ಬೈಕ್, ಲಾರಿ ಡಿಕ್ಕಿ: ಸ್ಥಳದಲ್ಲೇ ತಂದೆ-ಮಕ್ಕಳು ಸೇರಿ ಮೂವರ ಸಾವು

Public TV
0 Min Read
RCR ACCIDENT AV 2

ರಾಯಚೂರು: ಸಲೂನ್ ಗೆ ತೆರಳಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಮರಳಿ ಬರುವಾಗ ಬೈಕಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾನ್ವಿ ತಾಲೂಕಿನ ತುಪ್ಪದೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಹುಲಿಗೆಪ್ಪ(35) ಮಕ್ಕಳಾದ ನರಸಿಂಹ(10) ಹಾಗೂ ಸಿದ್ದು(8) ಸಾವನ್ನಪ್ಪಿದ್ದಾರೆ. ತುಪ್ಪದೂರು ಗ್ರಾಮದಿಂದ ನೀರಮಾನ್ವಿಗೆ ಬಂದು ಹೇರ್ ಕಟ್ಟಿಂಗ್ ಮಾಡಿಸಿಕೊಂಡು ಮರಳಿ ಗ್ರಾಮಕ್ಕೆ ಬರುವಾಗ ಬೈಕಿಗೆ ಲಾರಿ ಡಿಕ್ಕಿಹೊಡೆದಿದೆ.

ಲಾರಿ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RCR ACCIDENT AV 4

RCR ACCIDENT AV 1

Share This Article
Leave a Comment

Leave a Reply

Your email address will not be published. Required fields are marked *