ಅನ್ನೋದು ಗೊತ್ತಾಗುತ್ತಿಲ್ಲ. ಡೆತ್ ನೋಟಿನಲ್ಲೂ ಕ್ಷಮಿಸಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ. ನಾಗರಾಜ್ ಸಾವು ದುಃಖ ತಂದಿದೆ ಅಂತ ಸಹೋದರ್ ಅರುಣ್ ಹೇಳಿದ್ದಾರೆ.

UDP 1

ಸದ್ಯ ಮೃತ ನಾಗರಾಜ್ ಮೃತದೇಹವನ್ನು ಮಣಿಪಾಲದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

ಮನೆಯಲ್ಲಿ ವಿರೋಧವಿದ್ದು ಠಾಣೆಗೆ ಹಾರಿ ಬರುವ ಅದೆಷ್ಟೋ ಜೋಡಿ ಹಕ್ಕಿಗಳನ್ನು ದಂಪತಿಗಳನ್ನಾಗಿ ಮಾಡಿ ಕಳುಹಿಸಿದ ಉದಾಹರಣೆ ಸಾಕಷ್ಟಿದೆ. ಆದ್ರೆ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ವರ್ಷಗಟ್ಟಲೆ ಸಾಕಿ ಸಲಹಿದ- ಮಗ ಮಗಳಿಗೆ ಬೆಟ್ಟದಷ್ಟು ಪ್ರೀತಿಕೊಟ್ಟು, ಸಿಕ್ಕಾಪಟ್ಟೆ ಕನಸನ್ನಿಟ್ಟ ಪೋಷಕರು ಈ ಪ್ರೀತಿ- ಪ್ರೇಮ- ಆತ್ಮಹತ್ಯೆಯ ಸಂದರ್ಭ ಒಂದು ಕ್ಷಣವೂ ಕಣ್ಮುಂದೆ ಬರೋದೇ ಇಲ್ವಾ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ.

UDP 2

TAGGED:lovepolicepublictvsuicideudupiwoman policeಆತ್ಮಹತ್ಯೆಉಡುಪಿಪಬ್ಪಿಕ್ ಟಿವಿಪೇದೆಪೊಲೀಸ್ಪ್ರೀತಿಮಹಿಳಾ ಪೇದೆ
Share This Article
Facebook Whatsapp Whatsapp Telegram

Cinema news

KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood
Mahesh Babus AMB Cinemas
ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’
Cinema Latest South cinema Top Stories

You Might Also Like

ಸಾಂದರ್ಭಿಕ ಚಿತ್ರ
Bellary

ಕೊಲ್ಲಿ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ಜೀನ್ಸ್ ಉದ್ಯಮ – 20 ಲಕ್ಷ ಪ್ರಾಡಕ್ಟ್‌ಗಳ ರಫ್ತು ಸ್ಥಗಿತ

Public TV
By Public TV
10 minutes ago
krishna byre gowda
Bengaluru City

KPSC Row| ಒಂದೇ ಕೊಠಡಿಯಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಪಾಸ್‌ – ವಿವಾದಕ್ಕೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ

Public TV
By Public TV
1 hour ago
Krishna Byregowda
Bengaluru City

ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ – ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್: ಕೃಷ್ಣಭೈರೇಗೌಡ

Public TV
By Public TV
2 hours ago
Oil tanker heading to China makes U turn Russian oil is coming to Mangaluru
Dakshina Kannada

ಚೀನಾಗೆ ತೆರಳುತ್ತಿದ್ದ ಟ್ಯಾಂಕರ್‌ ದಿಢೀರ್‌ ಯೂಟರ್ನ್‌ – ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ

Public TV
By Public TV
2 hours ago
Raichuru crime 1
Crime

ಪತ್ನಿ ಜೊತೆ ಅನೈತಿಕ ಸಂಬಂಧ – ಕೊಡಲಿಯಿಂದ ಕೊಚ್ಚಿ ಪ್ರಿಯಕರನ ಹತ್ಯೆಗೈದಿದ್ದ ಇಬ್ಬರು ಅರೆಸ್ಟ್

Public TV
By Public TV
2 hours ago
Ugadi
Latest

ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ?

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?