ರಾಯಚೂರು: ಗಂಡಸರು ಹೊಡೆದಾಡಿದ್ರೆ ಗಂಡಸರನ್ನ ಕಳಿಸಬಹುದು, ಹೆಂಗಸರು ಹೊಡೆದಾಡಿದ್ರೆ ಹೆಂಗಸರನ್ನ ಕಳಿಸಬಹುದು. ಈ ಮಂಗಳಮುಖಿಯರು ಹೊಡೆದಾಡಿದ್ರೆ ನಾನು ಯಾರನ್ನ ಕಳುಹಿಸಲಿ? ಬಿಜೆಪಿಯವರೇ ಮಂಗಳಮುಖಿಯರು, ಏನೋ ಬಸ್ಯಾ ಅಂತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಅವರಿಂದು ರಾಯಚೂರಿನಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮೇಕಪ್ ಮಾಡಿ ಸರ್ಕಾರ ತಂದ್ರು, ಪಾಪ ಬೊಮ್ಮಾಯಿಗೆ ಸಿಎಂ ಸ್ಥಾನ ಕೊಟ್ರು. ಸಚಿವ ಸಂಪುಟ ವಿಸ್ತರಣೆ ಮಾಡಲು, ಬಿಡ್ತಿಲ್ಲ. ಈ ಗುಲಾಮಗಿರಿಯಿಂದ ಹೊರಬರಲು ಜನ ಪ್ರಾದೇಶಿಕ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ
ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲದಕ್ಕೂ ಹೈಕಮಾಂಡ್ ಮುಂದೆ ಕೈ ಕಟ್ಟಿ ನಿಲ್ಲಬೇಕು. ನಮ್ಮ ಪಕ್ಷದಲ್ಲಿ ದೇವೇಗೌಡರೇ ಹೈಕಮಾಂಡ್ ಇಲ್ಲಿಯೇ ಸಿಗುತ್ತಾರೆ. ದೇವೇಗೌಡರ ನೀರಾವರಿ ಕೊಡುಗೆ ಜನತೆ ಮರೆತಿಲ್ಲ ಎಂದು ಹೇಳಿದ್ದಾರೆ.