ನೋಡ ನೋಡುತ್ತಿದ್ದಂತೆ ಪಾದಚಾರಿ ಮೇಲೆ ಹರಿದ ಲಾರಿ- ವ್ಯಕ್ತಿ ಸ್ಥಳದಲ್ಲೇ ಸಾವು

Public TV
0 Min Read
MND ACCIDENT

ಮಂಡ್ಯ: ಸಾರ್ವಜನಿಕರು ನೋಡ ನೋಡುತ್ತಿದ್ದಂತೆ ಲಾರಿ ಹರಿದು ಪಾದಚಾರಿ ಒಬ್ಬರು ಮೃತಪಟ್ಟಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

ಶಂಕರ್ (40) ಮೃತ ದುರ್ದೈವಿ. ಶಂಕರ್ ಪಾಂಡವಪುರ ಪಟ್ಟಣದ ರಾಜ್‍ಕುಮಾರ್ ವೃತ್ತದ ಬಳಿ ರಸ್ತೆ ದಾಟಲು ಹೋಗಿದ್ದಾರೆ. ಈ ವೇಳೆ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ಪಾದಾಚಾರಿ ಮೇಲೆ ಹರಿದು ಮೃತಪಟ್ಟಿದ್ದಾರೆ.

MND ACCIDENT 1 1

ನೋಡ ನೋಡುತ್ತಿದ್ದಂತೆ ನೂರಾರು ಜನ ಸಾರ್ವಜನಿಕರೆದುರೇ ನಡೆದ ಅಪಘಾತ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಲಾರಿ ಹರಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MND ACCIDENT 2

Share This Article
Leave a Comment

Leave a Reply

Your email address will not be published. Required fields are marked *