Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರವನ್ನು ನೀವು ನೀಡಿ: ಸುಮಲತಾ

Public TV
Last updated: March 20, 2019 9:38 pm
Public TV
Share
4 Min Read
MND Sumalatha B
SHARE

– ನಾನು ಯಾರೆಂದು ಹೇಳುವ ಸಮಯ ಬಂದಿದೆ
– ರಾಜಕೀಯದಲ್ಲಿ ನನಗೆ ಎಬಿಸಿಡಿಯೂ ಗೊತ್ತಿಲ್ಲ
– ಜನರ ಅಭಿಮಾನಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿಕೊಂಡೆ
– ಕಾಂಗ್ರೆಸ್-ಜೆಡಿಎಸ್‍ಗೆ ತಿರುಗೇಟು ಕೊಟ್ಟ ಸುಮಲತಾ

ಮಂಡ್ಯ: ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ಮಾತುಗಳ ಬಾಣ ಬಿಡಲು ಆರಂಭಿಸಿದರು. ನಾನು ಅಂತಹ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಅವರ ಮಾತುಗಳಿಗೆ ಮತದಾನದ ದಿನ ನೀವು ಉತ್ತರವನ್ನು ನೀಡಬೇಕು ಎಂದು ಸುಮಲತಾ ಹೇಳಿದ್ದಾರೆ.

ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಂಡ್ಯದ ಮೂಲೆ ಮೂಲೆಗೂ ಹೋಗಿ ಜನರನ್ನು ಕೇಳಿದೆ. ನಾನು ರಾಜಕೀಯಕ್ಕೆ ಬರಬಹುದಾ? ಲೋಕಸಭೆಗೆ ನಿಲ್ಲಬಹುದಾ ಎಂದು ಕೇಳಿ ಅಭಿಪ್ರಾಯ ಕಲೆ ಹಾಕಿದೆ. ನೀವು ಯಾವುದೇ ಪಕ್ಷ, ಪಕ್ಷೇತರರಾಗಿ ನಿಂತರೂ ಪರವಾಗಿಲ್ಲ, ಅಂಬರೀಶ್ ಅಣ್ಣನನ್ನ ನೋಡಿ ವೋಟ್ ಹಾಕುತ್ತೇವೆ ಎಂದು ಜಿಲ್ಲೆಯ ಜನತೆ ಹೇಳಿದರು. ಈ ಕಾರಣಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು. ಇದನ್ನು ಓದಿ : ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲು ತೊಳೆದ್ರೂ ಕಡಿಮೆನೇ: ನಟ ದರ್ಶನ್

mnd yash 3

ರಾಜಕೀಯಕ್ಕೆ ಬಂದು ಹೆಸರು ಮಾಡುವ ಆಸೆ ನನಗಿರಲಿಲ್ಲ. ಐದಾರು ಭಾಷೆಗಳಲ್ಲಿ 200 ಚಿತ್ರಗಳನ್ನ ಮಾಡಿದ್ದೇನೆ. ಇವತ್ತಿನ ದಿನ ನನ್ನನ್ನ ನಾನು ಪರಿಚಯ ಮಾಡಿಕೊಳ್ಳಬೇಕು. 40 ವರ್ಷಗಳು ಚಿತ್ರರಂಗದಲ್ಲಿದ್ದೆ. 27 ವರ್ಷಗಳ ಕಾಲ ನಿಮ್ಮ ಅಂಬರೀಶ್ ಅಣ್ಣನ ಧರ್ಮ ಪತ್ನಿಯಾಗಿದ್ದೆ. ಯಾರು ನಾನು ಎನ್ನುವ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಮಯ ಬಂದಿದೆ. ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಈ ಮಣ್ಣಿನ ಸೊಸೆ, ಅಂಬರೀಶ್ ಪತ್ನಿ ಮಂಡ್ಯದ ಹೆಣ್ಣು ಮಗಳು. ಈ ಮಣ್ಣಿನ ಮಗ ಅಭಿಷೇಕ್ ತಾಯಿ ಎಂದು ತಿಳಿಸಿದರು. ಇದನ್ನು ಓದಿ : ನಾವು ಮಾಡೋದು ತಪ್ಪು ಅಂದ್ರೆ ಆ ತಪ್ಪನ್ನೇ ಮಾಡ್ತೀವಿ – ನಮ್ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ: ಯಶ್

ನಾನ್ಯಾರು ಎಂದು ಕೇಳುವವರಿಗೆ ನೀವು ಉತ್ತರ ಕೊಟ್ಟಿದ್ದೀರಿ. ಜೀವನದಲ್ಲಿ ಯಾವ ದಿನ ಬರಬಾರದೆಂದು ಅಂದುಕೊಂಡಿದ್ದೇನೋ ಆ ದಿನ ಬಂದಿತ್ತು. ನಾನು ಕಳೆದ ಮೂರ್ನಾಲ್ಕು ತಿಂಗಳಿಂದ ತುಂಬಾ ಕಷ್ಟದಲ್ಲಿದ್ದೆ. ಆಗ ನೀವು ನನಗೆ ಧೈರ್ಯ ತುಂಬಿದಿರಿ. ಸಾಕಷ್ಟು ವರ್ಷ ಅಂಬರೀಶ್ ಕಾಂಗ್ರೆಸ್‍ಗಾಗಿ ದುಡಿದಿದ್ದರು. ನೀವು ನಮ್ಮನ್ನ ಕೈಬಿಟ್ಟರೆ ನೀವು ಮಂಡ್ಯದ ಸೊಸೆಯಲ್ಲ ಎಂದು ಅಂಬರೀಶ್ ಅಭಿಮಾನಿಗಳು ಹೇಳಿದರು. ಆದರೆ ನನಗೆ ರಾಜಕೀಯಲ್ಲಿ ಎಬಿಸಿಡಿ ಕೂಡ ಗೊತ್ತಿಲ್ಲ ಅಂದರೂ ಬಿಡದೇ ಅಂಬರೀಶಣ್ಣ ಮಾಡಿರುವ ಕೆಲಸಗಳು ಬೆನ್ನಿಗಿವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಂಬರೀಶ್ ಅಭಿಮಾನಿಗಳು ನನ್ನಲ್ಲಿ ಕೇಳಿಕೊಂಡರು ಎಂದು ಸುಮಲತಾ ಹೇಳಿದರು.

MND Sumalatha A

ಅಂಬರೀಶ್ ಅವರನ್ನ ನಂಬಿದ್ದ ಜನತೆ ಪರ ನಿಂತುಕೊಳ್ಳುವುದು ಸರಿ ಅನಿಸಿತು. ಅಂಬರೀಶ್ ಸಾಕಷ್ಟು ವರ್ಷ ಕಾಂಗ್ರೆಸ್‍ಗಾಗಿ ದುಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕದ ತಟ್ಟಿದ್ದೆ. ನಿಮಗೆ ಮಂಡ್ಯ ಬೇಡವೇ? ಯಾಕೆ ಬಿಟ್ಟು ಕೊಡುತ್ತಿರುವಿರಿ ಎಂದು ಕೇಳಿದೆ. ಅದಕ್ಕೆ ಅವರು ಮೈತ್ರಿ ಧರ್ಮದ ಕಥೆ ಹೇಳಿದರು ಎಂದು ತಿಳಿಸಿದರು.

ನಮ್ಮ ಕುಟುಂಬಕ್ಕಿಂತ ಮಂಡ್ಯಕ್ಕೆ ಅಂಬರೀಶ್ ಅವರ ಅಗತ್ಯವಿದೆ. ಅವರಿಗೆ ಹೆಚ್ಚು ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿದೆ. ಆದರೆ ದೇವರಿಗೆ ನನ್ನ ಪ್ರಾರ್ಥನೆ ತಲುಪಲಿಲ್ಲ. ಹೀಗಾಗಿ ಅವರನ್ನ ತನ್ನ ಬಳಿಗೆ ಕರೆದುಕೊಂಡುಬಿಟ್ಟ. ನಾನು ಕಣ್ಣೀರು ಹಾಕುವುದಿಲ್ಲ. ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದು ಹೇಳಿ ಮತದಾರರ ಮನ ಒಲಿಸಲು ಪ್ರಯತ್ನಿಸಿದರು.

mnd sumalatha 5 copy

ನಾನು ಗೆಲುವು ಸಾಧಿಸಿದರೆ ವಿದೇಶಕ್ಕೆ ಹೋಗುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಬರೀಶ್ ಅವರೊಂದಿಗೆ ನಾನು ಎಲ್ಲಾ ದೇಶಗಳನ್ನು ನೋಡಿದ್ದೆ. ಈಗ ಮಂಡ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಅಂಬರೀಶ್ ಅವರ ಪರವಾಗಿ ನಿಂತು ಕೆಲಸ ಮಾಡುವ ಅವಕಾಶ ಕೊಡಿ. ನನಗೆ ಯಾವುದೇ ದುರಾಸೆಯಿಲ್ಲ. ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವುದು ಯಾರನ್ನೂ ವಿರೋಧಿಸಲು ಅಲ್ಲ. ಎದುರು ಹಾಕಿಕೊಳ್ಳಲು ಅಲ್ಲ. ಅಂಬರೀಶ್ ಅವರನ್ನು ಬೆಳೆಸಿದ ಜನತೆಗಾಗಿ ನಾನು ಹೋರಾಡುತ್ತಿರುವೆ ಎಂದು ಕಾಂಗ್ರೆಸ್-ಜೆಡಿಎಸ್‍ಗೆ ಟಾಂಗ್ ಕೊಟ್ಟರು.

AMBAREESH

ಅಂಬರೀಶ್ ಕಲಿಯುಗದ ಕರ್ಣ. ಅವರದ್ದು ಕೊಡುಗೈ. ಅಂಬರೀಶ್ ಯಾವತ್ತೂ ಸ್ವಾರ್ಥ ರಾಜಕಾರಣ, ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಲು ವಿರೋಧಿಗಳಿಗೆ ಅವಕಾಶ ಸಿಗುತ್ತಿಲ್ಲ. ಅವರು ನನ್ನ ವಿರುದ್ಧ ಏನು ಮಾತನಾಡಬೇಕು ಎನ್ನುವುದನ್ನು ಯೋಚಿಸುತ್ತಿದ್ದಾರೆ ಎಂದರು.

ಕೇಬಲ್ ಕಟ್ ಆಗಿರುವ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಜನರ ಹಾಗೂ ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಅವರು ಕಟ್ ಮಾಡಲಿ. ಹೀಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಿಮ್ಮ ನಡುವೆ ಎಷ್ಟೋ ಜನ್ಮಗಳ ಸಂಬಂಧವಿದೆ ಎಂದು ಹೇಳಿದರು.

sumalatha ambareesh 1

ನನ್ನ ಬೆಂಬಲಕ್ಕೆ ರೈತ ಸಂಘಗಳು ಬೆಂಬಲ ನೀಡಿವೆ. ನಾನು ರೈತರ ಪರವಾಗಿ ಪಾರ್ಲಿಮೆಂಟ್‍ನಲ್ಲಿ ಮಾತನಾಡುತ್ತೇನೆ. ರೈತರ ಹೋರಾಟದ ಜೊತೆಗೆ ಇರುತ್ತೇನೆ ಎಂದು ಅವರು ಹೇಳಿದರು.

ಉಸಿರು ಉಸಿರಿನಲ್ಲಿ, ಮನ ಮನದಲ್ಲಿ, ಮನೆ ಮನೆಯಲ್ಲಿ ಅಂಬರೀಶ್ ಅಣ್ಣ ಅಂತಾ ಪೂಜಿಸುತ್ತಿರುವ ಮಂಡ್ಯದ ಜನತೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು. ಇಲ್ಲಿಗೆ ಬಂದಿರುವ ನಟರಾದ ದರ್ಶನ್, ಯಶ್ ಅಭಿಮಾನಿಗಳಿಗೂ ನಮಸ್ಕಾರ  ಎಂದು ಸುಮಲತಾ ಆರಂಭದಲ್ಲಿ ತಿಳಿಸಿ ತಮ್ಮ ಭಾಷಣವನ್ನು ಆರಂಭಿಸಿದರು.

TAGGED:campaignlok sabha 2019 electionmandyaPublic TVSumalatha Ambareeshಕಾಂಗ್ರೆಸ್ಜೆಡಿಎಸ್ಪಬ್ಲಿಕ್ ಟಿವಿಮಂಡ್ಯಲೋಕಸಭಾ ಚುನಾವಣೆ 2019ಸುಮಲತಾ ಅಂಬರೀಶ್
Share This Article
Facebook Whatsapp Whatsapp Telegram

Cinema Updates

Vinod Prabhakar
ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್
Cinema Latest Sandalwood
Allu Arjun 1
ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!
Cinema Latest South cinema Top Stories
Darshan
ಹಳೇ ಕೇಸ್‌ ಕೇಳಿದ ಸುಪ್ರೀಂ – ದರ್ಶನ್‌ಗೆ ಎದುರಾಗುತ್ತಾ ಸಂಕಷ್ಟ?
Cinema Court Latest Main Post National Sandalwood
Anchor Anushree
ಟೆಕ್ಕಿ ಜೊತೆ ಆ.28ಕ್ಕೆ ಅನುಶ್ರೀ ಮದುವೆ!
Cinema Latest Main Post Sandalwood
Darshan Thailand
ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್
Cinema Latest Sandalwood Top Stories

You Might Also Like

Kodagu Landslide 2
Districts

ಮಡಿಕೇರಿಯ ಬೆಟ್ಟದ ನಿವಾಸಿಗಳಿಗೆ ಭೂಕುಸಿತದ ಭೀತಿ – ಡೇಂಜರ್ ಜೋನ್‌ನಲ್ಲಿ 13 ಕುಟುಂಬಗಳು

Public TV
By Public TV
20 minutes ago
Vidhana Soudha
Bengaluru City

ಬೆಂಗಳೂರಿಗರಿಗೆ ಸರ್ಕಾರ ಗುಡ್‌ ನ್ಯೂಸ್‌ – ಎ ಖಾತಾದಂತೆ ಬಿ ಖಾತೆಗಳಿಗೂ ಅಧಿಕೃತ ಮಾನ್ಯತೆ

Public TV
By Public TV
28 minutes ago
JDU Rajkishor Nishad
Crime

ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ

Public TV
By Public TV
29 minutes ago
Shimla Himachal Pradesh Rain Flood
Districts

ಹಿಮಾಚಲ – ಭಾರೀ ಮಳೆಗೆ ಒಂದು ತಿಂಗಳಲ್ಲಿ 109 ಮಂದಿ ಸಾವು

Public TV
By Public TV
1 hour ago
Vijayapura Arrest
Crime

ಭೀಮಾತೀರದ ಹಂತಕನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಕೇಸ್ – ಪರಾರಿಯಾಗಿದ್ದ ನಾಲ್ವರು ಅರೆಸ್ಟ್

Public TV
By Public TV
1 hour ago
Chinnaswamy Stadium Stampede
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ಆರ್‌ಸಿಬಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?