ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ (First Phase Election) ನಡೆಯುತ್ತಿದ್ದು, ಮತದಾನ ಅತ್ಯಂತ ಬೆಂಗಳೂರಿನಲ್ಲಿ ಪೇಷೆಂಟ್ ಒಬ್ಬರು ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
39 ವರ್ಷದ ಹೆಚ್.ಎನ್ ಮುರಳೀಧರ್ ಅವರು ಇಂದು ಮಧ್ಯಾಹ್ನ ಶಸ್ತ್ರಚಿಕಿತ್ಸೆ ನಡೆಯುವುದಿತ್ತು. ಆದಾಗ್ಯೂ ಅವರು ತಾನು ತನ್ನ ಹಕ್ಕು ಚಲಾಯಿಸಬೇಕು ಎಂಬ ಬಯಕೆ ವ್ಯಕ್ತಪಡಿಸಿದರು. ಮುರಳೀದರ್ ಇಚ್ಛೆಯಂತೆ ಆಸ್ಪತ್ರೆಯ ವೈದ್ಯರು ಮತ ಹಾಕಲು ಅನುವು ಮಾಡಿಕೊಟ್ಟರು. ವೈದ್ಯರ ತಂಡವು ಮುರಳೀಧರ್ ಅವರು ಗೊತ್ತುಪಡಿಸಿದ ಮತಗಟ್ಟೆಗೆ ಪ್ರಯಾಣಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಯಿತು.
ವೈದ್ಯರ ಸಲಹೆ ಪಡೆದ ಬಳಿಕ ಮುರಳೀಧರ್ ಅವರು ಅಂಬುಲೆನ್ಸ್ ನಲ್ಲಿ ಬಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹೊಸಕೋಟೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ತೆರಳೋ ಮುನ್ನ ಮತ ಚಲಾಯಿಸಿದ ಮದುಮಗಳು
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ 11 ಗಂಟೆಯವರೆಗೆ ಒಟ್ಟು 22.34% ರಷ್ಟು ಮತದಾನವಾಗಿದೆ.