ಬೀದರ್: ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಗಡಿ ಜಿಲ್ಲೆ ಬೀದರ್ ಸಾಕ್ಷಿಯಾಗಿದ್ದು, ಬೇವಿನ ಮರದಿಂದ ನಿರಂತರವಾಗಿ ಹಾಲಿನಂತಹ ದ್ರವ ಸುರಿಯುತ್ತಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಹೊಡ್ಡರ ಹೊಣಿಯಲ್ಲಿ ಘಟನೆ ನಡೆದಿದ್ದು, ಬೇವಿನ ಮರದಲ್ಲಿ ಹಲವು ದಿನಗಳಿಂದ ಬಿಳಿ ಬಣ್ಣದ ಹಾಲಿನಂತ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ.
ಪ್ರಕೃತಿಯ ವಿಸ್ಮಯವನ್ನು ನೋಡಲು ಪ್ರತಿದಿನ ಜಿಲ್ಲೆಯ ಮೂಲೆ ಮೂಲೆಗಳಿಂದ ನೂರಾರು ಜನ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ದೈವರ ಪವಾಡವೆಂದು ನಂಬಿರುವ ಕೆಲವರು ಮರಕ್ಕೆ ಪೂಜೆ ಮಾಡುತ್ತಿದ್ದಾರೆ. ಸಾಲದಕ್ಕೆ ಬೇವಿನ ಮರಕ್ಕೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರ ಹಾಕಿ ವಿಸ್ಮಯ ನೋಡಲು ಬಂದ ಎಲ್ಲರಿಗೂ ತೀರ್ಥ, ಪ್ರಸಾದಗಳನ್ನು ನೀಡುತ್ತಿದ್ದಾರೆ.
ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.