ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆರ್ಜೆಡಿ (RJD) ನಾಯಕ ತೇಜಸ್ವಿ ಯಾದವ್ (Tejaswi Yadav) ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಭಾರೀ ಚರ್ಚೆಗೀಡು ಮಾಡಿದ ಬೆನ್ನಲ್ಲೇ ಜೆಡಿಯು ಸ್ಪಷ್ಟನೆ ನೀಡಿದೆ.
ಜೆಡಿಯು ನಾಯಕ ಕೆಸಿ ತ್ಯಾಗಿ (KC Tyagi) ಅವರು ಪ್ರತಿಕ್ರಿಯಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. ವಿಮಾನದಲ್ಲಿ ನಿತೀಶ್ ಜಿ (Nitish Kumar) ಅವರು ಮುಂದೆ ಕುಳಿತಿದ್ದಾರೆ. ಅವರ ಮುಂದೆ ಪೈಲಟ್ ಕುಳಿತಿದ್ದಾರೆ ಎಂದು ಹೇಳಿದ್ದಾರೆ. ಈ ಊಹಾಪೋಹಗಳೆಲ್ಲವೂ ಅಸಂಬದ್ಧವಾಗಿದ್ದು, ಈ ವದಂತಿಗಳನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ಕೆ.ಸಿ.ತ್ಯಾಗಿ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ ನಿತೀಶ್ ಕುಮಾರ್, ತೇಜಸ್ವಿ ಯಾದವ್
ನಮಗೆ ಯಾವುದೇ ವಿಶೇಷ ಬೇಡಿಕೆ. ಮೊದಲಿನಿಂದಲೂ ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಆ ಬೇಡಿಕೆ ಈಗಲೂ ಹಾಗೆಯೇ ಇರುತ್ತದೆ. ಭಾರತ ಒಕ್ಕೂಟದ ಮೂಲದವರು ನಾವೇ ಆದರೆ ಅವರ ಅಪ್ರಾಯೋಗಿಕ ಕೆಲಸದಿಂದಾಗಿ ಇದೆಲ್ಲ ಸಂಭವಿಸಿದೆ ಎಂದು ಕೆ.ಸಿ.ತ್ಯಾಗಿ ಹೇಳಿದರು. ಇಂದು ಅವರು ನಿತೀಶ್ ಜೀ ನಮ್ಮೊಂದಿಗಿದ್ದರೆ ಪರಿಸ್ಥಿತಿ ವಿಭಿನ್ನವಾಗುತ್ತಿತ್ತು ಎಂದು ಭಾವಿಸುತ್ತಾರೆ. ಆದರೆ ಇಂಡಿಯಾ ಒಕ್ಕೂಟವನ್ನು ಈ ರೀತಿ ನಿರಾಶೆಗೊಳಿಸುವುದನ್ನು ನಾವು ಮುಂದುವರಿಸುವುದಾಗಿ ಹೇಳಿದರು.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದದ್ದು, ಸದ್ಯ ಕೇಂದ್ರದಲ್ಲಿ ಸರ್ಕಾರ ರಚನೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಬಿಜೆಪಿಗೆ ಬಹುಮತ ಇಲ್ಲದ ಕಾರಣ ಎನ್ಡಿಎ ಮೈತ್ರಿಕೂಟದ ಅಗತ್ಯವಿದೆ. ಪ್ರಸ್ತುತ ಎನ್ಡಿಎಯಲ್ಲಿ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ದೆಹಲಿಗೆ ವಿಮಾನದಲ್ಲಿ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಜಂಟಿ ಪ್ರಯಾಣವು ಎಲ್ಲರನ್ನು ಆಶ್ಚರ್ಯಗೊಳಿಸಿತು.