ಒಂದು ಅವಕಾಶ ಕೊಡಿ, 5 ವರ್ಷ ನಿಮ್ಮ ಸೇವಕನಾಗಿ ಕೆಲ್ಸ ಮಾಡ್ತೀನಿ : ಉಮೇಶ್ ಜಾಧವ್

Public TV
2 Min Read
umes jadhav

– ಕುಸ್ತಿ ಆಡಲು ಸಿದ್ಧನಾಗಿದ್ದೇನೆ, ಸಾಥ್ ಕೊಡಿ
– ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲೇ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ
– ವೇದಿಕೆ ಮೇಲೆ ಸಾಷ್ಟಾಂಗ ನಮಸ್ಕಾರ ಹಾಕಿದ ಉಮೇಶ್ ಜಾಧವ್

ಕಲಬುರಗಿ: ನಿಮಗೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ ನನಗೆ ಒಂದು ಅವಕಾಶ ಕೊಡಿ. ಮುಂದಿನ 5 ವರ್ಷಗಳ ಕಾಲ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಜಾಧವ್ ಮತದಾರರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಹಿಂದೆ ದೊಡ್ಡ ಶಕ್ತಿಗಳಿವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಜನ ನನ್ನ ಮತ ಹಾಕಿ ಗೆಲ್ಲಿಸಬೇಕು. ರಾಜ್ಯ ಸರ್ಕಾವು ಕಾಂಗ್ರೆಸ್ ಸಂಸದೀಯ ನಾಯಕ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಪರ ಕೆಲಸ ಮಾಡುತ್ತಿದೆ. ಯಾರಿಗೂ ನೀವು ಹೆದರದೇ ನನಗೆ ಮತ ಹಾಕಿ ಎಂದು ವೇದಿಕೆ ಮೇಲೆ ಮತ್ತೊಮ್ಮೆ ಸಾಷ್ಟಾಂಗ ನಮಸ್ಕಾರ ಮಾಡಿ ಮತದಾರರಿಗೆ ಮನವಿ ಮಾಡಿಕೊಂಡರು.

umes jadhav A

ಸೋಲಿಲ್ಲದ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಏನು ಮಾಡಿದ್ದಾರೆ? ಕಲಬುರಗಿಗೆ ಮೋದಿ ಕೊಡುಗೆ ಏನು ಅಂತ ಕೇಳುತ್ತಾರೆ. ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು 371(ಜೆ) ಜಾರಿಗಾಗಿ ಒಂದೇ ಒಂದು ಪತ್ರ ಬರೆದಿಲ್ಲ. ಜಿಲ್ಲೆಯಲ್ಲಿರುವ ಅನೇಕ ಕಾರ್ಖಾನೆಗಳು ಬಂದ್ ಆಗಿವೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮಕ್ಕಳು ಸಾವನಪ್ಪಿದ್ದಾರೆ. ಅವರು ತಂದೆಯ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ನಾವು ಅವರ ವಿರುದ್ಧ ಕುಸ್ತಿ ಆಡಲು ಸಿದ್ಧನಾಡಿದ್ದೇನೆ. ಹೀಗಾಗಿ ನೀವು ನನಗೆ ಸಾಥ್ ನೀಡಬೇಕು ಎಂದು ಮತದಾರರಿಗೆ ಹೇಳಿಕೊಂಡರು.

MALLIKARJUNA KHARGE

ನನ್ನ ನಾಮಪತ್ರ ರದ್ದು ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಯತ್ನಗಳನ್ನು ಮಾಡಿದ್ದಾರೆ. ನಾನು ಹಣ ಕೊಟ್ಟು ಜನರನ್ನು ಪ್ರಚಾರಕ್ಕೆ ಕರೆಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ಸೋಲಿನ ಭೀತಿಯಿಂದಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

Share This Article
Leave a Comment

Leave a Reply

Your email address will not be published. Required fields are marked *