ಬೆಂಗಳೂರು: ಯುಗಾದಿ ಹಬ್ಬದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹಿಣಿಯೊಂದು ಮೃತಪಟ್ಟಿದೆ.
ಇಲ್ಲಿನ ಸಿಂಹ ಸಫಾರಿಯಲ್ಲಿದ್ದ 25 ವರ್ಷ ವಯಸ್ಸಿನ ಸಿಂಹಿಣಿ ಮೃತಪಟ್ಟಿದ್ದು, ವಯೋಸಹಜ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ತಿಳಿಸಿದ್ದಾರೆ.
ಸಿಂಹಿಣಿಯನ್ನು 8 ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಪ್ರಾಣಿ ವಿನಿಮಯದಡಿಯಲ್ಲಿ ಬನ್ನೇರುಘಟ್ಟಕ್ಕೆ ತರಲಾಗಿತ್ತು. ಈಗಾಗಲೇ ಜೈವಿಕ ಉದ್ಯಾನವನದಲ್ಲಿ ಹಲವು ಪ್ರಾಣಿಗಳು ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಕಾರಣವಾಗಿದ್ದು, ಇದೀಗ ಸಿಂಹಿಣಿ ಸಾವು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.