ಹೈದರಾಬಾದ್: ಉದ್ಯಮಿ ಭಕ್ತರೊಬ್ಬರು ಲಾರ್ಡ್ ಬಾಲಾಜೀ ತಿರುಪತಿಗೆ ಚಿನ್ನದ ಎರಡು ಹಸ್ತಗಳನ್ನು ದಾನ ಕೊಟ್ಟಿದ್ದಾರೆ.
ತಮಿಳುನಾಡಿನ ನಿವಾಸಿ ತಂಗಡೋರೈ ಅವರು ಬರೋಬ್ಬರಿ 2.25 ಕೋಟಿ ಮೌಲ್ಯ ಬೆಲೆ ಬಾಳುವ ಚಿನ್ನದ ಅಭಯ ಹಸ್ತ ಮತ್ತು ಕಟಿ ಹಸ್ತವನ್ನು ತಿರುಪತಿಯ ಬಾಲಾಜಿ ದೇವಾಲಯಕ್ಕೆ ದಾನ ಮಾಡಿದ್ದಾರೆ. ಇವರು ತಮಿಳುನಾಡಿನ ಉದ್ಯಮಿ ಎಂದು ತಿಳಿದು ಬಂದಿದೆ.
ತಂಗಡೋರೈ ಶನಿವಾರ “ಸುಪ್ರಭಾತ ಸೇವಾ” ಸಂದರ್ಭದಲ್ಲಿ ತಿರುಮತಿ ತಿರುಮಲ ದೇವಸ್ಥಾನದ ಅಧಿಕಾರಿಗಳಿಗೆ ಚಿನ್ನದ ‘ಅಭಯ ಹಸ್ತ’ ಮತ್ತು ‘ಕಟಿ ಹಸ್ತ’ ಆಭರಣಗಳನ್ನು ಅರ್ಪಿಸಿದ್ದಾರೆ. ಈ ಎರಡು ಚಿನ್ನದ ಕೈಗಳು ತಲಾ 6 ಕಿ.ಗ್ರಾಂ ತೂಕವಿದೆ.
ಶುಕ್ರವಾರ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಇಲ್ಲಿನ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
Andhra Pradesh: Tangadorai, a resident of Tamil Nadu, is donating 'Abhaya Hastam' and 'Kati Hastam' to Tirupati Balaji temple in Tirumala. The jewellery, worth Rs 2.25 Crore, will be handed over to Tirumala Tirupati Devasthanam (TTD) officials today during 'Suprabhata Seva'. pic.twitter.com/Gv4wMokuqb
— ANI (@ANI) June 14, 2019