ಬೆಳಗಾವಿ/ಚಿಕ್ಕೋಡಿ: ನಾಯಿಯ ಬಾಯಿಗೆ ಸಿಕ್ಕಿ ನರಳುತ್ತಿದ್ದ ಬೆಳ್ಳಕ್ಕಿಯೊಂದನ್ನು ರಕ್ಷಿಸಿ ರೈತರೊಬ್ಬರು ಮಾನವೀಯತೆ ಮೆರೆದ ಸಂಗತಿಯೊಂದು ಬೆಳಗಾವಿ ಜಿಲ್ಲೆ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ನಡೆದಿದೆ.
ಬೆಳ್ಳಕ್ಕಿಯೊಂದು ಆಹಾರ ಹುಡುಕಿಕೊಂಡು ಹೊಲಕ್ಕೆ ಬಂದಾಗ ನಾಯಿಯೊಂದು ಅದನ್ನು ಹಿಡಿದಿತ್ತು. ಇದನ್ನು ಗಮನಿಸಿದ ರೈತ ಶಾನೋರ ನದಾರ್ಫ್ ನಾಯಿಯ ಬಾಯಿಯಿಂದ ಬೆಳಕ್ಕಿಯನ್ನು ರಕ್ಷಿಸಿದ್ದಾರೆ. ನಂತರ ಅದಕ್ಕೆ ಆರೈಕೆ ಮಾಡಿ, ನೀರು ಕುಡಿಸಿದ್ದಾರೆ.
ಕೆಲ ಸಮಯದ ನಂತರ ಹಕ್ಕಿಯನ್ನು ಹಾರಲು ಬಿಟ್ಟಾಗ ಬೆಳ್ಳಕ್ಕಿ ಅಲ್ಲಿಯೇ ಮೂರ್ನಾಲ್ಕು ಸುತ್ತು ತಿರುಗಿ ಕೃತಜ್ಞತೆ ಸಲ್ಲಿಸಿದೆ. ಈ ಅಪರೂಪದ ಪ್ರಸಂಗ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆರೆದಿದ್ದವರಿಗೆ ಅಚ್ಚರಿ ಉಂಟಾಗಿದೆ.