ವಿಜಯಪುರ: ಸಾಲ ಕೊಟ್ಟಿರುವ ಹಣ ವಾಪಸ್ಸು ಕೇಳಿದಕ್ಕೆ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಶಿಕಾರ ಖಾನ್ದಲ್ಲಿ ಘಟನೆ ನಡೆದಿದೆ.
ಭಾಗ್ಯಜ್ಯೋತಿ ಮಣ್ಣೂರ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ. ಸಂತೋಷ ಹಳ್ಯಾಳ್, ದಯಾನಂದ ಹಳ್ಯಾಳ, ರಚಿತಾ ಹಾಳ್ಯಾಳ್ ಹಲ್ಲೆಗೈದಿದ್ದಾರೆ ಎಂದು ಭಾಗ್ಯಜ್ಯೋತಿ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: ಒಡಿಶಾ ಸಿಎಂ ಬೆಂಗಾವಲು ವಾಹನ ಮೇಲೆ ಮೊಟ್ಟೆ ಎಸೆತ- ವೈರಲ್ ವೀಡಿಯೋ
ಹಲ್ಲೆಗೊಳಗಾದ ಭಾಗ್ಯಜ್ಯೋತಿ, ರಚಿತಾಗೆ ನಾಲ್ಕು ಲಕ್ಷ ಹಣ ನೀಡಿದ್ದಾರಂತೆ. ಆ ಹಣ ವಾಪಸ್ ಕೇಳೋದಕ್ಕೆ ಹೋಗಿದ್ದಾರೆ. ಈ ವೇಳೆಯಲ್ಲಿ ಮೂವರು ಸೇರಿಕೊಂಡು ಮನಬಂದಂತೆ ಹಲ್ಲೆಗೈದಿದ್ದಾರೆಂದು ಭಾಗ್ಯಜ್ಯೋತಿ ಆರೋಪಿಸುತ್ತಿದ್ದಾರೆ. ಗೋಲಗುಂಬಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ