ರಾಯಚೂರು: ಮಾನ್ವಿ ಪಟ್ಟಣದಲ್ಲಿ ಯುವಕನೋರ್ವ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಪಟ್ಟಣದ ಬಾಬಾನಾಯಕ್ ಕಾಲೋನಿ ನಿವಾಸಿ 25 ವರ್ಷದ ಕೃಷ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿ ತನಗೆ ಸಿಗುವುದಿಲ್ಲ ಅಂತ ಖಿನ್ನತೆ ಒಳಗಾಗಿದ್ದ ಕೃಷ್ಣ ಬೇರೆ ದಾರಿ ಕಾಣದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಓಡಿ ಬಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಮಾನ್ವಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬ್ರೇಕ್ಅಪ್ ನೋವಲ್ಲಿ ಡೆಡ್ಲಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡು ಸಾವಿನ ವಿಡಿಯೋ ಲೈವ್ ಮಾಡ್ದ https://t.co/rQPi0T9S6p #BlackMamba #Death #LiveVideo pic.twitter.com/sutiiDfKmr
— PublicTV (@publictvnews) September 26, 2017