Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!

Public TV
Last updated: May 20, 2024 12:15 pm
Public TV
Share
5 Min Read
Prime Minister Narendra Modi files nomination from Varanasi Lok Sabha seat for LokSabha Elections 2024
SHARE

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರು ಮೇ 14 ರಂದು ನಾಮಪತ್ರ ಸಲ್ಲಿಸಿದ್ದಾರೆ. ಬನಾರಸಿ ಸೀರೆ, ಪಾನ್, ಅಸ್ಸಿ ಘಾಟ್, ಮೋಕ್ಷದಾಯಿನಿ ಗಂಗಾ ಮತ್ತು ಬಾಬಾ ವಿಶ್ವನಾಥ್ ಜೊತೆಗೆ ರಾಜಕೀಯವೂ ಕುತೂಹಲಕಾರಿಯಾಗಿದೆ.

ಹೌದು. ಭಗವಾನ್ ಶಿವನ ನಗರವಾದ ಕಾಶಿಯನ್ನು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನಾವು ಕಾಶಿ, ಬನಾರಸ್ ಅಥವಾ ವಾರಣಾಸಿ ಎಂದು ಏನೇ ಕರೆದರೂ, ಈ ನಗರವು ಇತಿಹಾಸಕ್ಕಿಂತ ಪುರಾತನವಾದುದು ಎಂದು ಹೇಳಲಾಗುತ್ತದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಸನ್ನಿವೇಶದ ಬಗ್ಗೆ ಮಾತನಾಡುತ್ತಾ ಹೋದರೆ, ಈ ನಗರವು ಯಾವಾಗಲೂ ಶಿವ-ಶಕ್ತಿಯ ದಮ್-ಡಮ್ ಮತ್ತು ಬಾಬಾ ಭೋಲೆಯ ಬಾಮ್-ಬಾಮ್ ಶಬ್ದಗಳೊಂದಿಗೆ ಅನುರಣಿಸುತ್ತದೆ. ಇಲ್ಲಿ ಪವಿತ್ರ ಗಂಗಾ ನದಿ ಇದ್ದು, ಬಾಬಾ ವಿಶ್ವನಾಥ್ ಭೋಲೆ ಶಂಕರನ ರೂಪದಲ್ಲಿಯೂ ಇದ್ದಾರೆ. ಮೋಕ್ಷದಾಯಿನಿ ಗಂಗೆಯ ದಡದಲ್ಲಿ ನಿರ್ಮಿಸಿರುವ ಮಣಿಕರ್ಣಿಕಾ ಘಾಟ್, ದಶಾಶ್ವಮೇಧ ಘಾಟ್ ಸೇರಿದಂತೆ 80 ಘಾಟ್‍ಗಳಿಗೆ ಕಾಶಿ ವಿಶ್ವವಿಖ್ಯಾತವಾಗಿದೆ. ಒಂದೆಡೆ ಗಂಗಾ ಮತ್ತು ಅದರ ಪವಿತ್ರ ಘಾಟ್‍ಗಳಿಂದಾಗಿ ಈ ನಗರವು ಹಿಂದೂಗಳಿಗೆ ಯಾತ್ರಾಸ್ಥಳವಾಗಿದ್ದರೆ, ಮತ್ತೊಂದೆಡೆ ಈ ನಗರವು ಮುಸ್ಲಿಂ ಕುಶಲಕರ್ಮಿಗಳ ಕೌಶಲ್ಯಕ್ಕಾಗಿ ವಿಶ್ವಪ್ರಸಿದ್ಧವಾಗಿದೆ. ಗಂಗಾ-ಜಮುನಿ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಾಶಿಯನ್ನು ದೀಪಗಳ ನಗರ ಮತ್ತು ಜ್ಞಾನದ ನಗರ ಎಂದೂ ಕರೆಯುತ್ತಾರೆ.

NARENDRA MODI 1 1

ಈ ನಗರವು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೊಂದಿದೆ. ಆದರೆ ಗಂಗಾನದಿಯ ವಿವಿಧ ಘಾಟ್‍ಗಳು ತಮ್ಮದೇ ಆದ ಕಥೆಗಳನ್ನು ಹೊಂದಿವೆ. ಕಾಶಿ ಅಥವಾ ವಾರಣಾಸಿ ಸುಮಾರು 3000 ವರ್ಷಗಳಷ್ಟು ಹಳೆಯದಾದ ನಗರ ಎಂದು ನಂಬಲಾಗಿದೆ. ಆದಾಗ್ಯೂ ಕೆಲವು ಇತಿಹಾಸಕಾರರು ಈ ನಗರವು 4000-5000 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ನಂಬುತ್ತಾರೆ. ಕಾಶಿ ಅನೇಕ ಶತಮಾನಗಳಿಂದ ಪ್ರಪಂಚದಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಜೊತೆಗೆ ನಗರವು ಶಿಕ್ಷಣ ಮತ್ತು ಆಹಾರಕ್ಕೂ ಹೆಸರುವಾಸಿಯಾಗಿದೆ.

ವಾರಣಾಸಿ ಎಂಬ ಹೆಸರು ಹೇಗೆ ಬಂತು?: ಈ ನಗರಕ್ಕೆ ವಾರಣಾಸಿ ಎಂಬ ಹೆಸರೂ ಇದೆ. ಇದು ಇಲ್ಲಿ ಇರುವ ಎರಡು ಸ್ಥಳೀಯ ನದಿಗಳಾದ ವರುಣಾ ನದಿ ಮತ್ತು ಅಸಿ ನದಿಯಿಂದ ರೂಪುಗೊಂಡಿದೆ. ಈ ಎರಡು ನದಿಗಳು ಕ್ರಮವಾಗಿ ಉತ್ತರ ಮತ್ತು ದಕ್ಷಿಣದಿಂದ ಬಂದು ಗಂಗಾ ನದಿಯನ್ನು ಸೇರುತ್ತವೆ. ಆದ್ದರಿಂದ ಇದಕ್ಕೆ ವಾರಣಾಸಿ ಎಂಬ ಹೆಸರು ಬಂದಿದೆ. ಕಾಶಿಯ ಮೂಲದ ಬಗ್ಗೆ ಹೇಳುವುದಾದರೆ ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳ ಪ್ರಕಾರ, ಶಿವನು ಸ್ವತಃ ಕಾಶಿ ನಗರವನ್ನು ಸ್ಥಾಪಿಸಿದನು. ಕಾಶಿಯು ಶಿವನ ತ್ರಿಶೂಲದ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಭೋಲೆನಾಥನು ಕಾಶಿ ವಿಶ್ವನಾಥನ ರೂಪದಲ್ಲಿ ಕುಳಿತಿದ್ದಾನೆ. ಇದು 12 ಜ್ಯೋತಿಲಿರ್ಂಗಗಳಲ್ಲಿ ಒಂದಾಗಿದೆ.

NARENDRA MODI 3

ರಾಜಕೀಯ ಪ್ರಾಮುಖ್ಯತೆ: ಈ ನಗರವು ಕಳೆದ 10 ವರ್ಷಗಳಿಂದ ಭಾರತದ ರಾಜಕೀಯದ ಕೇಂದ್ರಬಿಂದುವಾಗಿ ಉಳಿದಿದೆ. ಯಾಕೆಂದರೆ ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿದೆ. ವಾರಣಾಸಿ ಲೋಕಸಭಾ ಕ್ಷೇತ್ರದಿಂದ 2 ಬಾರಿ ಅನಿರೀಕ್ಷಿತ ಗೆಲುವು ಸಾಧಿಸಿದ ಬಳಿಕ ಇದೀಗ ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರು ಮೇ 14 ರಂದು ಮಂಗಳವಾರ ಅದೇ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಇದು ಈ ಕ್ಷೇತ್ರದಿಂದ ಅವರ ಮೂರನೇ ಇನ್ನಿಂಗ್ಸ್ ಆಗಿದೆ. 2014 ರಲ್ಲಿ ಮೊದಲ ಬಾರಿಗೆ ಜಯಗಳಿಸಿದ ಬಳಿಕ ಕಾಶಿ ತಲುಪಿದ ಪ್ರಧಾನಿ ಮೋದಿ, ಗಂಗಾನದಿಯ ಮೆಟ್ಟಿಲುಗಳ ಮೇಲೆ ತಲೆಬಾಗಿದ್ದರು. ನರೇಂದ್ರ ಮೋದಿಯವರು ಕಾಶಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರು ಈ ನಗರವನ್ನು ತಮ್ಮ ತಾಯಿಯಂತೆ ಪರಿಗಣಿಸುತ್ತಾರೆ. ಅಲ್ಲದೆ ಪದೇ ಪದೇ ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆದಿದ್ದಾಳೆ ಎಂದು ಹೇಳುತ್ತಾರೆ.

ಭರ್ಜರಿ ಜಯಗಳಿಸಿದ್ದ ಮೋದಿ: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರನ್ನು 371,784 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ನರೇಂದ್ರ ಮೋದಿ 581,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 209,238 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಕೇವಲ 75,614 ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಅಜಯ್ ರೈ ಮತ್ತೆ ಕಾಂಗ್ರೆಸ್ ನಿಂದ ಕಾಶಿ ಅಭ್ಯರ್ಥಿಯಾಗಿದ್ದಾರೆ.

PM Narendra Modi declares total assets worth Rs 3 cr in 2024 poll affidavit 1

2019ರಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ಕಾಶಿಯಿಂದ ಗೆದ್ದು ಮತ್ತೆ ಈ ಕ್ಷೇತ್ರದಿಂದ ಸಂಸದರಾದರು. ಈ ಬಾರಿ ನರೇಂದ್ರ ಮೋದಿ ಅವರು 2014 ಕ್ಕಿಂತ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಶಾಲಿನಿ ಯಾದವ್ ಅವರನ್ನು 479,505 ಮತಗಳಿಂದ ಸೋಲಿಸಿದ್ದರು. ನರೇಂದ್ರ ಮೋದಿ 674,664 ಮತಗಳನ್ನು ಪಡೆದರೆ, ಎಸ್‍ಪಿ ಅಭ್ಯರ್ಥಿ ಶಾಲಿನಿ ಯಾದವ್ 195,159 ಮತಗಳನ್ನು ಗಳಿಸಿದ್ದರು. ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 152,548 ಮತಗಳನ್ನು ಪಡೆಸಿದ್ದರು.

ರಾಜಕೀಯ ಇತಿಹಾಸ: ಠಾಕೂರ್ ರಘುನಾಥ್ ಸಿಂಗ್ ಕಾಶಿ ಕ್ಷೇತ್ರದಿಂದ ಮೊದಲ ಸಂಸದರಾಗಿದ್ದರು. ರಘುನಾಥ್ ಸಿಂಗ್ ಅವರು 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು ಮತ್ತು ನಂತರ ಅವರು 1957 ಮತ್ತು 1962 ರಲ್ಲಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾದರು. ಅವರು ಸತತ ಮೂರು ಅವಧಿಗೆ ಇಲ್ಲಿಂದ ಸಂಸದರಾಗಿದ್ದರು. ನಂತರ 1967 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನಾರಾಯಣ ಸಿಂಗ್ ಈ ಸ್ಥಾನವನ್ನು ಗೆದ್ದರು. 1971ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ರಾಜಾರಾಮ್ ಶಾಸ್ತ್ರಿ, 1977ರಲ್ಲಿ ಜನತಾ ಪಕ್ಷದ ಚಂದ್ರಶೇಖರ್, 1980 ಮತ್ತು 1984ರಲ್ಲಿ ಕಾಂಗ್ರೆಸ್ ಪಕ್ಷದ ಕಮಲಾಪತಿ ತ್ರಿಪಾಠಿ ಮತ್ತು 1989ರಲ್ಲಿ ಜನತಾದಳದ ಅನಿಲ್ ಶಾಸ್ತ್ರಿ ಈ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು.

VARANASI

ಬಿಜೆಪಿಯು 1991, 1996, 1998 ಮತ್ತು 1999 ರಲ್ಲಿ ಸತತ 4 ಬಾರಿ ಗೆದ್ದಿದೆ. 2004ರಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದು, ಬಳಿಕ 2009ರಿಂದ 2019ರವರೆಗೆ ಇಲ್ಲಿ ಬಿಜೆಪಿ ನಿರಂತರವಾಗಿ ಗೆಲುವು ಸಾಧಿಸುತ್ತಿದೆ. 2009ರಲ್ಲಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಸಂಸದರಾದರು. ಇದಾದ ನಂತರ 2014 ಮತ್ತು 2019ರಲ್ಲಿ ನರೇಂದ್ರ ಮೋದಿ ಐತಿಹಾಸಿಕ ಗೆಲುವು ದಾಖಲಿಸಿ ಸಂಸದರಾದರು.

ಗಂಗೆಯ 88 ಘಾಟ್‍ಗಳ ನಗರ ಕಾಶಿ: ಕಾಶಿ ನಗರದ ಗಂಗೆಯ ದಡದಲ್ಲಿ ಒಟ್ಟು 88 ಘಾಟ್‍ಗಳಿವೆ. ಅವುಗಳಲ್ಲಿ ಸ್ನಾನ ಮತ್ತು ಪೂಜೆ ಸಮಾರಂಭಗಳು ಹೆಚ್ಚಿನ ಘಾಟ್‍ಗಳಲ್ಲಿ ನಡೆಯುತ್ತವೆ. ಆದರೆ ಎರಡು ಘಾಟ್‍ಗಳನ್ನು ಪ್ರತ್ಯೇಕವಾಗಿ ದಹನ ಸ್ಥಳಗಳಾಗಿ ಬಳಸಲಾಗುತ್ತದೆ. ಒಟ್ಟು 12 ಪ್ರಸಿದ್ಧ ಘಾಟ್‍ಗಳಿವೆ. ಈ ನಗರವು ಕಬೀರ್, ರವಿದಾಸ್, ಮುನ್ಷಿ ಪ್ರೇಮಚಂದ್, ಆಚಾರ್ಯ ರಾಮಚಂದ್ರ ಶುಕ್ಲಾ, ಜೈಶಂಕರ್ ಪ್ರಸಾದ್, ಪಂಡಿತ್ ರವಿಶಂಕರ್, ಗಿರಿಜಾ ದೇವಿ, ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಂತಹ ಕಲಾವಿದರ ನಗರವಾಗಿದೆ. ಅಷ್ಟೇ ಅಲ್ಲ ಈ ನಗರವು ಗಂಗೆಯ ಭವ್ಯವಾದ ಆರತಿ ಮತ್ತು ಭಾರತ ಮತ್ತು ವಿದೇಶಗಳ ಪ್ರವಾಸಿಗರಿಂದ ಪ್ರಕಾಶಿಸಲ್ಪಟ್ಟಿದೆ.

TAGGED:LokSabha Elections 2024loksabha eonstituencynarendra modiVaranasiನರೇಂದ್ರ ಮೋದಿಲೋಕಸಭಾ ಕ್ಷೇತ್ರಲೋಕಸಭಾ ಚುನಾವಣೆ 2024ವಾರಣಾಸಿ
Share This Article
Facebook Whatsapp Whatsapp Telegram

Cinema Updates

amid calls for boycott aamir khan productions changes display pic to indian flag internet calls it damage control
‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!
9 hours ago
Rani Mukerji Shah Rukh Khan
ʻಕಿಂಗ್’ ಜೊತೆ ಮತ್ತೆ ಒಂದಾಗಲಿದ್ದಾರೆ ರಾಣಿ ಮುಖರ್ಜಿ!
11 hours ago
disha madan
ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್
15 hours ago
pawan kalyan 1 1
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ರಿಲೀಸ್ ಡೇಟ್ ಅನೌನ್ಸ್
15 hours ago

You Might Also Like

back pain
Health

ಬೆನ್ನುನೋವೆ? – ನಿತ್ಯ ಈ 5 ಯೋಗಾಸನ ಮಾಡಿ ಪರಿಹಾರ ಕಂಡುಕೊಳ್ಳಿ..

Public TV
By Public TV
18 minutes ago
Veg Cutlet
Food

ಥಟ್ ಅಂತ ರೆಡಿ ಮಾಡಿ ವೆಜ್ ಕಟ್ಲೆಟ್

Public TV
By Public TV
23 minutes ago
RCB 2
Bengaluru City

IPL 2025 | ಪ್ಲೇ-ಆಫ್‌ ಮೇಲೆ ಆರ್‌ಸಿಬಿ ಕಣ್ಣು – ಕೊಹ್ಲಿಯೇ ಆಕರ್ಷಣೆ, ಇಂದು ಗೆದ್ದರೆ ಇತಿಹಾಸ

Public TV
By Public TV
23 minutes ago
BSF Army Purnam kumar
Latest

ಬಿಎಸ್‌ಎಫ್‌ ಯೋಧನಿಗೆ 20 ದಿನವೂ ಇನ್ನಿಲ್ಲದ ಟಾರ್ಚರ್‌ ನೀಡಿದ್ದ ಪಾಕ್‌

Public TV
By Public TV
8 hours ago
Niraj Chopra
Latest

ದೋಹಾ ಡೈಮಂಡ್ ಲೀಗ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

Public TV
By Public TV
8 hours ago
Muslim protest in Belgavi Miscreants throw slippers police
Belgaum

ಬೆಳಗಾವಿಯಲ್ಲಿ ಮುಸ್ಲಿಮರ ಪ್ರತಿಭಟನೆ – ಪೊಲೀಸರ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳು

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?