Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಶ್ರೀಲಂಕಾಗೆ ನೀಡಿದೆ – ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ RTI ಉತ್ತರ

Public TV
Last updated: March 31, 2024 12:55 pm
Public TV
Share
4 Min Read
Annamalai 2
SHARE

– ಆರ್‌ಟಿಐ ಅಡಿ ಪ್ರಶ್ನೆ ಕೇಳಿದ ಅಣ್ಣಾಮಲೈ
– ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ
– ಉತ್ತರದಲ್ಲಿ ನೆಹರೂ ನೀಡಿದ ಟಿಪ್ಪಣಿ ಉಲ್ಲೇಖ
– ಕಚ್ಚತೀವು ಪ್ರದೇಶ ತನ್ನದೆಂದು ಸಾಬೀತು ಪಡಿಸಲು ಭಾರತ ವಿಫಲ

ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಕಚ್ಚತೀವು (Katchatheevu) ದ್ವೀಪ ಪ್ರದೇಶದ ಬಗ್ಗೆ ಆರ್‌ಟಿಐ ಅಡಿ ಪಡೆದ ಮಾಹಿತಿ ತಮಿಳುನಾಡಿನಲ್ಲಿ (Tamil Nadu) ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.

ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್‌ ಸರ್ಕಾರ (Congress Government) ಶ್ರೀಲಂಕಾ ಬಿಟ್ಟುಕೊಟ್ಟಿದೆ. ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಮತ್ತು ಡಿಎಂಕೆ (DMK) ತಮಿಳುನಾಡಿಗೆಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಈಗ ಕಿಡಿಕಾರಿದೆ.

ಈಗ ಯಾಕೆ ಸುದ್ದಿ?
ಡಿಎಂಕೆ ಮತ್ತು ಕಾಂಗ್ರೆಸ್‌ ವಿರುದ್ಧ ಯುದ್ಧ ಸಾರಿರುವ ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕಚ್ಚತೀವು ಪ್ರದೇಶದ ಬಗ್ಗೆ ಅಂದಿನ ಕೇಂದ್ರ ಸರ್ಕಾರದ ನಿರ್ಧಾರ ಏನಿತ್ತು? ಶ್ರೀಲಂಕಾಗೆ ಈ ದ್ವೀಪ ಸೇರಿದ್ದು ಹೇಗೆ ಎಂಬುದರ ವಿವರವನ್ನು ಆರ್‌ಟಿಐ ಅಡಿ ಕೇಳಿ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿಯ ವಿವರವನ್ನು ಮಾಧ್ಯಮವೊಂದು ಪ್ರಕಟಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ #Katchatheevu ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

Congress & DMK colluded in the ceding of Katchatheevu by Sri Lanka.

The Congress, whenever in power, had the least interest in securing our country’s border, territorial integrity & sovereignty. pic.twitter.com/mryS2eGumE

— K.Annamalai (மோடியின் குடும்பம்) (@annamalai_k) March 31, 2024

ಆರ್‌ಟಿಐ ಮಾಹಿತಿಯಲ್ಲಿ ಏನಿದೆ?
ಕಚ್ಚತೀವು ಪ್ರದೇಶ ಯಾರಿಗೆ ಸೇರಬೇಕು ಎನ್ನುವುದರ ಬಗ್ಗೆ ಸ್ವಾತಂತ್ರ್ಯ ಸಿಗುವಾಗ ಬ್ರಿಟಿಷರು ನಿರ್ಧಾರ ಮಾಡಿರಲಿಲ್ಲ. ಭಾರತ ತೀರದಿಂದ 20 ಕಿ.ಮೀ ದೂರದಲ್ಲಿರುವ ಕಚ್ಚತೀವು ಪ್ರದೇಶದಲ್ಲಿ ಭಾರತದ ನೌಕಾ ಸೇನೆ ಮಿಲಿಟರಿ ವ್ಯಾಯಾಮ ನಡೆಸಬಾರದು ಎಂದು ಶ್ರೀಲಂಕಾ ಹೇಳಿದಾಗ ಮೊದಲ ಬಾರಿಗೆ ಈ ವಿಚಾರ ಮುನ್ನೆಲೆಗೆ ಬಂತು. 1955 ರಲ್ಲಿ ಸಿಲೋನ್‌ ಏರ್‌ಫೋರ್ಸ್‌ ಈ ದ್ವೀಪದಲ್ಲಿ ವ್ಯಾಯಾಮ ನಡೆಸಿತು.

1961 =ರ ಮೇ 10 ರಂದು ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಈ ವಿಚಾರ ದೊಡ್ಡ ಸಮಸ್ಯೆಯೇ ಅಲ್ಲ ಎಂದು ಹೇಳಿ ತಳ್ಳಿಹಾಕಿದರು. ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಎಂದು  ಟಿಪ್ಪಣಿ ಬರೆದರು.

ನಾನು ಈ ಪುಟ್ಟ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಅನಿರ್ದಿಷ್ಟವಾಗಿ ಬಾಕಿ ಉಳಿದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಚರ್ಚಿಸುವುದು ನನಗೆ ಇಷ್ಟವಿಲ್ಲ ಎಂದು ನೆಹರು ಟಿಪ್ಪಣಿಯಲ್ಲಿ ಉಲ್ಲೇಖಿಸಿದರು.

This is the first part of the chronology of the betrayal of Congress & DMK.

Both these parties chose to align with Sri Lankan interests, handed over Katchatheevu on a silver platter & put to risk the lives & livelihood of our Tamil Fishermen.

This is part 1 of the exposè… https://t.co/rDILjUEUUx pic.twitter.com/QE5xEJMie3

— K.Annamalai (மோடியின் குடும்பம்) (@annamalai_k) March 31, 2024

ನೆಹರು ಅವರ ಟಿಪ್ಪಣಿಯೂ ಆಗಿನ ಕಾಮನ್‌ವೆಲ್ತ್ ಕಾರ್ಯದರ್ಶಿ ವೈ ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ ಟಿಪ್ಪಣಿಯ ಭಾಗವಾಗಿತ್ತು ಮತ್ತು ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ 1968 ರಲ್ಲಿ ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ಹಿನ್ನೆಲೆಯಾಗಿ ಹಂಚಿಕೊಂಡಿದೆ.

ಈ ಪ್ರಕರಣದಲ್ಲಿ ಭಾರತದ ಪರ ಸಾಕ್ಷಗಳು ಗಟ್ಟಿ ಇತ್ತು. ಯಾಕೆಂದರೆ 1875 ರಿಂದ 1948 ರವರೆಗೆ ಈ ಜಾಗದಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿರಲಿಲ್ಲ. ಕಚ್ಚತೀವು ಮತ್ತು ಅದರ ಮೀನುಗಾರಿಕೆಯನ್ನು ನಿರ್ವಹಿಸುವ ಜಮೀನ್ದಾರಿ ಹಕ್ಕುಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ನೀಡಿತ್ತು. ಇದು 1875 ರಿಂದ 1948 ರವರೆಗೆ ಮುಂದುವರೆದಿತ್ತು. ಜಮೀನ್ದಾರಿ ಹಕ್ಕುಗಳನ್ನು ರದ್ದುಪಡಿಸಿದ ನಂತರ ಮದ್ರಾಸ್ ರಾಜ್ಯಕ್ಕೆ ನೀಡಲಾಯಿತು. ಆದಾಗ್ಯೂ ರಾಮನಾಡಿನ ರಾಜನು ಶ್ರೀಲಂಕಾಕ್ಕೆ ತೆರಿಗೆಯನ್ನು ಪಾವತಿಸದೇ ಸ್ವತಂತ್ರವಾಗಿ ತನ್ನ ಜಮೀನ್ದಾರಿ ಹಕ್ಕುಗಳನ್ನು ಚಲಾಯಿಸುತ್ತಿದ್ದ.

ದ್ವೀಪವನ್ನು ಹಸ್ತಾಂತರಿಸುವ ಸಂಬಂಧ ಇಂದಿರಾ ಗಾಂಧಿ ಮತ್ತು ಅವರ ಸಿಲೋನೀಸ್ ಸಹವರ್ತಿ ಡ್ಯೂಡ್ಲಿ ಸೇನಾನಾಯಕ್ ಅವರು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ 1968ರಲ್ಲಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟಿಸಿ ಇಂದಿರಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ವೇಳೆ ಸರ್ಕಾರ ಭಾರತ ಸರ್ಕಾರವು ಸಹಿ ಹಾಕಿರುವುದನ್ನು ನಿರಾಕರಿಸಿತು. ವಿವಾದಿತ ಸ್ಥಳವಾಗಿರುವ ಕಾರಣ ಉತ್ತಮ ದ್ವಿಪಕ್ಷೀಯ ಬಾಂಧವ್ಯದ ಅಗತ್ಯದೊಂದಿಗೆ ಭಾರತದ ಹಕ್ಕು ಸಮತೋಲಿತವಾಗಿರಬೇಕು ಎಂದು ಹೇಳಿತು.  ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

Katchatheevu map

1973ರಲ್ಲಿ ಕೊಲಂಬೋದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಈ ಮಾತುಕತೆ ನಡೆದ ಒಂದು ವರ್ಷದ ನಂತರ ಭಾರತದ ಹಕ್ಕು ಹಿಂಪಡೆಯುವ ನಿರ್ಧಾರವನ್ನು ಜೂನ್ 1974 ರಲ್ಲಿ ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ತಿಳಿಸಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

ಸಭೆಯಲ್ಲಿ ರಾಮನಾಡಿನ ರಾಜನ ಜಮೀನ್ದಾರಿ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿ ಕಚ್ಚತೀವು ಪ್ರದೇಶ ನಮಗೆ ಸೇರಿದ್ದು ಎಂದು ಭಾರತ ಹೇಳಿತ್ತು. ಈ ಸಭೆಯಲ್ಲಿ ಸರಿಯಾದ ಸಾಕ್ಷ್ಯಗಳನ್ನು ತೋರಿಸಲು ವಿಫಲವಾಗಿದ್ದರೂ ದಾಖಲೆ ಆಧಾರದ ಮೇಲೆ ಶ್ರೀಲಂಕಾ ಬಹಳ ನಿರ್ಧಾರಿತ ಸ್ಥಾನವನ್ನು ತೆಗೆದುಕೊಂಡಿತು. ಜಾಫ್ನಾಪಟ್ಟಣದ ಭಾಗವಾಗಿ ಈ ಜಾಗ ತಮ್ಮದು ಎಂದು ಸಾಬೀತುಪಡಿಸಲು ಶ್ರೀಲಂಕಾ ಡಚ್‌, ಬ್ರಿಟಿಷರ ನಕ್ಷೆಯನ್ನು ತೋರಿಸಿತು. ಈ ಕಚ್ಚತೀವು ಮದ್ರಾಸ್‌ ರಾಜ್ಯದ ದ್ವೀಪವಾಗಿತ್ತು, ರಾಮನಾಡಿನ ರಾಜನಿಗೆ ಈ ಜಾಗ ಸೇರಿತ್ತು ಎಂದು ಸಾಬೀತುಪಡಿಸಲು ಗಟ್ಟಿ ಸಾಕ್ಷ್ಯಗಳು ಇದ್ದರೂ ಅದನ್ನು ಸಾಬೀತು ಪಡಿಸುವಲ್ಲಿ ಭಾರತ ವಿಫಲವಾಯಿತು.

ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತ ತೆಗೆದುಕೊಂಡು ಹೋಗಲು ಹಿಂಜರಿಯಿತು. ಸಣ್ಣ ದೇಶಗಳ ಪರ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿತು ಎಂದು ಉಲ್ಲೇಖವಾಗಿರುವ ಅಂಶ ಆರ್‌ಟಿಐ ಮಾಹಿತಿಯಲ್ಲಿದೆ.

Slow claps for Congress!
They willingly gave up #Katchatheevu and had no regrets about it either. Sometimes an MP of the Congress speaks about dividing the nation and sometimes they denigrate Indian culture and traditions. This shows that they are against the unity and integrity…

— Amit Shah (Modi Ka Parivar) (@AmitShah) March 31, 2024

ಕಚ್ಚಾತೀವು ಎಲ್ಲಿದೆ?
ಕಚ್ಚತೀವು ತಮಿಳುನಾಡಿನ ರಾಮನಾಥಪುರಂನ ಈಶಾನ್ಯಕ್ಕೆ ಸುಮಾರು 15 ಮೈಲಿಗಳು (24 ಕಿಲೋಮೀಟರ್) ಮತ್ತು ಶ್ರೀಲಂಕಾದ ಡೆಲ್ಫ್ಟ್ ದ್ವೀಪಗಳ ನೈಋತ್ಯಕ್ಕೆ ಸರಿಸುಮಾರು 14 ಮೈಲಿ (22 ಕಿಲೋಮೀಟರ್) ದೂರದಲ್ಲಿದೆ.

ಈಗ ಯಾಕೆ ಚರ್ಚೆ:
ಭಾರತದ ಸಮುದ್ರ ಗಡಿಯಲ್ಲಿ ಈ ಜಾಗ ಇರುವ ಕಾರಣ ತಮಿಳುನಾಡಿನ ಮೀನುಗಾರರು ಕಚ್ಚತೀವು ಪ್ರದೇಶದ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿರುತ್ತಾರೆ. ಈ ವೇಳೆ ನಮ್ಮ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ ಎಂದು ಆರೋಪಿಸಿ ಲಂಕಾದ ನೌಕಾಸೇನೆ ಮೀನುಗಾರರನ್ನು ಬಂಧಿಸುತ್ತದೆ. 2020 ಮತ್ತು 2022 ರ ನಡುವೆ 501 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಸಂಸತ್ತಿಗೆ ಉತ್ತರ ನೀಡಿತ್ತು.

 

TAGGED:annamalaibjpcongressDMKKatchatheevutamilnaduಅಣ್ಣಾಮಲೈಕಚ್ಚಾತೀವುಕಾಂಗ್ರೆಸ್ಡಿಎಂಕೆತಮಿಳುನಾಡುಬಿಜೆಪಿ
Share This Article
Facebook Whatsapp Whatsapp Telegram

Latest Cinema News

Navya Nair
ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ
Cinema Latest South cinema Top Stories
Pushpa 3
`ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?
Cinema Latest South cinema Top Stories
Bhuvan Ponnanna
ಭುವನ್ ಪೊನ್ನಣ್ಣ ರೀ ಎಂಟ್ರಿಗೆ ಯೋಗರಾಜ್ ಭಟ್ ಸಾಥ್
Cinema Latest Sandalwood Top Stories Uncategorized
Prem
ಶ್ರೀಧರ್ ಸಂಭ್ರಮ್ ಸಂಗೀತದ `ಲೈಫ್ ಟು ಡೇ’ ಹಾಡಿಗೆ ಜೋಗಿ ಪ್ರೇಮ್ ಕಂಠದಾನ
Cinema Latest Sandalwood Top Stories
bhavana ramanna IVF
ನಟಿ ಭಾವನಾ ರಾಮಣ್ಣ ಮಗು ನಿಧನ
Bengaluru City Cinema Latest Main Post Sandalwood

You Might Also Like

CT Ravi 1
Districts

ಸಿಎಂ ಹೊಗಳಿದ ಶಾಂತಿದೂತರಿಂದ ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು: ಸಿಟಿ ರವಿ ಆಕ್ರೋಶ

Public TV
By Public TV
22 minutes ago
Bagalkote Murder
Bagalkot

ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

Public TV
By Public TV
50 minutes ago
Stone throwing during Ganesh Procession Prohibitory order imposed in Maddur till tomorrow morning
Districts

ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

Public TV
By Public TV
1 hour ago
submarine cable 2
Latest

ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತದ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

Public TV
By Public TV
2 hours ago
Lunar Eclipse 4
Latest

ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿ – ಸುದೀರ್ಘ ಚಂದ್ರಗ್ರಹಣ ಮುಕ್ತಾಯ

Public TV
By Public TV
2 hours ago
Stone pelting during Ganesha procession in Madduru Mandya
Districts

ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?