ನನ್ನನ್ನು ಗೆಲ್ಲಿಸಲು ನನ್ನ ಗುರುಗಳು ಬಂದಿದ್ದು, ಆನೆಬಲ ಸಿಕ್ತು: ಉಮೇಶ್ ಜಾಧವ್

Public TV
1 Min Read
JADVA

ಕಲಬುರಗಿ: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಧಿಕೃತವಾಗಿ ಅಂಗಿಕಾರವಾಗದೇ ಇದ್ದರೂ ಲೋಕಸಭಾ ಚುನಾವಣೆಯ ಸ್ಪರ್ಧೆ ಖಚಿತ ಎಂದು ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಿಕೆಯ ಬಗ್ಗೆ ಕೆಲ ಶಕ್ತಿಗಳು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಇದೀಗ ನನ್ನ ಗೆಲ್ಲಿಸಲು ನನ್ನ ಗುರುಗಳಾದ ಮಾಲಕರೆಡ್ಡಿ ಸಹ ಬಿಜೆಪಿ ಬಂದಿದ್ದಾರೆ. ಮಾಲಕರೆಡ್ಡಿ ಸೇರ್ಪಡೆಯಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

ನನ್ನ ಸ್ಪರ್ಧೆ ಬಗ್ಗೆ ಜನರು ತಲೆಕೆಡಿಸಿಕೊಳ್ಳಬಾರದು. ಆಡಳಿತ ಯಂತ್ರ ದುರುಪಯೋಗವಾಗಲು ಬಿಡುವುದಿಲ್ಲ. ಅಧಿಕಾರಿಗಳು ನಿಸ್ಪಕ್ಷವಾಗಿ ಚುನಾವಣೆ ನಡೆಸುತ್ತಾರೆ. ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಾಮಪತ್ರ ಸಲ್ಲಿಸುವ ದಿನಾಂಕ ಫೈನಲ್ ಮಾಡುವುದಾಗಿ ಹೇಳಿದ್ದರು.

ಇದೇ ಸಂದರ್ಭದಲ್ಲಿ ಶಹಬಾದ್ ನಗರಸಭೆಯ ಜೆಡಿಎಸ್ ಸದಸ್ಯ ಜಬೀಖಾನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮುಸ್ಲಿಂ ಮತವನ್ನು ಸೆಳೆಯಲು ಉಮೇಶ್ ಜಾಧವ್ ಜಬೀಖಾನ್ ಅವರನ ಮನ ಒಲಿಸಿ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *