ಬೆಂಗಳೂರು: ಬೇಸಿಗೆಯ ಬಿರುಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿಗೆ (Bengaluru) ವರುಣ ಸಿಂಚನವಾಗಿದೆ. ನಗರದ ಹಲವೆಡೆ ಇಂದು (ಮಂಗಳವಾರ) ಮಳೆಯಾಗಿದ್ದು, ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ.
ಬಿರು ಬಿಸಿಲಿನಿಂದ ಬೇಯುತ್ತಿದ್ದ ಬೆಂದಕಾಳೂರಿನ ಜನರಿಗೆ ಮಳೆಯು ತಂಪು-ತಂಪು, ಕೂಲ್ ಕೂಲ್ ಅನುಭವ ನೀಡಿದೆ. ಇದನ್ನೂ ಓದಿ: ಆಸ್ಪತ್ರೆಯ ಡ್ರೆಸ್ ರೂಮ್ನಲ್ಲಿ ಕ್ಯಾಮೆರಾ ಇರಿಸಿದ್ದ ಟ್ರೈನಿ ನರ್ಸ್ ಅರೆಸ್ಟ್!
ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಆನಂದ್ ರಾವ್ ಸರ್ಕಲ್, ಕೆ.ಜಿ ರೋಡ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ಇದನ್ನೂ ಓದಿ: ಈ ವರ್ಷ ನಬಾರ್ಡ್ನಿಂದ ರಾಜ್ಯಕ್ಕೆ ಕಡಿಮೆ ಅನುದಾನ – ಕೆ.ಎನ್ ರಾಜಣ್ಣ ಅಸಮಾಧಾನ
ಸಂಜೆ ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದವರಿಗೆ ವರುಣ ದೇವ ಮಳೆಯ ಸ್ವಾಗತ ನೀಡಿದ್ದಾನೆ. ಆದ್ರೆ ಏಕಾಏಕಿ ಬಂದ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಹಲವಡೆ ಟ್ರಾಫಿಕ್ ಜಾಮ್ ಉಂಟಾಗಿದೆ.