ರಾಯಚೂರು: ಕಬ್ಬಿಣದ ವಸ್ತುಗಳು ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಂತರಗಂಗಿ ಬಳಿ ಬೆಳಗಿನ ಜಾವ ನಡೆದಿದೆ.
ಲಿಂಗಸುಗೂರಿನ ಮುದಗಲ್ ಗ್ರಾಮದ ನಿವಾಸಿ ಶೀಲಪ್ಪ (40) ಮೃತ ಲಾರಿ ಚಾಲಕ. ವ್ಯಕ್ತಿಯು ಲಾರಿ ಪಲ್ಟಿಯಿಂದಾಗಿ ಕೆಳಗಡೆ ಸಿಲುಕಿದ್ದರು. ಆ ಬಳಿಕ ಮಸ್ಕಿ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದರು. ನಂತರದಲ್ಲಿ ಎರಡು ಜೆಸಿಬಿಗಳ ಸಹಾಯದಿಂದ ಲಾರಿ ಕೆಳಗಡೆ ಸಿಲುಕಿದ್ದ ಶವ ಹೊರ ತೆಗೆಯಲಾಯಿತು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಲಾಲೂ ಪ್ರಸಾದ್ ಯಾದವ್ ಸ್ಪರ್ಧೆ
ತೆಲಂಗಾಣದ ಮೆಹಬೂಬ್ ನಗರದ ಲಾರಿ ಇದಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸತತ 2ನೇ ದಿನ ಪಾಸಿಟಿವಿಟಿ ದರ ಏರಿಕೆ – ರಾಜ್ಯದಲ್ಲಿಂದು 463 ಮಂದಿಗೆ ಕೊರೊನಾ