ಶಾಲಾ ಪಠ್ಯದಲ್ಲಿ ವ್ಯವಸಾಯ ಶಾಸ್ತ್ರ ಸೇರಿಸಿ, ನಿರುದ್ಯೋಗ ಓಡಿಸಿ – ರೈತನ ಮಗನ ಪತ್ರ ವೈರಲ್

Public TV
1 Min Read
farmer

ಬೆಂಗಳೂರು: ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಹಲವು ವಿಧಾನಗಳಲ್ಲಿ ಸಾರ್ವಜನಿಕರು, ರೈತರು ಸರ್ಕಾರಕ್ಕೆ ಪತ್ರಗಳನ್ನ ಬರೆಯುವುದನ್ನ ನೋಡಿದ್ದೇವೆ. ಆದರೆ ರೈತರ ಮಗನೋರ್ವ ಪತ್ರದ ಮೂಲಕ ಒಂದು ವಿಶೇಷ ಒತ್ತಾಯ ಮಾಡಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪತ್ರದಲ್ಲಿ ವಿನಂತಿ ಮಾಡಿರುವ ವಿಷಯ ನಿಜಕ್ಕೂ ವಿಷೇಶವಾಗಿದ್ದು, ಶಾಲಾ ಪಠ್ಯಪುಸ್ತಕಗಳಲ್ಲಿ ಗಣಿತ ಶಾಸ್ತ್ರ, ವಿಜ್ಞಾನ, ಸಮಾಜಶಾಸ್ತ್ರ ಇರುವಂತೆ ವ್ಯವಸಾಯ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಸೇರಿಸಿ. ಹೀಗೆ ಮಾಡುವುದರಿಂದ ಈಗಿನ ಮಕ್ಕಳಲ್ಲಿ ಕೃಷಿ ಬಗ್ಗೆ ತಿಳುವಳುಕೆ ಮೂಡುತ್ತೆ. ಮಕ್ಕಳು ಬೆಳೆದಂತೆ ಆಸಕ್ತಿ ಇರೋರು ವ್ಯವಸಾಯಕ್ಕೆ ಬರುತ್ತಾರೆ. ಇದರಿಂದ ನಿರುದ್ಯೋಗದ ಸಮಸ್ಯೆ ಸಹ ಬಗೆಹರಿಯುತ್ತೆ. ಜೊತೆಗೆ ಮಕ್ಕಳಿಗೆ ವ್ಯವಸಾಯ ಏನು ಎನ್ನುವ ತಿಳುವಳಿಕೆ ಮೂಡುತ್ತೆ ಎಂದು ಪತ್ರದಲ್ಲಿ ಬರೆಯಲಾಗಿದೆ.

WhatsApp Image 2020 02 09 at 10.26.14 AM

ಈಗಾಗಲೇ ಹಳ್ಳಿಗಳನ್ನ ತೊರೆದು ಯುವಕರು ಕೆಲಸ ಅರಸಿ ಸಿಟಿಗಳನ್ನು ಸೇರಾಗಿದೆ. ಈ ರೀತಿ ಮುಂದುವರಿದರೆ ಎಲ್ಲರೂ ಕಷ್ಟಕ್ಕೆ ಸಿಲುಕಬೇಕಾಗುತ್ತೆ. ಆದ್ದರಿಂದ ಕೃಷಿ ಬಗ್ಗೆ ತಿಳುವಳಿಕೆಯನ್ನ ಶಾಲಾ ಪಠ್ಯಗಳಿಂದ ನೀಡಬೇಕು ಎಂಬ ಒತ್ತಾಯದ ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಪತ್ರ ಯಾರೇ ಬರೆದಿದ್ದರೂ ಉದ್ದೇಶ ಮಾತ್ರ ಒಳ್ಳೆಯದ್ದಾಗಿದೆ ಎಂದು ನೆಟ್ಟಿಗರು ಪತ್ರದ ವಿಷಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

farmer 1

Share This Article