ಚಾಮರಾಜನಗರ: ಸೈನಿಕರ ದಾಳಿ ಬಗ್ಗೆ ಪ್ರಶ್ನೆ ಮಾಡಿದ ಯುವಕನಿಗೆ ಧರ್ಮದೇಟು ನೀಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಪ್ರಕಾಶ್ ಗೌಡ ಪೋಸ್ಟ್ ಹಾಕಿದ ವ್ಯಕ್ತಿ. ಪ್ರಕಾಶ್ ತನ್ನ ಫೇಸ್ಬುಕ್ ಖಾತೆಯಲ್ಲಿ, ಎಲ್ರೋ 300 ಹೆಣ ಬೀಳಿಸಿದ್ದೀವಿ ಎಂದು ಟಾಂಟಾಂ ಹೋಡ್ಕೋತಾ ಇದ್ರಲ್ಲ. ಈಗ ನೋಡಿದ್ರೆ ಒಂದು ಪಾಕಿಸ್ತಾನಿ ಹೆಣವೂ ಇಲ್ಲ. ಅಲ್ಲಿನ ಸಂತ್ರಸ್ತರು ಯಾರು ಚಚ್ಚಿಕೊಂಡು ಅಳುತ್ತನೂ ಇಲ್ವಲ್ರೋ ಎಂದು ಬರೆದುಕೊಂಡಿದ್ದಾನೆ.
ಪ್ರಕಾಶ್ ಗೌಡನ ಪೋಸ್ಟ್ ನೋಡಿ ಯುವಕರು ರೊಚ್ಚಿಗೆದ್ದು ಆತನಿಗೆ ಧರ್ಮದೇಟು ನೀಡಿದ್ದಾರೆ. ನಂತರ ಯುವಕರು, ಪ್ರಕಾಶ್ನನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಈ ಪೋಸ್ಟ್ ನಲ್ಲಿ ದೇಶದ್ರೋಹಿ ಹೇಳಿಕೆ ಕಾಣಿಸುತ್ತಿಲ್ಲ. ಹೀಗಾಗಿ ಎಫ್ಐಆರ್ ಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv