ಬೆಂಗಳೂರು: ರಾಜ್ಯದ ದೇವರುಗಳಲ್ಲಿ ಶ್ರೀಮಂತ ದೇವರ ಪಟ್ಟಿಯನ್ನು ಮುಜರಾಯಿ ಇಲಾಖೆ ರಿಲೀಸ್ ಮಾಡಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ನಂಬರ್ ಒನ್ ಶ್ರೀಮಂತ ದೇವರು ಅಂತಾ ಮುಜರಾಯಿ ಇಲಾಖೆ ಕ್ರೆಡಿಟ್ ಕೊಟ್ಟಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಎರಡನೇ ಸ್ಥಾನದಲ್ಲಿದ್ದು, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ತೃತೀಯ ಸ್ಥಾನದಲ್ಲಿದೆ. ದಾಖಲೆಯ ಮಟ್ಟದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಹುಂಡಿಯ ದುಡ್ಡು ಸಂಗ್ರಹವಾಗಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ನಾಲ್ಕನೆಯ ಸ್ಥಾನದಲ್ಲಿದ್ರೇ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಸ್ಥಾನ ಐದನೆಯ ಶ್ರೀಮಂತ ದೇವಸ್ಥಾನವಾಗಿದೆ.
ಬೆಂಗಳೂರಿನ ಬನಶಂಕರಿ ದೇಗುಲ ಒಂಬತ್ತನೇಯ ಶ್ರೀಮಂತ ದೇವಸ್ಥಾನವಾಗಿದೆ. ಇನ್ನು ದೇಗುಲದದಲ್ಲಿ ಸಂಗ್ರಹವಾದ ಹುಂಡಿ ಹಣದಲ್ಲಿ ಶೇ.60ರಷ್ಟು ದೇಗುಲದ ಅಭಿವೃದ್ಧಿಗೆ ಬಳಸಲಾಗಿದೆ ಅಂತಾ ಮುಜರಾಯಿ ಲೆಕ್ಕ ಕೊಟ್ಟಿದೆ.
1. ಕುಕ್ಕೆ ಸುಬ್ರಹ್ಮಣ್ಯ – 95,92,54,363 ರೂ.
2. ಕೊಲ್ಲೂರು ಮೂಕಾಂಬಿಕೆ – 43,92,09,926 ರೂ.
3. ಚಾಮುಂಡೇಶ್ವರಿ ದೇಗುಲ – 30,40,07,300 ರೂ.
4. ದುರ್ಗಾಪರಮೇಶ್ವರಿ ದೇಗುಲ-23,91,59,886 ರೂ.
5. ಶ್ರೀಕಂಠೇಶ್ವರ ನಂಜನಗೂಡು-19,98,16,618.65 ರೂ.
6. ಬೆಂಗಳೂರು ಬನಶಂಕರಿ- 8,53,77,373 ರೂ.