ಪ್ರೀತ್ಸೇ ಅಂತಾ ಆಂಟಿ ಹಿಂದೆ ಬಿದ್ದಿದ್ದ..! – ನೋ ಅಂದಿದ್ದಕ್ಕೆ ಕೆರೆಗೆ ಹಾರಿ ಪ್ರಾಣಬಿಟ್ಟ?

Public TV
1 Min Read
collage 6

ಬೆಂಗಳೂರು: ಪ್ರೀತ್ಸೇ, ಪ್ರೀತ್ಸೇ ಅಂತಾ ಮದುವೆಯಾದ ಯುವತಿ ಹಿಂದೆ ಬಿದ್ದ. ಆದರೆ ಆ ಯುವತಿ ಈತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದಳು. ಇದರಿಂದ ಮನನೊಂದಿದ್ದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರು ಹೊರವಲಯದ ಸರ್ಜಾಪುರ ಕೆರೆಯಲ್ಲಿ ನಡೆದಿದೆ.

ಸರ್ಜಾಪುರ ನಿವಾಸಿ ವೆಂಕಟೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಬುಧವಾರದಿಂದ ವೆಂಕಟೇಶ್ ನಾಪತ್ತೆಯಾಗಿದ್ದ. ಬುಧವಾರ ಸಂಜೆ 5 ಗಂಟೆಗೆ ಮನೆಯವರು ಫೋನ್ ಮಾಡಿದಾಗ ವೆಂಕಟೇಶ್, ನಾನು ಸರ್ಜಾಪುರ ಕೆರೆ ಪಕ್ಕ ಇದ್ದೇನೆ. ಇನ್ನೆರಡು ಗಂಟೆಯಲ್ಲಿ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದನಂತೆ. ಆದರೆ 2 ತಾಸು ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ವೆಂಕಟೇಶ್ ತಂದೆ, ತಾಯಿ ಹಾಗೂ ತಮ್ಮ ಕೆರೆ ಬಳಿ ಬಂದಿದ್ದಾರೆ. ಈ ವೇಳೆ ಹುಡುಕಾಟ ನಡೆಸುತ್ತಿದ್ದಾಗ ವೆಂಕಟೇಶ್ ಚಪ್ಪಲಿ ಕೆರೆಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಪೋಷಕರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

vlcsnap 2017 10 13 15h46m16s713

ಈತ 6 ತಿಂಗಳ ಹಿಂದಷ್ಟೇ ಮದುವೆಯಾಗಿರೋ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದ. ಆದರೆ ಆ ಯುವತಿ ಈತನ ಪ್ರೀತಿಗೆ ನೋ ಅಂದಿದ್ದಳು. ಇದರಿಂದ ಆತ ತುಂಬಾ ಮನನೊಂದಿದ್ದ. ಹೀಗಾಗಿ ಆತ ಈ ಕೃತ್ಯವೆಸಗಿರಬಹುದು ಎಂದು ವೆಂಕಟೇಶ್ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ನಿನ್ನೆ ದಿನಪೂರ್ತಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ 11.30ರ ವೇಳೆಗೆ ಮೃತದೇಹ ಕೆರೆಯಲ್ಲಿ ತೇಲಿ ಬಂದಿದೆ. ಈ ಕೆರೆ 15 ರಿಂದ 20 ಅಡಿ ಆಳವಿದೆ. ಪೊಲೀಸರು ಸದ್ಯ ವೆಂಕಟೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಪುತ್ರನನ್ನು ಕಳೆದುಕೊಂಡ ವೆಂಕಟೇಶ್ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲುಮುಟ್ಟಿತ್ತು. ಪ್ರಕರಣ ದಾಖಲಿಸಿರುವ ಸರ್ಜಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

vlcsnap 2017 10 13 15h46m27s368

vlcsnap 2017 10 13 15h46m38s060

vlcsnap 2017 10 13 15h47m53s227

Capture

vlcsnap 2017 10 13 16h11m10s220

vlcsnap 2017 10 13 15h48m17s603

vlcsnap 2017 10 13 15h48m35s839

 

 

Share This Article
Leave a Comment

Leave a Reply

Your email address will not be published. Required fields are marked *